ಗಂಡು ಮಗು ಪತ್ತೆ ಪ್ರಕರಣದ 25,000 ನಗದು ಬಹುಮಾನ ಯಾರಿಗೆ ನೀಡುತ್ತೆ ದಾವಣಗೆರೆ ಪೋಲೀಸ್.!?

baby boy found prize money

 

ದಾವಣಗೆರೆ: ಅಪಹರಣಕ್ಕೊಳಗಾದ ಒಂದು ದಿನದ ಗಂಡು ಮಗು ಮತ್ತು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯಿಂದ 25,000/- ರೂಗಳ ನಗದು ಬಹುಮಾನ ಘೋಷಣೆ ಮಾಡಲಾಗಿತ್ತು.

ಶಂಕಿತ ಆರೋಪಿತ ಮಹಿಳೆಯ ಮಗಳು ಬೆಂಗಳೂರಿನಿಂದ ದಾವಣಗೆರೆಗೆ ಮಗುವನ್ನು ಕರೆದುಕೊಂಡು ಬಂದು ಹೈಸ್ಕೂಲ್ ಮೈದಾನದಲ್ಲಿರುವ ಅಂಗಡಿಯ ವೃದ್ದೆಯ ಬಳಿ ಕೊಟ್ಟು ಹೋಗಿದ್ದರು, ಆ ವೃದ್ದೆ ತನ್ನ ಮಗನ ಜೊತೆ ನಗರದ ಬಡಾವಣೆ ಠಾಣೆಗೆ ತಂದು ಮಗುವನ್ನ ಒಪ್ಪಿಸಿದ್ದರು, ನಂತರ ಮಗುವನ್ನ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ದಾಖಲಿಸಿ ತನಿಖೆ ನಡೆಸಿದ ನಂತರ ಗೊತ್ತಾಯ್ತು ಇದೇ ಮಗು ಅಪಹರಣವಾಗಿದ್ದ ಮಗು ಎಂದು, ನಂತರ ಮಗುವನ್ನ ತಂದೆ ತಾಯಿಗೆ ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಸ್ತಾಂತರಿಸಲಾಯಿತ್ತು.

ಆದ್ರೆ ಈ ಹಿಂದೆ ಪೊಲೀಸ್ ಇಲಾಖೆ ಈ ಪ್ರಕರಣದಲ್ಲಿ ಅಪಹರಣ ಕ್ಕೊಳಗಾದ ಒಂದು ದಿನದ ಗಂಡು ಮಗು ಮತ್ತು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ ಸಾರ್ವಜನಿಕರಿಗೆ 25,000/- ರೂಗಳ ನಗದು ಬಹುಮಾನವನ್ನು ಘೋಷಣೆ ಮಾಡಲಾಗಿತ್ತು. ಆದರೆ ಆ ವೃದ್ದೆ ಹಾಗೂ ಆಕೆಯ ಮಗನನ್ನ ಸೌಜನ್ಯಕ್ಕಾದರೂ ಸನ್ಮಾನಿಸದೆ ಇರುವಿದರಿಂದ ನೊಂದಿದ್ದಾರೆ ಆ ವೃದ್ದೆ.

ಈ ಬಹುಮಾನದ ಹಣವನ್ನು ಅಂಗಡಿಯ ವೃದ್ದೆಗೆ ಹಾಗೂ ತನಿಖೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಮೂವರು ಪೊಲೀಸ್ ಪೇದೆಗಳಿಗೆ ನೀಡುವಂತೆ ಸಾರ್ವಜನಿಕ ವಲಯದಲ್ಲಿ ಇದೀಗ ಚರ್ಚೆಯಾಗುತ್ತಿದೆ.

ದಿನಾಂಕ 17-03-2022 ರಂದು ಪಿರ್ಯಾದಿಯಾದ ಇಸ್ಮಾಯಿಲ್ ತಂದೆ ಕಟ್ಟಬಾವಿ ಜಮಾಲ್ ರಾಜ್ ಗುಂಡಿನ ಕೆರೆ, ಹರಪನಹಳ್ಳಿ ತಾ|| ರವರು ಠಾಣೆಗೆ ಹಾಜರಾಗಿ ದಿನಾಂಕ 15-03-2022 ರಂದು ಮದ್ಯಾಹ್ನ 2.30 ಗಂಟೆ ಸಮಯದಲ್ಲ. 108 ಅಂಬುಲೆನ್ಸ್ ನಲ್ಲಿ. ತನ್ನ ಹೆಂಡತಿಯಾದ ಸಲ್ಮಾಳನ್ನು ಹೆರಿಗೆಗಾಗಿ ದಾವಣಗೆರೆ ಚಾಮರಾಜ ಪೇಟೆ ಸರ್ಕಲ್ ನಲ್ಲಿರುವ ಮಹಿಳಾ & ಮಕ್ಕಳ ಹಳೆ ಹೆರಿಗೆ ಆಸ್ಪತ್ರೆಯಲ್ಲಿ ದಾಖಲಸಿದ್ದು, ಸಂಜೆ ಸಿಜೆರಿನ್ ಮಾಡಿದಾಗ ಗಂಡು ಮಗು ಜನಿಸಿತ್ತು.

ಸದರಿ ಮಗುವನ್ನು ರಾತ್ರಿ ಸುಮಾರು 8.45 ಗಂಟೆಗೆ ಆಸ್ಪತ್ರೆಯ ನರ್ಸ್ ರವರು ಮಗುವನ್ನು ಪಾಲಕರಾದ ನಮಗೆ ಕೊಡದೇ ಬೇರೆಯವರಿಗೆ ಕೊಟ್ಟಿರುತ್ತಾರೆ. ಆದ್ದರಿಂದ ನನ್ನ ಮಗುವನ್ನು ತೆಗೆದುಕೊಂಡು ಹೋಗಿರುವ ಮಹಿಳೆ ಮೇಲೆ ಹಾಗೂ ಆಸ್ಪತ್ರೆಯ ಅಧಿಕಾರಿ  ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಅಂತ ಇದ್ದ ದೂರಿನ ಮೇರೆಗೆ ದಾವಣಗೆರೆ ಮಹಿಳಾ ತಾನೆ ಗುನ್ನೆ ನಂ-47/2022 ಕಲಂ 363  ರೀತ್ಯಾ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಂಡಿತ್ತು.

ಸದರಿ ಪ್ರಕರಣದಲ್ಲಿ ಅಪಹರಣ ಕ್ಕೊಳಗಾದ ಒಂದು ದಿನದ ಗಂಡು ಮಗು ಮತ್ತು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯಿಂದ ಶ್ರೀ ಸಿ.ಬಿ ರಿಷ್ಯಂತ್ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ದಾವಣಗೆರೆ ಜಿಲ್ಲೆರವರು 25,000/- ರೂಗಳ ನಗದು ಬಹುಮಾನವನ್ನು ಘೋಷಣೆ ಮಾಡಲಾಗಿತ್ತು.

ಹೆರಿಗೆ ಬಳಿಕ ಸಂಬಂಧಿಕರ ಕೈಗೆ ಮಗು ಕೊಡುವುದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿದ್ದರಂತೆ. ಹೆರಿಗೆ ಬಳಿಕ ತಂದೆ ಇಸ್ಮಾಯಿಲ್ ಜಬೀವುಲ್ಲಾನಿಗೆ ಶಿಶುವಿಗಾಗಿ ಬಟ್ಟೆ ತರಲು ಸಿಬ್ಬಂದಿ ಹೇಳಿದ್ದು, ಅವರು ಬಟ್ಟೆ ತರುವಷ್ಟರಲ್ಲಿ ಮಕ್ಕಳ ತೀವ್ರ ನಿಗಾ ಘಟಕದಲ್ಲಿದ್ದ ಶಿಶು ನಾಪತ್ತೆಯಾಗಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು ಅಲ್ಲದೆ ಆಸ್ಪತ್ರೆ ಮುಂದೆ ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡಿದ್ದರು.

ಇದೇ ವೇಳೆ ಶಿಶುವನ್ನು ಮಹಿಳೆಯೊಬ್ಬಳು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದನ್ನ ಪೊಲೀಸ್ ಇಲಾಖೆ ತನಿಖೆಯನ್ನ ಚುರುಕು ಗೊಳಿಸಿತ್ತು.

ದಾವಣಗೆರೆ ಮಹಿಳಾ ಪೊಲೀಸ್ ಠಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಮಹಿಳೆಯನ್ನು ಕೆಲ ದಿನಗಳ ಹಿಂದೆ ಠಾಣೆಗೆ ಕರೆತಂದು ವಿಚಾರಣೆ ಮಾಡುವ ಕಾಲಕ್ಕೆ ಸದರಿ ಶಂಕಿತ ಶ್ರೀಮತಿ ಗುಲ್ದಾರ್ ಬಾನು ಗಂಡ ಜಿಲಾನಿ, 44 ವರ್ಷ, ಗೃಹಿಣಿ ವಾಸ: 1ನೇ ಮೇನ್, 15ನೇ ಕ್ರಾಸ್ ಆಜಾದ ನಗರ ದಾವಣಗೆರೆ ಇವಳಗೆ ಮೂವರು ಮಕ್ಕಳಿದ್ದು, ಮೊದಲನೇಯವಳು ಫಾನ್ ಖಾನಂ, ಇವಳನ್ನು ಬೆಂಗಳೂರಿನ ವಾಸಿಯಾದ ತೌಸೀಫ್ ಇವರಿಗೆ ಮದುವೆ ಮಾಡಿಕೊಟ್ಟದ್ದು, ಸದರಿಯವರನ್ನು ಮದುವೆಯಾಗಿ ಸುಮಾರು ವರ್ಷಗಳಾದರೂ ಮಕ್ಕಳಾಗದ ಕಾರಣ ಸದರಿ ಶಂಕೀತಳಾದ ಗುಲ್ದಾರ್‌ ಬಾನು ಇವಳು ದಾವಣಗೆರೆ ಚಾಮರಾಜ ಪೇಟೆ ಆಸ್ಪತ್ರೆಗೆ ಹೋಗಿದ್ದು ಆಗ ಆಸ್ಪತ್ರೆಯಲ್ಲಿ ಜನಿಸಿದ ಮಗುವನ್ನು ಅಪಹರಣ ಮಾಡಿಕೊಂಡು ಅಲ್ಲಿಂದ ಬೆಂಗಳೂರಿಗೆ ಹೋಗಿ ತನ್ನ ಮಗಳು ಮತ್ತು ಅಳಿಯನಾದ ಫರಾನ ಖಾನಂ ಮತ್ತು ತೌಸೀಫ್ ಇವರಿಗೆ ಕೊಟ್ಟು ಬಂದಿರುತ್ತೇನೆ ಎಂದು ಹೇಳಿಕೆ ನೀಡಿದ್ದರು.

ನಂತರ ಪೊಲೀಸರು ಆಜಾದ್ ನಗರದಲ್ಲಿ ಬಂದು ಪ್ರತಿಯೊಂದು ಮನೆಯನ್ನು ಚೆಕ್ ಮಾಡಿಕೊಂಡು ಬಂದಾಗ ಶಂಕಿತ ಮಹಿಳೆ ತನ್ನ ಮಗಳಿಗೆ ಪೋನ್ ಮಾಡಿ ಮಗುವನ್ನು ತಂದು ವಾಪಸ್‌ ದಾವಣಗೆರೆ ಬಿಟ್ಟು ಹೋಗು ಅಂತಾ ಹೇಳಿದಾಗ ಶಂಕಿತ ಮಹಿಳೆಯ ಮಗಳು ಬೆಂಗಳೂರಿನಿಂದ ದಾವಣಗೆರೆಗೆ ಮಗುವನ್ನು ಕರೆದುಕೊಂಡು ಬಂದು 20 ದಿನಗಳ ನಂತರ ಬಿಟ್ಟು ಹೋಗಿರುತ್ತಾಳೆ. ಈ ದಿನ ಪತ್ತೆಯಾದ ಮಗುವನ್ನು ಸಿಜಿ ಆಸ್ಪತ್ರೆಯಲ್ಲಿ ಪೋಷಕರ ವಶಕ್ಕೆ ಕೂಡಲಾಗಿರುತ್ತದೆ ಮತ್ತು ಆರೋಪಿತಳ ವಿರುದ್ಧ ಮಾನವ ಕಳ್ಳ ಸಾಗಾಣಿಕೆ ರೀತ್ಯಾ ಸೂಕ್ತ ಕಾನೂನು ಕ್ರಮವನ್ನು ಕೈಗೊಂಡಿರುತ್ತದೆ.

ಸದರಿ ಪ್ರಕರಣದಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರು, ದಾವಣಗೆರೆ ಜಿಲ್ಲೆ, ದಾವಣಗೆರೆ ರವರ ಮತ್ತು ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ದಾವಣಗೆರೆ ಜಿಲ್ಲೆ, ದಾವಣಗೆರೆ ರವರ ಮಾರ್ಗದರ್ಶನದಲ್ಲಿ, ಶ್ರೀ ನರಸಿಂಹ ತಾಮ್ರಧ್ವಜ, ಮಾನ್ಯ ಪೊಲೀಸ್ ಉಪಾಧೀಕ್ಷಕರು, ನಗರ ಉಪ ವಿಭಾಗ, ದಾವಣಗೆರೆ ರವರ ನೇತೃತ್ವದಲ್ಲಿ, ಶ್ರೀಮತಿ ಶಿಲ್ಪಾ.ವೈ.ಎಸ್, ಪಿಐ, ಮಹಿಳಾ ಪೊಲೀಸ್ ಠಾಣೆ, ಸಿಬ್ಬಂದಿಯವರಾದ ಶ್ರೀ ರಸೂಲ್ ಸಾಬ್ ಹಾಗೂ ಶ್ರೀ ಗೋವಿಂದಪ್ಪ ಮುನೇಗೌಡ, ಶ್ರೀ ಗಿರೀಶ್ ಗೌಡ, ಶ್ರೀ ರಾಘವೇಂದ್ರ, ಶಾಂತರಾಜು, ಉಮೇಶ ರವರನ್ನೊಳಗೊಂಡ ತಂಡ ಅಪಹರಣವಾದ ಮಗು ಮತ್ತು ಆರೋಪಿತಳನ್ನು ಪತ್ತೆ ಮಾಡಿದ್ದು, ಸದರಿಯವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಸಿ ಬಿ ರಿಷ್ಯಂತ್ ದಾವಣಗೆರೆ ಜಿಲ್ಲೆ, ಹಾಗೂ ಉಪ ಅಧೀಕ್ಷಕರಾದ ಬಸರಗಿ ಯವರು ದಾವಣಗೆರೆ ರವರು ಪ್ರಸಂಶೆಯನ್ನು ವ್ಯಕ್ತಪಡಿಸಿದ್ದರು.

ಸುದ್ದಿಗಾಗಿ ಸಂಪರ್ಕಿಸಿ ;- garudavoice21@gmail.com 9740365719

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!