ಬಕ್ರೀದ್ ನಂತರ ಟ್ರಿಪಲ್ ರೈಡಿಂಗ್ ಕ್ರಮ ಹೆಚ್ಚಾಗುತ್ತೆ.! ಕಾನೂನು ಬಗ್ಗೆ ಬಯವಿಲ್ಲ – ಅಲೋಕ್ ಕುಮಾರ್

ದಾವಣಗೆರೆ: ಕೋಮುದ್ವೇಷ ಹರಡುವುದು, ಸಂಚಾರಿ ನಿಯಮ ಉಲ್ಲಂಘನೆ ಹಾಗೂ ಹೊಟೇಲ್ ಮತ್ತು ಮಾಲ್ಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸದ ಮಾಲೀಕರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ಜರುಗಿಸಲಿದೆ ಎಂದು ಕಾನೂನು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಹೇಳಿದರು.
ಗುರುವಾರ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಕ್ರೀದ್ ನಂತರ ಪೊಲೀಸ್ ಇಲಾಖೆ ಟ್ರಿಪಲ್ ರೈಡಿಂಗ್ ನಡೆಸುವವರು, ಸಂಜೆ ವೇಳೆ ಬಾರ್ ಗಳ ಬಳಿ ಸೇರಿದಂತೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವವರು ಸೇರಿದಂತೆ ಮಾನವ ತಪಾಸಣೆಯನ್ನು ಮಾಡಲಾಗುತ್ತೆ. ಟ್ರಾಫಿಕ್ ವೈಲೆಷನ್ ಗಳನ್ನ ಮತ್ತಷ್ಟು ಕಾನೂನು ಕ್ರಮಗಳನ್ನು ಬಿಗಿ ಮಾಡಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೋಮುದ್ವೇಷ ಹರಡುವವರ, ಸಂಚಾರಿ ನಿಯಮ ಉಲ್ಲಂಘಿಸುವವರ ಹಾಗೂ ಸೈಬರ್ ಕಳ್ಳತನಗಳ ಬಗ್ಗೆ ಕಠಿಣ ಕ್ರಮ ವಹಿಸಲಿದೆ ಎಂದು ತಿಳಿಸಿದರು.
ಕಾನೂನು ಮಾಡಿರುವುದು ಒಳ್ಳೆಯ ಉದ್ದೇಶದಿಂದ ಆದರೆ ಕೆಲವರು ಅದನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಿಜವಾದ ತೊಂದರೆಗೊಳಗಾದ ವ್ಯಕ್ತಿಗಳಿಗೆ ರಕ್ಷಣೆ ಸಿಗಬೇಕು ಹಾಗೂ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದರು.
ಅಕ್ರಮವಾಗಿ ಡಿಟೆನ್ಷನ್ ಮಾಡುವಾಗ ಲಾಕಪ್ ಡೆತ್ ಗಳು
ನಡೆದಿದ್ದು ಇಂತಹ ಘಟನೆಗಳು ನಡೆಯಬಾರದು, ಇಂತಹ ಪ್ರಕರಣ ನಡೆದರೆ ಗಂಭೀರ ವಾಗಿ ಕ್ರಮಗಳನ್ನ ಜರುಗಿಸಲಾಗುತ್ತೆ, ಪೋಲಿಸ್ ರಿಗೆ ತೊಂದರೆ ಕೊಡುವವರನ್ನ ಶಿಕ್ಷೆಗೆ ಗುರಿಯಾಗಿಸುತ್ತೆವೆ ಎಂದರು.
ರಾಜ್ಯದಲ್ಲಿ ಮಾದಕ ದ್ರವ್ಯಗಳನ್ನು ಮಾರಾಟ ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ಹದ್ದಿನ ಕಣ್ಣನ್ನು ಇಟ್ಟಿದ್ದು, ಶಾಲಾ-ಕಾಲೇಜು ಬಳಿ ಮಾದಕ ದ್ರವ್ಯಗಳನ್ನು ಮಾರುವ ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಲಿದೆ. ಅಲ್ಲದೇ ಈಗಾಗಲೇ ಡ್ರಗ್ಸ್, ಅಫೀಮುಗಳನ್ನು ಮಾರಾಟ ಮಾಡಿ ಸಿಕ್ಕಿ ಬಿದ್ದವರ ನಂತರದಲ್ಲಿ ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಅವರ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಿದೆ ಎಂದರು.
ಅಲ್ಲದೇ, ಮಾದಕ ವಸ್ತುಗಳ ಬಳಕೆ ಪ್ರಕರಣಕ್ಕೆ ಎನ್ ಡಿ ಪಿ ಎಸ್ ಕಾಯ್ದೆ ಸೆಕ್ಷನ್ ೨೭ ಪ್ರಕಾರ ಗ್ರಾಹಕರು ಸಹ ತಪ್ಪಿತಸ್ಥರಾಗುವರು. ಗ್ರಾಹಕರ ವಿರುದ್ದವೂ ಮೊಕದ್ದಮೆ ದಾಖಲು ಮಾಡಲಾಗುವುದು ಎಂದು ತಿಳಿಸಿದರು.
ಈಚೆಗೆ ಸೈಬರ್ ಕಳ್ಳತನಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಜನರು ಕೂಡ ಜಾಗೃತಗೊಳ್ಳಬೇಕಾಗಿದೆ. ಅನಾಮಧೇಯ ದೂರವಾಣಿಗಳ ಕರೆ ಸ್ವೀಕರಿಸಿದ ನಂತರ ಅತ್ಯಂತ ಜಾಗೃತಿಯಿಂದ ಅವರಿಗೆ ಉತ್ತರಿಸುವುದು ಅಥವಾ ಕರೆ ಸ್ವೀಕರಿಸದಿರುವುದು ಉತ್ತಮ ಎಂದರು.
ರಾಜ್ಯದ ಕೆಲ ಭಾಗದಲ್ಲಿ ಕೋಮು, ಜಾತಿ ನಿಂದನೆ, ದೌರ್ಜನ್ಯ ವಿಷಯಕ್ಕೆ ಸಂಬಂಧಿಸಿದಂತೆ ಕೆಲವಾರು ಘಟನೆ ನಡೆಯುವುದ ತಡೆಯಲು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ನಿಗಾವಹಿಸಲಾಗುವುದು. ಈಗ ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ವಿಚಾರದಲ್ಲಿ ಗಲಾಟೆ ನಡೆಯುವುದು ಕಂಡು ಬರುತ್ತಿದೆ. ಹಾಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಳ್ಳುವ ವಿಷಯಗಳ ಬಗ್ಗೆ ನಿಗಾ ವಹಿಸಲಾಗುತ್ತದೆ ಎಂದು ತಿಳಿಸಿದರು.
ಪೂರ್ವ ವಲಯ ಐಜಿಪಿ ತ್ಯಾಗರಾಜನ್, ಎಸ್ ಪಿ ಸಿ.ಬಿ. ರಿಷ್ಯಂತ್, ಚಿತ್ರದುರ್ಗ ಎಸ್ ಪಿ ಪರಶುರಾಮ್, ಎ ಎಸ್ ಪಿ ಕನ್ನಿಕಾ ಸಿಕ್ರಿವಾಲ್ ಸುದ್ದಿ ಗೋಷ್ಠಿಯಲ್ಲಿದ್ದರು.