Uma Prashanth IPS: ಗಾಂಜಾ, ಅಕ್ರಮ ಮಧ್ಯ, ಸಂಚಾರಿ ವ್ಯವಸ್ಥೆ ಬಗ್ಗೆ ದೂರು: ಎಸ್ ಪಿ ಫೋನ್ ಇನ್ ಕಾರ್ಯಕ್ರಮ ಯಶಸ್ವಿ

ದಾವಣಗೆರೆ (Uma Prashanth IPS): ದಿನಾಂಕ: 25-06-2025 ರಂದು ಬೆಳಗ್ಗೆ 11.00 ಗಂಟೆಯಿAದ 12.00 ಗಂಟೆಗೆ ಸಾರ್ವಜನಿಕರೊಂದಿಗೆ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ನಡೆಸಿದ ಪೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪೋನ್ ಮಾಡಿ ತಮ್ಮ ಅನಿಸಿಕೆಗಳನ್ನು ಈ ಕೆಳಗಿನಂತೆ ಹಂಚಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಒಂದು ಗಂಟೆಗಳ ಕಾಲ ನಡೆದ ಪೋನ್ ಇನ್ ಕಾರ್ಯಕ್ರಮದಲ್ಲಿ 46 ಸಾರ್ವಜನಿಕರ ಕೊರತೆಗಳು ಬಂದಿದ್ದು, ಡ್ರಗ್ಸ್ ತಡೆ ಬಗ್ಗೆ, ಸಂಚಾರ ಸಮಸ್ಯಗಳ ಬಗ್ಗೆ, ವೈಯುಕ್ತಿಕ ಸಮಸ್ಯೆಗಳ ಬಗ್ಗೆ, ಅಕ್ರಮ ಮದ್ಯ ಮಾರಾಟ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
1) ನಲ್ಲೂರು ಚನ್ನಗಿರಿಗೆ ಬಸ್ ವ್ಯವಸ್ಥೆ ಸರಿಯಿರುವುದಿಲ್ಲ ಖಾಸಗಿ ಬಸ್ಗಳಲ್ಲಿ ಅತಿ ಹೆಚ್ಚಿನ ಜನರನ್ನು ತುಂಬುತ್ತಾರೆ. ಬಸ್ ವ್ಯವಸ್ಥೆಯನ್ನು ಮಾಡಿಸಬೇಕು ಎಂದು ಕೇಳಿದರು. ಪೊಲೀಸ್ ಅಧೀಕ್ಷಕರು ಮಾತನಾಡಿ ಸಂಬಂಧಪಟ್ಟ ಕೆಎಸ್ಆರ್ಟಿಸಿ ಅಧಿಕಾರಿಗಳ ಜೊತೆ ಪತ್ರ ವ್ಯವಹಾರ ಮಾಡುವುದಾಗಿ ತಿಳಿಸಿರುತ್ತಾರೆ.
2) ನಗರದ ಅಮಾಸೆ ಹೋಟೆಲ್ ಹತ್ತಿರ ಸಿಸಿ ಕ್ಯಾಮಾರ ಅವಶ್ಯಕತೆಯಿದೆ, ರಾತ್ರಿ ಸಮಯದಲ್ಲಿ ರಸ್ತೆ ಬದಿ ಹುಟ್ಟಿದಹಬ್ಬವನ್ನು ಆಚರಣೆ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಮಾಡುತ್ತಾರೆ. ಪೊಲೀಸ್ ಅಧೀಕ್ಷಕರು ಮಾತನಾಡಿ ಸ್ಮಾರ್ಟ್ ಸಿಟಿ ರವರದಿಗೆ ಪತ್ರ ವ್ಯವಹಾರ ಮಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
3) ಭಾನುವಳ್ಳಿ ಗ್ರಾಮದ ಹೊರಗಡೆ ಬ್ರಾಂಡಿ ಶಾಫ್ ಇದ್ದು ಇನ್ನೂ ದೂರ ಸ್ಥಳಾಂತರಿಸಲು ಕೋರಿರುತ್ತಾರೆ. ಪೊಲೀಸ್ ಅಧೀಕ್ಷಕರು ಮಾತನಾಡಿ ಅಬಕಾರಿ ಇಲಾಖೆ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
4) ಹೊಸ ಹರ್ಲಾಪರ ಆಂಜನೇಯ ದೇವಸ್ಥಾನದ ಹತ್ತಿರ ಪುಂಡ ಹುಡುಗರು ಕುಳಿತುಕೊಂಡು ಬಂದು ಹೋಗುವ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಾರೆ. ಪೊಲೀಸ್ ಅಧೀಕ್ಷಕರು ಮಾತನಾಡಿ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
5) ಕಬ್ಬೂರಿನಲ್ಲಿ ಯುವಕರು ಮಧ್ಯಪಾನ ವ್ಯಸನಿಗಳಾಗಿದ್ದು ಅಕ್ರಮವಾಗಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಕೋರಿದ್ದು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧೀಕ್ಷಕರು ತಿಳಿಸಿರುತ್ತಾರೆ.
7) ಕಾರಿಗನೂರಿನಲ್ಲಿ ಶಾಲೆಗಳ ಹತ್ತಿರ ಮಧ್ಯಪಾನ ಮಾರಾಟ ಮಾಡುತ್ತಾರೆ ಕ್ರಮಕೈಗೊಳ್ಳಿ ಅಂತಾ ಹೇಳಿದ್ದು ಪೊಲೀಸ್ ಅಧೀಕ್ಷಕರು ಮಾತನಾಡಿ ಅಕ್ರಮ ಮಧ್ಯ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸೂಚಿಸಿದರು.
8) ಸಿಜಿ ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ ಆಟೋ ಚಾಲಕರು ಬೇಕಾಬಿಟ್ಟಿಯಾಗಿ ಚಾಲನೆ ಮಾಡುತ್ತಾರೆ ಕ್ರಮ ಕೈಗೊಳ್ಳಿ ಅಂತಾ ಕೇಳಿಕೊಂಡರು ಪೊಲೀಸ್ ಅಧೀಕ್ಷಕರು ಮಾತನಾಡಿ ಅಂತ ಆಟೋ ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸೂಚಿಸಿದರು.
9) ನಮ್ಮ ಗ್ರಾಮದಲ್ಲಿ ವೈನ್ ಶಾಫ್ ಇರುವುದರಿಂದ ಯುವಕರು ಮಧ್ಯ ವ್ಯಸನಿಗಳಾಗುತ್ತಿದ್ದಾರೆ ಕ್ರಮ ಕೈಗೊಳ್ಳಿ ಅಂತಾ ಸೂಚಿಸಿದ್ದು ಪೊಲೀಸ್ ಅಧೀಕ್ಷಕರು ಮಾತನಾಡಿ ಸದರಿ ವೈನ್ ಶಾಪ್ ಅಕ್ರಮವಾಗಿ ನಡೆಸುತ್ತಿದ್ದಾರೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
10) ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಚಾಲಕರ ಪೋಟೋ ತೆಗೆದು ಕಮಾಂಡೋ ಸೆಂಟರ್ಗೆ ಕಳುಹಿಸಿರುತ್ತೇನೆ ಕ್ರಮ ಕೈಗೊಂಡಿರುವದಿಲ್ಲ ಅಂತಾ ಹೇಳಿದ್ದು ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಸದರಿ ಪೋಟೋಗಳನ್ನು ನನ್ನ ಮೊಬೈಲ್ಗೆ ಕಳುಹಿಸುವಂತೆ ಸೂಚಿಸಿದರು.
11) ಚಿಕ್ಕ ಹುಡುಗರು ಗಾಂಜಾ ಸೇವನೆ ಮಾಡುತ್ತಿರತ್ತಾರೆ ಅಂತಾ ಹೇಳಿದ್ದು ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಯಾರು ಸೇವೆನೆ ಮಾಡಿರುತ್ತಾರೆ ಮತ್ತು ಎಲ್ಲಿ ಅಂತಾ ನಿಖರವಾಗಿ ತಿಳಿಸದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
12) ನಗರದಲ್ಲಿ ವಾಹನ ಚಾಲಕರು ಸಿಗ್ನಲ್ ಜಂಪ್ ಮಾಡುತ್ತಾರೆ ಮತ್ತು ಬಿಐಇಟಿ ರಸ್ತೆಯಲ್ಲಿ 6 ರಿಂದ 8 ಗಂಟೆಯವರಿಗೆ ಯುವಕರು ಗಾಂಜಾ ಸೇವನೆ ಮಾಡುತ್ತಾರೆ ಕ್ರಮ ಕೈಗೊಳ್ಳಿ ಅಂತಾ ಹೇಳಿದ್ದು ಪೊಲೀಸ್ ಅಧೀಕ್ಷಕರು ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
13) ಗಾಂಜಾ ಸೇವನೆ ಮತ್ತು ಸಾಗಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ದೇವರಾಜ್ ಅರಸ್ ಬಡಾವಣೆಯ ಪೈ-ಓವರ್ ಕೆಳಗಡೆ ಗಾಂಜಾ ಸೇವನೆ ಮಾಡುತ್ತಾರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಿ ಅಂತಾ ಹೇಳಿದ್ದು, ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
14) ನಗರದಲ್ಲಿ ಬಾರ್ಗಳಲ್ಲಿ ಚಿಕ್ಕ ವಯಸ್ಸಿನ ಮಕ್ಕಳಿಗೆ ಮಧ್ಯಪಾನವನ್ನು ಮಾರಾಟ ಮಾಡುತ್ತಾರೆ ಈ ಬಗ್ಗೆ ಕ್ರಮ ಕೈಗೊಳ್ಳಿ ಅಂತಾ ಹೇಳಿದ್ದು, ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಚಿಕ್ಕ ವಯಸ್ಸಿನ ಮಕ್ಕಳಿಗೆ ಮಧ್ಯಪಾನವನ್ನು ಮಾರಾಟ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
15) ಹಿರೇಉಡ ಗ್ರಾಮದಲ್ಲಿ ಅಂಬೇಡ್ಕರ್ ಭವನದ ಜಾಗವಿದ್ದು, ಸದರಿ ಜಾಗದಲ್ಲಿ ಬೇರೆಯವರು ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲು ಹೇಳಿದರು. ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
16) ಮಾಯಕೊಂಡ ಗ್ರಾಮದಲ್ಲಿ ಕುರಿ ಮತ್ತು ಅಡಿಕೆ ಕಳ್ಳತನವಾಗುತ್ತಿದ್ದು ಪತ್ತೆ ಮಾಡಿರುವುದಿಲ್ಲ ಏಕೆ ಅಂತಾ ಕೇಳಿದ್ದು, ಈ ಬಗ್ಗೆ ಪೊಲೀಸ್ ಅಧೀಕ್ಷಕರು ನನ್ನ ಮೊಬೈಲ್ ನಂ ಗೆ ಪ್ರಕರಣದ ಮಾಹಿತಿಯನ್ನು ಕಳುಹಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
17) ಗೌರ್ಮೆಂಟ್ ಹೈಸ್ಕೂಲ್ ಮೈದಾನದ ಕಟ್ಟೆಯ ಮೇಲೆ ಕಾಲೇಜಿಗೆ ಹೋಗದೇ ಕುಳಿರುಕೊಂಡಿರುತ್ತಾರೆ ಕ್ರಮ ಕೈಗೊಳ್ಳಿ ಅಂತಾ ಹೇಳಿದ್ದು, ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಸಂಬಂಧಪಟ್ಟ ಕಾಲೇಜಿನ ಪ್ರಾಚಾರ್ಯರಿಗೆ ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸದರು.
18) ಮಾದಕ ದ್ರವ್ಯಗಳ ವಿರುದ್ಧ ಶಾಲಾ-ಕಾಲೇಜ್ ಮಟ್ಟದಲ್ಲಿ ಅರಿವು ಕಾರ್ಯಕ್ರಮಗಳನ್ನು ಮಾಡಬೇಕಾಗಿ ಹೇಳಿದ್ದು, ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಈಗಾಗಲೇ ಈ ಅರಿವು ಕಾರ್ಯಕ್ರಮಗಳನ್ನು ನಡೆಸುತ್ತಿರುವುದಾಗಿ ತಿಳಿಸಿದರು.
19) ಲಾಯರ್ ರಸ್ತೆ, ಪಿಬಿ ರಸ್ತೆಯಲ್ಲಿ ಶಾಲೆಗೆ ಹೋಗುವ ಮಕ್ಕಳು ಓಡಾಡುತ್ತಿದ್ದು, ಇಲ್ಲಿ ಅತಿ ಹೆಚ್ಚು ವಾಹನ ಸಂಚಾರ ಇರುವುದರಿಂದ ಹಮ್ಸ್ಗಳನ್ನು ಅಳವಡಿಸಲು ತಿಳಿಸಿದರು ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
20) ಹರಿಹರ ನಗರದಲ್ಲಿ ಗಾಂಜಾ ಮಾರಾಟ ಹೆಚ್ಚಾಗುತ್ತಿದ್ದು ಕ್ರಮ ಕೈಗೊಳ್ಳಲು ಹೇಳಿದರು ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಮಾರಾಟ ಮಾಡುವವರ ಮಾಹಿತಿ ಇದ್ದರೆ ಪೊಲೀಸ್ ರೊಂದಿಗೆ ಹಂಚಿಕೊಳ್ಳಲು ತಿಳಿಸಿದರು ಹಾಗೂ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
21) ಕಾಲೇಜುಗಳಲ್ಲಿ, ಸೇಂಟ್ ಜಾನ್ ಸ್ಕೂಲ್, ಟಿವಿ ಸ್ಟೇಷನ್ಗಳ ಹತ್ತಿರ ಗಾಂಜಾ ಸೇವನೆ ಮಾಡುವ ಬಗ್ಗೆ ಮಾಹಿತಿ ಇದ್ದು ಕ್ರಮ ಕೈಗೊಳ್ಳಲು ಹೇಳಿದರು. ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
22) ಕೆಆರ್ ಮಾರುಕಟ್ಟೆಯಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ಹಣ್ಣಿನ ಗಾಡಿ ಮತ್ತು ಅಂಗಡಿಯವರು ಇಟ್ಟಿರುತ್ತಾರೆ ಕ್ರಮ ಕೈಗೊಳ್ಳಿ ಅಂತಾ ಹೇಳಿದರು. ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
23) ಅರಳಿಮರ ಸರ್ಕಲ್ ಬೇತೂರು ರಸ್ತೆಯಲ್ಲಿ ಗಾಂಜಾ ಸೇವನೆ ಮಾಡುತ್ತಾರೆ ಕ್ರಮ ಕೈಗೊಳ್ಳಿ ಅಂತಾ ಹೇಳಿದರು. ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
24) ಎಸ್ಎಸ್ ಆಸ್ಪತ್ರೆಯ ಬೈಪಾಸ್ ಹತ್ತಿರ ತೃತೀಯ ಲಿಂಗಿಗಳು ಅಲ್ಲಿ ಓಡಾಡುವ ಗಂಡು ಮಕ್ಕಳಿಗೆ ತೊಂದರೆ ಮಾಡುತ್ತಾರೆ ಕ್ರಮ ಕೈಗೊಳ್ಳಿ ಅಂತಾ ಹೇಳಿದರು. ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
25) ಮಲೆಬೆನ್ನೂರಿನಲ್ಲಿ ಬಡ್ಡಿ ದಂದೆ, ಅಕ್ರಮ ಅಕ್ಕಿ ವ್ಯಾಪಾರ ನಡೆಯುತ್ತದೆ ಕ್ರಮ ಕೈಗೊಳ್ಳಿ ಅಂತಾ ಹೇಳಿದರು. ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಅಂತಹವರ ಮಾಹಿತಿ ನೀಡದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
26) ಅಪರಾದಗಳು ಹೆಚ್ಚಾಗಲು ಗಾಂಜಾ ಸೇವನೆ ಕಾರಣ ಅಂತ ತಿಳಿಸಿದ್ದು ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ನನ್ನ ಮೊಬೈಲ್ ನಂಬರ್ಗೆ ಮಾಹಿತಿಯನ್ನು ಹಂಚಿಕೊAಡರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
27) ನಲ್ಲೂರಿಗೆ ಪೊಲೀಸ್ ಠಾಣೆ ಬೇಕು ಬಸ್ ಸ್ಟಾö್ಯಂಡ್ ಹತ್ತಿರ ತುಂಬಾ ಟ್ರಾಫಿಕ್ ಜಾಸ್ತಿಯಾಗುತ್ತಿದೆ ಕ್ರಮ ಕೈಗೊಳ್ಳಿ ಅಂತಾ ಹೇಳಿದರು. ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಅಂತಹವರ ಮಾಹಿತಿ ನೀಡದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
28) ಮಲೆಬೆನ್ನೂರಿನಲ್ಲಿ ಗಾಂಜಾ ಜಾಸ್ತಿಯಾಗಿದ್ದು ಕ್ರಮ ಕೈಗೊಳ್ಳಿ ಅಂತಾ ಹೇಳಿದರು. ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಅಂತಹವರ ಮಾಹಿತಿ ನೀಡದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
29) ವಾಹನ ಚಾಲರು ಕುಡಿದು ವಾಹನ ಚಾಲನೆ ಮಾಡುತ್ತಾರೆ ಅಂತಾ ಅಂತಹವರ ಮೇಲೆ ಕ್ರಮ ಕೈಗೊಳ್ಳಿ ಅಂತಾ ಹೇಳಿದರು. ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಅಂತಹವರ ಮಾಹಿತಿ ನೀಡದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
30) ನಮ್ಮ ವ್ಯಾಪ್ತಿಯಲ್ಲಿ ಕಳ್ಳತನವಾಗುತ್ತಿದ್ದು, ಪೊಲೀಸ್ ಗಸ್ತು ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿಸಲು ಹೇಳಿದರು. ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
31) ಎವಿಕೆ ಕಾಲೇಜ್ ರಸ್ತೆ, ಆಸ್ಪತ್ರೆಯ ಹತ್ತಿರ, ಆಸ್ಪತ್ರೆಯ ಪಕ್ಕ ಬಾರ್ ಇದ್ದು ಕ್ರಮ ಕೈಗೊಳ್ಳಿ ಅಂತಾ ಹೇಳಿದರು ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಸಂಬಂಧಪಟ್ಟವರಿಗೆ ದೂರು ನೀಡಿ ನಾವು ಕೂಡ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
32) ಚನ್ನಗಿರಿ ಕಡೆ ಹೋಗುವ ಕೆಎಸ್ಆರ್ಟಿಸಿ ಬಸ್ಗಳಿಗೆ ಬಾಗಿಲುಗಳು ಇರುವುದಿಲ್ಲ ಕ್ರಮ ಕ್ರಮ ಕೈಗೊಳ್ಳಿ ಅಂತಾ ಹೇಳಿದರು ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಕೆಎಸ್ಆರ್ಟಿಸಿ ರವರೊಂದಿಗೆ ಪತ್ರ ವ್ಯವಹಾರ ನಡೆಸಿ ಕೂಡ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
33) ಚನ್ನಗಿರಿ ಬಸ್ ನಿಲ್ದಾಣದಲ್ಲಿ ಚಿತ್ರದುರ್ಗ ಮತ್ತು ಶಿವಮೊಗ್ಗದ ನಡುವೆ ಓಡಾಡುವ ಕೆಎಸ್ಆರ್ಟಿಸಿ ಬಸ್ಗಳಿಗೆ ಬಸ್ ನಿಲ್ದಾಣದ ಒಳಗಡೆ ಹೋಗಲು ಬಿಡದೇ ಇರುವುದರಿಂದ ಬಸ್ಗಳನ್ನು ರಸ್ತೆಯಲ್ಲಿ ನಿಲ್ಲಿಸುವುದರಿಂದ ತೊಂದರೆಯಾಗುತ್ತಿದೆ ಕಡೆಯಿಂದ ಶಿವಮೊಗ್ಗದ ಕಡೆ ಕ್ರಮ ಕೈಗೊಳ್ಳಿ ಅಂತಾ ಹೇಳಿದರು ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
35) ಪಿಬಿ ರಸ್ತೆ, ನಂದಿ ಪೆಟ್ರೋಲ್ ಬಂಕ್ ಹಾಗೂ ಕೆಎಸ್ಆರ್ಟಿಸಿ ಮುಂಭಾಗದಲ್ಲಿ ತುಂಬಾ ಟ್ರಾಫಿಕ್ ಆಗುತ್ತಿದ್ದು, ಕ್ರಮಕೈಗೊಳ್ಳಲು ಹೇಳಿದರು ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
36) ಚನ್ನಗಿರಿ ಕೋಟೆ ಸರಹದ್ದಿನಲ್ಲಿ ಗಾಂಜಾ ಸೇವನೆ ಮಾಡುತ್ತಾರೆ ಕ್ರಮಕೈಗೊಳ್ಳಲು ಹೇಳಿದರು ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಗಾಂಜಾ ಸೇವನೆ ಮಾಡುವವರ ಮಾಹಿತಿಯನ್ನು ನನಗೆ ಹಂಚಿಕೊಂಡರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
37) ನ್ಯಾಮತಿ ತಾಲ್ಲೂಕಿನ ತಾಂಡಗಳಲ್ಲಿ ಅತಿ ಹೆಚ್ಚು ಮಧ್ಯ ಮಾರಾಟ ಮಾಡುತ್ತಿದ್ದು, ಕ್ರಮಕೈಗೊಳ್ಳಲು ಹೇಳಿದರು ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಮಧ್ಯ ಮಾರಾಟ ಮಾಡುವವರ ಮಾಹಿತಿಯನ್ನು ಹಂಚಿಕೊAಡಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
38) ನಗರದ ಹಳೆಯ ಭಾಗದಲ್ಲಿ ಗಾಂಜಾ ಜಾಸ್ತಿ ಇರುತ್ತದೆ ಕ್ರಮಕೈಗೊಳ್ಳಲು ಹೇಳಿದರು ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ನಿಖರವಾದ ಮಾಹಿತಿಯನ್ನು ಹಂಚಿಕೊAಡಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
39) ಡ್ರಗ್ಸ್ ನೆರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬರುತ್ತಿದ್ದು, ನೆರಾಜ್ಯಗಳಿಂದ ಬರುವ ಬಸ್ಗಳನ್ನು ಚಕ್ ಮಾಡಿದ್ದಲ್ಲಿ ಗಾಂಜಾ ಸರಬರಾಜು ಕಡಿವಾಣ ಹಾಕಬಹುದಂತ ಹೇಳಿದರು ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
40) ಸಿದ್ದಗಂಗಾ ಶಾಲೆಯ ಹತ್ತಿರ ಚಿಕ್ಕ ರಸ್ತೆಯಿದ್ದು ಸುಮಾರು 12 ಬಸ್ಗಳು ಓಢಾಡುತ್ತಿದ್ದು, ಅಲ್ಲಿ ಪ್ರೀಯಾಗಿ ಓಡಾಡಲು ಆಗುತ್ತಿಲ್ಲ ಅಲ್ಲಿ ಶಾಲಾ ಸಿಬ್ಬಂದಿಗಳನ್ನು ನೇಮಿಸಲು ತಿಳಿಸಿದರು. ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
41) ಬೈಪಾಸ್ ದೊಣ್ಣೆಹಳ್ಳಿಯ ಹತ್ತಿರ ಕುಡುಕರ ಹಾವಳಿ ಜಾಸ್ತಿಯಾಗಿದ್ದು, ಹೆಗ್ ರೈಸ್ ಅಂಗಡಿ ಅಕ್ಕಪಕ್ಕದ ಅಂಗಡಿಗಳನ್ನು ನಿಲ್ಲಿಸಿ ತೊಂದರೆ ಮಾಡುತ್ತಾರೆ ಕ್ರಮ ಕೈಗೊಳ್ಳಿ ಅಂತಾ ತಿಳಿಸಿದರು. ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
42) ಸಿದ್ಧವೀರಪ್ಪ ಬಡಾವಣೆಯಲ್ಲಿ ಪೊಲೀಸಿನವರು ಬರುತ್ತಿಲ್ಲ ಗಸ್ತಿಗೆ ಪೊಲೀಸ್ರನ್ನು ನೇಮಿಸಿಲು ಹೇಳಿದರು ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
43) ಬಿಐಇಟಿ ಕಾಲೇಜ್ ರಸ್ತೆ ಹಾಗೂ ಮೆಡಿಕಲ್ ಹಾಸ್ಟೆಲ್ಗಳ ಹತ್ತಿರ ಗಾಂಜಾ ಸೇವನೆಯ ಬಗ್ಗೆ ಮಾಹಿತಿ ಇದ್ದು ಅಲ್ಲಿ ನಿಗಾವಹಿಸಿಲು ತಿಳಿಸಿದರು ಈ ಬಗ್ಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
44) 30 ವರ್ಷಗಳಿಂದ ಒಳ್ಳೆಯ ಕಾರ್ಯಗಳನ್ನು ಯಾರೂ ಸಹ ಉತ್ತಮ ಕಾರ್ಯಗಳನ್ನು ಮಾಡಿರುವುದಿಲ್ಲ ನೀವುಗಳು ಉತ್ತಮವಾದ ಕಾರ್ಯವನ್ನು ನಿರ್ವಹಿಸಿರುತ್ತೀರಿ ಅಂತಾ ತಿಳಿಸಿದರು.