ಕೇಂದ್ರ ಬಜೆಟ್ ಶ್ರೀಮಂತರಿಗೆ ಅನುಕೂಲ, ಜನ ಸಾಮಾನ್ಯನಿಗೆ ಯಾವುದೇ ಪ್ರಯೋಜನವಿಲ್ಲ – ಸಾಗರ್ ಎಲ್ ಎಂ ಹೆಚ್

ದಾವಣಗೆರೆ: ಇವತ್ತು ಕೇಂದ್ರ ಸರಕಾರ ಮಂಡಿಸಿದ ಬಜೆಟ್ ನಲ್ಲಿ ಜನ ಸಾಮಾನ್ಯನಿಗೆ ಅನುಕೂಲವಾಗುವ ಯಾವ ಅಂಶವೂ ಒಳಗೊಂಡಿಲ್ಲ,ಬದಲಾಗಿ ಶ್ರೀಮಂತರ ಅನುಕೂಲಕ್ಕಾಗಿ ಮಂಡಿಸಿದಂತಿದೆ ಈ ಬಜೆಟ್.
ಕೇವಲ ಕಾರ್ಪೋರೇಟ್ ತೆರಿಗೆಯನ್ನು ಮಾತ್ರ ಕಡಿಮೆ ಮಾಡಿ,ಜನಸಾಮಾನ್ಯನಿಗೆ ಬೇಕಾದ ಯಾವುದೇ ಯೋಜನೆಗಳನ್ನು ಬಿಡುಗಡೆ ಮಾಡದೆ,ಕೋವಿಡ್ ಗಿರಲಿ,ಬೆಲೆ ನಾಶಕ್ಕೀಡಾದ ರೈತರಿಗಿರಲಿ,ದೇಶದ ರಕ್ಷಣೆಯ ಇಲಾಖೆಗಿರಲಿ ಯಾವುದೇ ಮಹತ್ವದ ಯೋಜನೆಗಳನ್ನು ಒಳಗೊಂಡಿಲ್ಲ
ವರ್ಚುವಲ್ ಹಾಗೂ ಡಿಜಿಟಲ್ ಕರೆನ್ಸಿಯನ್ನು ಕಾನೂನುಬದ್ಧಗೊಳಿಸುವ ಮೂಲಕ ಕಪ್ಪುಹಣವನ್ನು ಬಿಳಿಯನ್ನಾಗಿಸಲು ಪೂರಕವಾದಂತಿದೆ ಈ ಬಜೆಟ್.
ದೇಶದ ಎಪತ್ತೈದು ವರ್ಷಗಳ ಇತಿಹಾಸದಲ್ಲಿ ಇದು ಅತ್ಯಂತ ಕಳಪೆ ಬಜೆಟ್ ಹಿಂದಿನ ಕೇಂದ್ರ ಬಿಜೆಪಿ ಸಮ್ಮಿಶ್ರ ಸರಕಾರದ ಜನವಿರೋಧಿ ಬಜೆಟ್.
ಸಾಗರ.ಎಲ್.ಹೆಚ್
ಜಿಲ್ಲಾ ಉಪಾಧ್ಯಕ್ಷರು
ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ.