ವೈವಿಧ್ಯತೆಯಲ್ಲಿ ಏಕತೆಯೇ ಭಾರತದ ಜೀವಾಳ, ಎಂ.ಪಿ.ಲತಾ ಮಲ್ಲಿಕಾರ್ಜುನ್.

ನಿಟ್ಟೂರು: ಭಾರತ ದೇಶದಲ್ಲಿ ಅನೇಕ ಜಾತಿಗಳು, ಅನೇಕ ಧರ್ಮಗಳು, ಅನೇಕ ಭಾಷೆಗಳು, ಅನೇಕ ಸಾಂಸ್ಕೃತಿಕ ಪರಂಪರೆಗಳಿದ್ದು, ವೈವಿಧ್ಯತೆಯಲ್ಲಿ ಏಕತೆಯೇ ಭಾರತದ ಜೀವಾಳ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು. ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗಣ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ..
ಯೂನಿಟಿ ಇನ್ ಡೈವರ್ಸಿಟಿ ಭಾರತದ ಶಕ್ತಿ .
ಒಂದು ಧರ್ಮ,ಮತ್ತೊಂದು ಧರ್ಮವನ್ನು, ಒಂದು ಭಾಷೆ,ಮತ್ತೊಂದು ಭಾಷೆಯನ್ನು ಪ್ರೀತಿಸೋದಕ್ಕೆ,ಗೌರವಿಸೋದಕ್ಕೆ ಕಾರಣ ಭಾರತದ ಮಣ್ಣಿನ ಗುಣ, ಆ ಮಣ್ಣಿನ ಸೊಗಡು ಮತ್ತು,ಭಾರತದ ಸಾಮಾಜಿಕ ಪರಂಪರೆ ಅರ್ಥೈಸಿಕೊಂಡ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನವನ್ನು ರಚಿಸಿದ್ದಕ್ಕಾಗೇ ಭಾರತ ಸ್ವತಂತ್ರ,ಸಾರ್ವಭೌಮ,ಪ್ರಜಾಸತ್ತಾತ್ಮಕ,ಸಮಾಜವಾದಿ,ಜಾತ್ಯಾತೀತ ರಾಷ್ಟ್ರವಾಗಿ,ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಿ ಹೊರ ಹೊಮ್ಮಿರೋದು ಎಂದರು.
ಭಾರತದ ಸಂವಿಧಾನ ಚಲನಶೀಲವಾಗಿದ್ದು, ನೂರಕ್ಕಿಂತ ಹೆಚ್ಚು ಬಾರಿ ತಿದ್ದುಪಡಿಗೆ ಒಳಗಾಗಿದ್ದರೂ ಕೂಡಾ ತನ್ನ ಮೂಲ ಸ್ವರೂಪಕ್ಕೆ ಧಕ್ಕೆ ಬಾರದ ರೀತಿ ಜಾತ್ಯಾತೀತವಾಗಿ ಉಳಿದುಕೊಂಡಿ ರೋದಕ್ಕೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರಾದಿಯಾಗಿ ನಮ್ಮ ಹಿರಿಯ ನಾಯಕರು ಕಾರಣ, ಬೇರೆ ಬೇರೆ ರಾಷ್ಟ್ರಗಳಲ್ಲಿ ಸಂವಿಧಾನ ಮತ್ತು ಸರ್ಕಾರಗಳು ಗಂಡಾಂತರಕ್ಕೆ ಒಳಗಾಗಿದ್ದನ್ನ ನಾವು ನೋಡಿದ್ದೇವೆ, ಆದರೆ ಭಾರತದ ಸಂವಿಧಾನ ಎಂಥ ಸನ್ನಿವೇಶಗಳನ್ನೂ ಕೂಡಾ ಗಟ್ಟಿಯಾಗಿ ಎದುರಿಸುವ,ಸವಾಲುಗಳನ್ನ ಸ್ವೀಕರಿಸುವ ಗುಣ-ಧರ್ಮವನ್ನು ಹೊಂದಿದೆ ಎಂದು ತಿಳಿಸಿದರು.
ಇಂದು ನಾವೆಲ್ಲರೂ ಭಾರತದ ಬಡವರ ಪರ,ಸಾಮಾನ್ಯ ಜನ,ಶೋಷಿತ,ದಲಿತ-ದಮನಿತರ,ಅಲ್ಪಸಂಖ್ಯಾತರ,ಹಿಂದುಳಿದವರ ಪರ ಇರುವ ಸಂವಿಧಾನವನ್ನು ಸೂರ್ಯ-ಚಂದ್ರ ಇರೋವರೆಗೂ ಉಳಿಸುವ,ಬೆಳೆಸುವ ಜವಾಬ್ದಾರಿ ಹೊರಬೇಕಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಗ್ರಾ.ಪಂ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು.ಎಸ್.ಡಿ.ಎಮ್.ಸಿ ಅಧ್ಯಕ್ಷರು,ಸದಸ್ಯರು,ಗ್ರಾಮದ ಮುಖಂಡರು,ಶಿಕ್ಷಕರು,ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.