Upsc topper ಅವಿನಾಶ್ ಗೆ ಆನ್ಲೈನ್ ಶುಭಾಶಯ ಕೋರಿದ ದವನ್ ಕಾಲೇಜಿನ ವಿದ್ಯಾರ್ಥಿಗಳು.!

ದಾವಣಗೆರೆ: ಕೇಂದ್ರ ನಾಗರೀಕ ಸೇವಾ ಆಯೋಗದ ಪರೀಕ್ಷೆ (UPSC) ಯಲ್ಲಿ ಮೊದಲ ಪ್ರಯತ್ನದಲ್ಲಿಯೇ ರಾಷ್ಟçಮಟ್ಟದಲ್ಲಿ 31 ನೇ ಸ್ಥಾನ ಪಡೆದು ರಾಜ್ಯಕ್ಕೆ ಟಾಪರ್ ಆಗಿರುವ ನಗರದ ಅವಿನಾಶ್.ವಿ ರವರಿಗೆ ತಾವು ಪಿಯುಸಿ ವಿದ್ಯಾಭ್ಯಾಸ ಮಾಡಿದ್ದ ನಗರದ ದವನ್ ಕಾಲೇಜಿನಲ್ಲಿ ಇಂದು ವಿದ್ಯಾರ್ಥಿಗಳು ಆನ್ಲೈನ್ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಆನ್ಲೈನ್ನಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ತಮ್ಮ ಯಶಸ್ಸಿನ ಹಿಂದೆ ಇರುವ ಪರಿಶ್ರಮವನ್ನು ಹಂಚಿಕೊAಡು ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ತಮ್ಮ ಪೋಷಕರ ಸಹಕಾರ ತಾವು ಓದಿದ ಶಾಲಾ-ಕಾಲೇಜಿನ ಅಧ್ಯಾಪಕರ ಮಾರ್ಗದರ್ಶನವನ್ನು ನೆನೆದರು.
ದವನ್ ಕಾಲೇಜಿನ ಕಾರ್ಯದರ್ಶಿಗಳಾದ ವೀರೇಶ್ ಪಟೇಲ್ರವರು ಅವಿನಾಶ್ ರವರ ಈ ಸಾಧನೆಯಿಂದ ದಾವಣಗೆರೆ ನಗರದ ಹೆಸರು ರಾಷ್ಟçಮಟ್ಟದಲ್ಲಿ ಗುರುತಿಸುವಂತಾಗಿದೆ ಹಾಗೂ ನಗರದ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಿರೆಂದು ಅವಿನಾಶ್ರವರಿಗೆ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಹರ್ಷರಾಜ್ ಗುಜ್ಜರ್ರವರು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಅವಿನಾಶ್ರವರು ಟಾಪರ್ ಆಗಿದ್ದನ್ನು ಸ್ಮರಿಸಿದರು. ಶ್ರೀಮತಿ ಸುಮಿತ್ರ ಹಾಗೂ ವಿದ್ಯಾರ್ಥಿಗಳು ಮತ್ತು ಸಿಬ್ಬಂಧಿವರ್ಗದವರು ಉಪಸ್ಥಿತರಿದ್ದರು.