ಸಿಎಂ ಬಿ ಎಸ್ ಯಡಿಯೂರಪ್ಪ ಸರ್ವಾಧಿಕಾರಿ, ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ವಾಟಾಳ್ ನಾಗರಾಜ್.

VideoCapture_20210402-153841

ಚಿತ್ರದುರ್ಗ: ಚಿತ್ರದುರ್ಗದ ಸೀಬಾರದ ಮಾಜಿ ಸಿಎಂ ನಿಜಲಿಂಗಪ್ಪ ಸಮಾದಿ ಬಳಿ ವಾಟಾಳ್ ನಾಗರಾಜ್ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಇಂದು ಗುಡ್ ಪ್ರೈಡೇ ಹಿನ್ನಲೆ ನಗರದ ಹೊರ ವಲಯದಲ್ಲಿರುವ ಸೀಬಾರ ಬಳಿಯ ಎಸ್.ನಿಜಲಿಂಗಪ್ಪ ಸಮಾಧಿಗೆ ಹಾರ ಹಾಕಿ ‌ನಿಜಲಿಂಗಪ್ಪನವರನ್ನ ಸ್ಮರಣೆಯನ್ನು ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಿಎಂ ಬಿ ಎಸ್ ಯಡಿಯೂರಪ್ಪ ಸರ್ವಾಧಿಕಾರಿ, ಅವರು ಎಲ್ಲದಕ್ಕೂ ಕೈ ಹಾಕುತ್ತಾರೆ. ರಾಜ್ಯಪಾಲರಿಗೆ ದೂರು ನೀಡಿರುವ ಸಚಿವ ಈಶ್ವರಪ್ಪನವರ ನಿಲುವು ಸರಿ ಇದೆ. ಸಚಿವರ ಖಾತೆಗಳಿಗೆ ಸಿಎಂ ಕೈ ಹಾಕಿ ಬೀಗರಿಗೆ, ಹಾಗೂ ತಮಗೆ ಬೇಕಾದವರಿಗೆ ಹಣ ಕೊಟ್ಟರೆ ಇವರೆಲ್ಲಾ ಯಾಕೆ ಮಂತ್ರಿಗಳು ಆಗಿರಬೇಕು ಎಂದು ವಾಟಾಳ್ ಪ್ರಶ್ನೆ ಮಾಡಿದರು.

ಬಿ ಜೆ ಪಿ ಮಂತ್ರಿ ಮಂಡಲದ ಮಂತ್ರಿಗಳಿಗೆ ಅವರದೆ ಆದ ಸ್ವಾತಂತ್ರ ಇದ್ದೇ ಇದೆ. ಆದ್ದರಿಂದ ಕೆಎಸ್ ಈಶ್ವರಪ್ಪನವರ ವಾದವನ್ನ ನಾನು ಬೆಂಬಲಿಸುತ್ತೇನೆ. ಎಂದು ವಾಟಾಳ್ ನಾಗರಾಜ್ ಹೇಳಿದ್ರು.
ನನ್ನ ಖಾತೆ ಕೈ ಹಾಕಬಾರದು ಎಂದು ಈಶ್ವರಪ್ಪ ಪ್ರಾಮಾಣಿಕವಾಗಿ ಹೇಳಿದ್ದಾರೆ. ಇದರಲ್ಲಿ ಸಿಎಂ ಯಡಿಯೂರಪ್ಪ ನವರನ್ನ ಬೆಂಬಲಿಸಲು ಕೆಲ ಶಾಸಕರು ಹೊರಟಿದ್ದಾರೆ ಇದು ಒಳ್ಳೆಯದಲ್ಲ. ಸಿಎಂ‌ ಅಸ್ತಕ್ಷೇಪ ಸರಿಯಲ್ಲ ಅದು ಸರ್ವಾಧಿಕಾರಿ ಮನೋಭಾವ. ಇದು ಈ ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಗೆ ಅಪಾಯಕಾರಿ ಬೆಳವಣಿಗೆ ಎಂದಿದ್ದಾರೆ ವಾಟಾಳ್ ನಾಗರಾಜ್.

ಸಿಡಿ ಪ್ರಕರಣ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು

ಇದೇ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕುರಿತು ವಾಟಾಳ್ ನಾಗರಾಜ್ ಪ್ರತಿಕ್ರಿಯಿಸಿ, ಜಾರಕಿಹೊಳಿಯನ್ನ ಬಂದಿಸುತ್ತಾರೋ, ಯಾರನ್ನ ಬಂದಿಸುತ್ತಾರೋ ನಾನು ತಲೆ ಕೆಡಿಸಿಕೊಂಡಿಲ್ಲ. ಸಿಡಿ ಪ್ರಕರಣ ಸಮಗ್ರವಾಗಿ ತನಿಖೆ ಆಗಬೇಕು. ಈಗಿನ ತನಿಖೆಯನ್ನ ಬಹಳ ಜವಬ್ದಾರಿಯಿಂದ ಮಾಡುತ್ತಿದ್ದಾರೆ. ಉನ್ನತ ಮಟ್ಟದ ಸಮಗ್ರ ತನಿಖೆ ಆಗಬೇಕಿದೆ. ಈ ತನಿಖೆಯು ದೇಶಕ್ಕೆ ಇದರ ಪ್ರಭಾವ ಬೀರಿದೆ. ಜಾರಕಿಹೊಳಿಯ ಸಿಡಿ ಎಲ್ಲಿಂದ ಬಂತು ಹೇಗೆ ಬಂತು ಎಂದು ಸಮಗ್ರ ತನಿಖೆ ಆಗಲೆಬೇಕು.

ರಾಜ್ಯದಲ್ಲಿ ಬಿಎಸ್ ವೈ ನೇತೃತ್ವದ ಸರ್ಕಾರ ಕಂಪನಿ ಸರ್ಕಾರವಿದ್ದಂತೆ, ಇವರು ವ್ಯಾಪಾರದ ಸರ್ಕಾರವನ್ನು ಅಂಗಡಿ ಮಾಡಿಕೊಂಡಿದ್ದು ವರ್ಗಾವಣೆಗಾಗಿ ರೇಟ್ ಫಿಕ್ಸ್ ಆಗಿದೆ. ಬಿ.ಎಸ್.ಯಡಿಯೂರಪ್ಪ ಕಂಪನಿ ಹೋಗಬೇಕು, ಇಲ್ಲವಾದಲ್ಲಿ ರಾಜ್ಯಕ್ಕೆ ಇದು ತುಂಬಾ ಅಪಾಯ.

ಮಠಾಧೀಶರು ಬಿಎಸ್ ವೈ ಗೆ ಬೆಂಬಲ ನೀಡುವುದು ನಿಲ್ಲಿಸಲಿ. ಇಲ್ಲವಾದಲ್ಲಿ‌ ನಿಮ್ಮ‌ ಇತಿಹಾಸಕ್ಕೆ ಒಳ್ಳೆಯದಾಗಲ್ಲ. ಇವರು ಈ ಕೂಡಲೆ ಹೋಗಬೇಕು‌ ಇಲ್ಲವಾದಲ್ಲಿ ಅರಾಜಕತೆ ಶುರುವಾಗುತ್ತೆ.
ರಾಜ್ಯದಲ್ಲಿ ಬೇಗ ಚುನಾವಣೆ ಬರಬೇಕು, ಅರಾಜಕತೆ ಸೃಷ್ಠಿ ಆಗಲು ಬಿಡಬಾರದು ಎಂದು ಬಿ ಎಸ್ ವೈ ಸರ್ಕಾರದ ವಿರುದ್ದ ಚಿತ್ರದುರ್ಗದಲ್ಲಿ ವಾಗ್ದಾಳಿ ನಡೆಸಿದ್ರು.

Leave a Reply

Your email address will not be published. Required fields are marked *

error: Content is protected !!