ಈ ಕಾಯಿಲೆ ಇರುವವರು ತಿನ್ನಬಾರದಂತೆ ಕಲ್ಲಂಗಡಿ ಹಣ್ಣು

ಬೆಂಗಳೂರು : ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಎಲ್ಲರೂ ಇಷ್ಟಪಡುತ್ತಾರೆ. ಕಲ್ಲಂಗಡಿ ಹಣ್ಣು ಬಾಯಾರಿಕೆ ತಣಿಸುವ ಜೊತೆಗೆ ದೇಹಕ್ಕೆ ಅಗತ್ಯವಾಗಿ ಬೇಕಾದ ಪೋಷಕಾಂಶಗಳನ್ನು ಪೂರೈಸುತ್ತದೆ. ಖನಿಜಗಳು, ವಿಟಮಿನ್ ಗಳು, ಆಂಟಿ ಆಕ್ಸಿಡೆಂಟ್ ಗಳು ಕಲ್ಲಂಗಡಿಯಲ್ಲಿ ಹೇರಳವಾಗಿವೆ. ಆದರೆ ಕಲ್ಲಂಗಡಿ ಸೇವನೆ ಎಲ್ಲರಿಗೂ ಸೂಕ್ತವಲ್ಲ. ಕೆಲವರಿಗೆ ಇದು ಹಾನಿ ಕೂಡ ಮಾಡಬಲ್ಲದು ಎನ್ನಲಾಗುತ್ತಿದೆ.
ಹೃದಯದ ತೊಂದರೆ ಇರುವವರು ತಿನ್ನಬಾರದು:
ಕಲ್ಲಂಗಡಿಯಲ್ಲಿ ಪೊಟ್ಯಾಸಿಯಂ ಸಮೃದ್ಧವಾಗಿದೆ. ಈ ಅಂಶವು ದೇಹದಲ್ಲಿ ಹೆಚ್ಚಾದರೆ, ಹೃದಯ ಬಡಿತ ಮತ್ತು ನಾಡಿ ಬಡಿತ ದುರ್ಬಲವಾಗ ಬಹುದು. ಹಾಗಾಗಿ ಹೃದಯದ ತೊಂದರೆ ಇರುವವರು ಕಲ್ಲಂಗಡಿ ಹಣ್ಣನ್ನು ತಿನ್ನದೇ ಇರುವುದು ಒಳಿತು.
ಶೀತ ಮತ್ತು ಕೆಮ್ಮಿನಿಂದ ಬಳಲುವವರು:
ನೀವು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರೆ ಕಲ್ಲಂಗಡಿ ಹಣ್ಣನ್ನು ತಿನ್ನಬೇಡಿ. ಕಲ್ಲಂಗಡಿ ಕೂಡ ತಣ್ಣನೆಯ ಪರಿಣಾಮವನ್ನು ಹೊಂದಿರುವುದರಿಂದ ನೆಗಡಿ, ಕೆಮ್ಮು ಹೆಚ್ಚಾಗುವ ಅಪಾಯವಿರುತ್ತದೆ.
ಡಯಾಬಿಟಿಸ್ ಇರುವವರು :
ಕಲ್ಲಂಗಡಿಯಲ್ಲಿ ಹೆಚ್ಚಿನ ಗ್ಲೆಸೆಮಿಕ್ ಇಂಡೆಕ್ಸ್ ಇದೆ. ಇದನ್ನು ಅತಿಯಾಗಿ ತಿನ್ನುವುದರಿಂದ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾಗುತ್ತದೆ. ಆದ್ದರಿಂದ ಡಯಾಬಿಟಿಸ್ ಇರುವವರು ಕಲ್ಲಂಗಡಿಯನ್ನು ಸೇವಿಸಬಾರದು. ಸಂಧಿವಾತದ ಸಮಸ್ಯೆ ಇರುವವರು ಕೂಡ ಕಲ್ಲಂಗಡಿಯನ್ನು ತಿನ್ನದೇ ಇರುವುದು ಉತ್ತಮ. ಕಲ್ಲಂಗಡಿ ಸೇವನೆಯಿಂದ ಅವರಿಗೆ ಊತ ಅಥವಾ ನೋವಿನ ಸಮಸ್ಯೆ ಜಾಸ್ತಿಯಾಗಬಹುದು.