ಮಸೀದಿಗಳಲ್ಲಿ ಮದ್ದು ಗುಂಡು ಸಂಗ್ರಹಿಸುತ್ತಾರೆ ಅಂತಾ ಹಿಂದೆ ಹೇಳಿದ್ದು ಈಗ ನಿಜವಾಗಿದೆ – ಎಂ ಪಿ ರೇಣುಕಾಚಾರ್ಯ

ದಾವಣಗೆರೆ: ಹುಬ್ಬಳ್ಳಿಯಲ್ಲಿ ನಡೆದ ಗಲಬೆ ಪ್ರಕರಣಕ್ಕೆ ಸಂಬಂದಿಸಿದಂತೆ, ಸಿದ್ದರಾಮಯ್ಯನವರು ಗಲಭೆ ಕೋರರನ್ನು ಅಮಾಯಕರು ಎಂದು ಕರೆದಿದ್ದು ಅವರಿಗೆ ನಾಚಿಕೆಯಾಗ ಬೇಕು. ಎಂದು ಹೊನ್ನಾಳಿಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸಿದ್ದರಾಮಯ್ಯ ವಿರುದ್ದ ತೀರ್ವ ವಾಗ್ದಳಿ ನಡೆಸಿದರು.
ಕಳೆದ ನಾಲ್ಕು ದಿನಗಳ ಹಿಂದೆ ಹುಬ್ಬಳಿಯಲ್ಲಿ ನಡೆದ ಘಟನೆಗೆ ನೇರವಾಗಿ ಕಾಂಗ್ರೇಸ್ ನವರೇ ಕಾರಣ. ಕೂಡಲೇ ಕಾಂಗ್ರೇಸ್ ನವರು ನಾಡಿನ ಜನತೆಯ ಬೇಷರತ್ ಕ್ಷಮೆ ಕೇಳುವಂತೆ ರೇಣುಕಾಚಾರ್ಯ ಆಗ್ರಹಿಸಿದರು.
ಯಾರು ದೇಶದ್ರೋಹದ ಕೆಲಸ ಮಾಡುತ್ತಾರೆ ಅವರನ್ನು ಬಂದಿಸುವುದು ಮಾತ್ರವಲ್ಲಾ, ಅವರನ್ನು ಗಲ್ಲಿಗೇರಿಸ ಬೇಕು.
ದೇಶದ್ರೋಹದ ಕೆಲಸ ಮಾಡಿದವರ ಕುಟುಂಬಸ್ಥರ ಮತದಾನದ ಹಕ್ಕನ್ನು ಮೊಟಕುಗೊಳಿಸುವುದರ ಜೊತೆಗೆ ಸರ್ಕಾರಿ ಸವಲತ್ತುಗಳನ್ನು ಮೊಟಕುಗೊಳಿಸ ಬೇಕೆಂದು ರೇಣುಕಾಚಾರ್ಯ ಒತ್ತಾಯ ಮಾಡಿದರು.
ಹುಬ್ಬಳ್ಳಿಯಲ್ಲಿ ನಡೆದ ಘಟನೆ ಪೂರ್ವ ನಿಯೋಜಿತ ಎಂದ ರೇಣುಕಾಚಾರ್ಯ, ಪೊಲೀಸರು ಹಾಗೂ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದವರ ಎಡೆಮುರಿ ಕಟ್ಟುವ ಕೆಲವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ನಾನು ಒತ್ತಾಯ ಮಾಡುತ್ತೇನೆ, ಉತ್ತರ ಪ್ರದೇಶದ ಮಾದರಿಯಲ್ಲಿ ದೇಶದ್ರೋಹಿಗಳ ಎಡೆಮುರಿ ಕಟ್ಟುವ ಕೆಲಸ ಮಾಡಬೇಕು,
ಈ ಹಿಂದೆ ನಾನು ಹೇಳಿದಂತೆ ದೇವಸ್ಥಾನಗಳಲ್ಲಿ ತೀರ್ಥ ಪ್ರಸಾದ ನೀಡುತ್ತಾರೆ ಆದರೆ ಮಸೀದಿಗಳಲ್ಲಿ ಮದ್ದು ಗುಂಡು ಸಂಗ್ರಹಿಸುತ್ತಾರೆ ಎಂದು ಹೇಳಿದ್ದು ಅದು ಈಗ ನಿಜವಾಗಿದೆ. ಮದರಸಗಳಲ್ಲಿ ಮಕ್ಕಳ ಮನಸ್ಸಿನ ಮೇಲೆ ದೇಶದ್ರೋಹ ಬಿತ್ತುವ ಕೆಲಸ ಮಾಡುತ್ತಿದ್ದಾರೆ, ನಾವು ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ದೇಶ ಪ್ರೇಮ ಬಿತ್ತುವ ಕೆಲಸ ಮಾಡುತ್ತೆನೆ, ಅದ್ದರಿಂದ ಕೂಡಲೆ ಮದರಸಗಳನ್ನು ಬ್ಯಾನ್ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು. ಕಾಂಗ್ರೇಸ್ ಮುಖಂಡರಿಗೆ ನಾನು ಕೇಳಲು ಇಚ್ಚೆ ಪಡುತ್ತೇನೆ ನಿಮಗೆ ರಾಜಕೀಯ ಮುಖ್ಯವೋ ದೇಶಪ್ರೇಮ ಮುಖ್ಯವೂ ಇದನ್ನು ಮೊದಲು ನೀವು ಸಾಬೀತು ಪಡಿಸಿ ಎಂದರು.
ಸುದ್ದಿಗಾಗಿ ಸಂಪರ್ಕಿಸಿ: 9740365719
garudavoice21@gmail.com