ತೆರಿಗೆ ಎಂದರೇನು? Tax Payer – ತೆರಿಗೆ ಕೊಡುವವ ಯಾರು! ನಾನು ತೆರಿಗೆ ಕಟ್ಟಲ್ವಾ?
ದಾವಣಗೆರೆ : ದೇಶ ರಾಜ್ಯದ ಕೆಲವು ಜನರಲ್ಲಿ ತೆರಿಗೆ ಕುರಿತಾಗಿ ಕೆಲವು ಗೊಂದಲಗಳಿವೆ. ಆದಾಯ ತೆರಿಗೆ ಕೊಡುವವ ಮಾತ್ರ ತೆರಿಗೆ ಕೊಡುವವ ಎಂದು ನಂಬಿಸಲಾಗಿದೆ. ಆದರೆ ನಿಜವಾಗಿ ತೆರಿಗೆ ಕೊಡುವವರು ಯಾರು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುವ ಒಂದು ಪ್ರಯತ್ನ.
ಕಳೆದ 75 ವರ್ಷದಿಂದ ಕೇವಲ ಆದಾಯ ತೆರಿಗೆ (Income Tax) ಕೊಡುವವ ಮಾತ್ರ “ತೆರಿಗೆ ಕೊಡುವವ- Tax Payer ಎಂದು ಬಿಂಬಿಸಲಾಗಿದೆ. ಭಾರತದಲ್ಲಿ ಪ್ರತಿಯೊಬ್ಬ ಪ್ರಜೆಯು “ತೆರಿಗೆ ಕೊಡುವವ- Tax Payer “. ಭಾರತದ ಪ್ರತಿಯೊಬ್ಬ ಪ್ರಜೆಯು, ತಾನು ದಿನ ನಿತ್ಯ ಖರೀದಿಸುವ ಎಲ್ಲಾ ವಸ್ತುಗಳ ಮೇಲೆ ತೆರಿಗೆ ಕೊಡುತ್ತಾನೆ. ಅದು ವಸ್ತು ಆಗಿರಲಿ, ಸೇವೆ ಆಗಿರಲಿ, ಆಸ್ತಿ ಆಗಿರಲಿ, ವಾಹನ ಆಗಿರಲಿ, ಎಲ್ಲದಕ್ಕೂ ತೆರಿಗೆ ಕೊಡುತ್ತಾನೆ.
ಆದಾಯ ತೆರಿಗೆ ಕೊಡುವವನು ಕೂಡಾ, ಪ್ರಜೆಗಳಿಗೆ ವಸ್ತು ಅಥವಾ ಸೇವೆಗಳನ್ನು ಮಾರಿ ಬಂದ ಹಣದಿಂದ ಲಾಭ ಮಾಡಿದಾಗ ಅದರಲ್ಲಿ ಆದಾಯ ತೆರಿಗೆ ಕಟ್ಟುತ್ತಾನೆ. ಹಣ ಯಾರದು? ಪ್ರಜೆಗಳ ಹಣ ಹಾಗು ಅವನು ಅವನ ಕಂಪನಿಯ ಅಧಿಕಾರಿಗಳಿಗೆ ದೊಡ್ಡ ಮೊತ್ತದ ಸಂಬಳ ಕೊಟ್ಟು, ಅದರಿಂದ ಅವರು ಆದಾಯ ತೆರಿಗೆ ಕಟ್ಟುತ್ತಾರೆ. ಅದು ಕೂಡಾ ಪ್ರಜೆಗಳಿಗೆ ವಸ್ತು ಹಾಗು ಸೇವೆ ಮಾರಾಟ ಮಾಡಿದ ಹಣದಿಂದ ಸಂಬಳ ಕೊಡುವುದಲ್ಲವೇ? ಖಂಡಿತಾ, ಇಲ್ಲಿ, ಎಲ್ಲರೂ ಕಷ್ಟಪಟ್ಟು ದುಡಿಯಲೇಬೇಕು. ಹುಟ್ಟಿದ ಮಗುವಿಗೆ ತೆಗೆದುಕೊಂಡ ಡೈಪರ್ನಿಂದ ಹಿಡಿದು ಸಾಯುವಾಗ ಆಸ್ಪತ್ರೆಗೆ ಕೊಡುವ ಹಣ ಹಾಗು ಮದ್ದು, ಉಪಕರಣಗಳಿಗೆ ತೆರಿಗೆ ಕಟ್ಟುತ್ತಾನೆ. ಆದ್ದರಿಂದ, ಖಂಡಿತಾ, ಪ್ರತಿಯೊಬ್ಬ ಪ್ರಜೆಯು, ಅವನು ಸಂಪಾದಿಸಿದ ಹಣದಲ್ಲಿ ತೆರಿಗೆ ಕಟ್ಟುತ್ತಾನೆ.
ಆದಾಯ ತೆರಿಗೆ :
ಆದಾಯ ತೆರಿಗೆಯು ಸಂಪೂರ್ಣ ಕೇಂದ್ರ ಸರಕಾರಕ್ಕೆ ಹೋಗುವುದು. ಇದರಲ್ಲಿ ರಾಜ್ಯದ ಪಾಲು ಇಲ್ಲ. ರಾಜ್ಯಗಳು, ತಮಗೆ ಬರುವ ಕೆಲವೊಂದು ಸ್ಥಾನೀಯ ತೆರಿಗೆ, 50% GST, ವಾಹನ ತೆರಿಗೆ, ಹೀಗೆ ಕೆಲವೊಂದು ತೆರಿಗೆಯ ಮೇಲೆ, ತನ್ನ ಬಜೆಟ್ ಮಾಡುವುದು. ಆದಾಯ ತೆರಿಗೆ ಕೂಡಾ, ಕೇಂದ್ರ ಸರಕಾರದ ಆದಾಯ ಅಥವಾ ಬಜೆಟ್ನ ಕೇವಲ 15% ಮಾತ್ರ. ಉಳಿದ 85% ಬೇರೆ ತೆರಿಗೆಯಿಂದ ಹಾಗು ಸಾಲದಿಂದ ಬರುವುದು. ಕೇಂದ್ರದ ಬಜೆಟನ್ನು ವೀಕ್ಷಿಸಿ. ಹಾಗಾಗಿಯೇ ರಾಜ್ಯ ಸರಕಾರಗಳು, ಕೆಲವೊಂದು ಮೂಲಭೂತ ಸೌಕರ್ಯ, ಸೌಲಭ್ಯಗಳನ್ನು ಬಡವರಿಗೆ ಉಚಿತವಾಗಿ ಕೊಡುವುದು, ಖಂಡಿತಾ ಆದಾಯ ತೆರಿಗೆಯಿಂದಲ್ಲ. ರಾಜ್ಯ ಸರಕಾರಕ್ಕೆ ಬರುವ ಬೇರೆ ತೆರಿಗೆ ಹಣದಿಂದ ಅದನ್ನು ಒದಗಿಸುವುದು. ಯಾವುದೇ ಸಾಲ ಮಾಡದೆ ದೆಹಲಿ ರಾಜ್ಯ ಸರಕಾರದಂತೆ, ಉಚಿತ ಒದಗಿಸಿದಲ್ಲಿ, ಯಾರಿಗೂ ತೊಂದರೆ ಆಗಬಾರದು. ಗುಣಕ್ಕೆ ಮತ್ಸರ ಇರಬಾರದು.
ಕೇಂದ್ರ ಸರಕಾರದಿಂದ ಕೆಲವೊಂದು ಅನುದಾನಗಳು ಬರುವುದು. 15 ಫೈನಾನ್ಸ್ ಕಮಿಷನ್ ಮುಖಾಂತರ ಸುಮಾರು 5000 ಕೋಟಿ, ಕರ್ನಾಟಕದ ಎಲ್ಲಾ ಗ್ರಾಮ ಪಂಚಾಯಿತಿ ಹಾಗು ಪಟ್ಟಣ ಸಭೆ, ನಗರ ಸಭೆಗಳಿಗೆ, ವರ್ಷಕ್ಕೆ ಒಂದು ಸಲ ಬರುವುದು. ಅದು ಕೂಡಾ, ಆಯಾ ರಾಜ್ಯದ ಜನಸಂಖ್ಯೆಯ ಆಧಾರದಲ್ಲಿ ಹಂಚಲ್ಪಡುವುದು. ಹಾಗೆ, ಬಿ.ಪಿ.ಎಲ್ ಕುಟುಂಬಗಳಿಗೆ ಕೊಡುವ ಆಹಾರ ಸಾಮಾಗ್ರಿಗಳು ಕೂಡಾ ಕೇಂದ್ರ ಸರಕಾರದಿಂದ ಬರುವುದು. ಅದರಲ್ಲಿ 75%ರಷ್ಟು ಖರ್ಚು ಕೇಂದ್ರ ಸರಕಾರ ಹಾಗು 25%ರಷ್ಟು ರಾಜ್ಯ ಸರಕಾರ ನೋಡಿಕೊಳ್ಳುವುದು. ಇದರ ಮೇಲೆ ಕೇಂದ್ರ ಸರಕಾರವು ಸುಮಾರು 2 ಲಕ್ಷ ಕೋಟಿ ಖರ್ಚು ಮಾಡುವುದು. ಅದರಲ್ಲಿ ಪ್ರತಿವರ್ಷ ಕರ್ನಾಟಕಕ್ಕೆ ಸುಮಾರು 8,000 ಕೋಟಿ ಕೇಂದ್ರದಿ0ದ ಖರ್ಚಾಗುವುದು.
ನೆನಪಿರಲಿ, ಕರ್ನಾಟಕ ಪ್ರತೀ ವರ್ಷ ಸುಮಾರು 1,26,000 ಕೋಟಿಯಷ್ಟು ಆದಾಯ ತೆರಿಗೆ, ಕೇಂದ್ರ ಸರಕಾರಕ್ಕೆ ಕೊಡುವುದು. ಕರ್ನಾಟಕ ಈ ವಿಷಯದಲ್ಲಿ ಮೂರನೇ ಸ್ಥಾನದಲ್ಲಿದೆ. ಮೊದಲು ಮಹಾರಾಷ್ಟç, ಎರಡನೇಯದು ದೆಹಲಿ. ಹಾಗೆ ಬೇರೆ ಕೆಲವು ತೆರಿಗೆಗಳು ಕೂಡಾ ಕರ್ನಾಟಕದಿಂದ ಕೇಂದ್ರಕ್ಕೆ ಹೋಗುವುದು. ಆಮದು ತೆರಿಗೆ, ಕೇಂದ್ರ ಎಕ್ಸೈಜ್ ಇತ್ಯಾದಿ. ಆದ್ದರಿಂದ, ಪ್ರಜೆಗಳ ಮೂಲಭೂತ ಸೌಕರ್ಯ-ಸೌಲಭ್ಯ, ಕೆಲವೊಂದು ಉಚಿತವಾಗಿ ಕೊಡುವುದರಿಂದ ರಾಜ್ಯದಲ್ಲಿ ಶ್ರೀಲಂಕಾದ0ತಹ ಪರಿಸ್ಥಿತಿ ಬರುವುದೆಂಬ ಕೆಲವೊಂದು ಪ್ರಜೆಗಳು ಹೇಳುವುದು ಮೂರ್ಖತನ. ಇಲ್ಲಿ ಅತೀ ಮುಖ್ಯವಾಗಿರುವುದು, ಭ್ರಷ್ಟಾಚಾರ ನಿರ್ಮೂಲನೆ. ಭ್ರಷ್ಟಾಚಾರ ರಾಜ್ಯಗಳಲ್ಲಿ ನಿರ್ಮೂಲನೆ ಆದರೆ, ಖಂಡಿತಾ, ರಾಜ್ಯಗಳಲ್ಲಿ ಬೇಕಾದಷ್ಟು ಸಂಪನ್ಮೂಲವು ಇರುವುದು. ಇಲ್ಲಿ ಹಣದ ಕೊರತೆ ಇಲ್ಲ. ಹೆಗ್ಗಣಗಳ ಹಾವಳಿ ಇದೆ. ಭ್ರಷ್ಟಾಚಾರ ನಿಂತರೆ, ಯಾವುದೇ ರಾಜ್ಯವು ಸಾಲ ಮಾಡುವ ಅವಶ್ಯಕತೆ ಇರುವುದಿಲ್ಲ. ಭ್ರಷ್ಟಾಚಾರ ನಿಂತರೆ ಕೆಲವೊಂದು ಮೂಲಭೂತ ಸೌಕರ್ಯ-ಸೌಲಭ್ಯಗಳನ್ನು ಪ್ರಜೆಗಳಿಗೆ ಉಚಿತ ಕೊಡಬಹುದು. ಒಮ್ಮೆ ಯೋಚಿಸಿ ಭ್ರಷ್ಟಾಚಾರ ರಹಿತ ದೇಶಕ್ಕಾಗಿ ನಾವೆಲ್ಲ ಬದಲಾಗುವ ಅವಶ್ಯಕತೆ ಅಗತ್ಯವಾಗಿದೆ.
ಜೈ ಪ್ರಜಾಕೀಯ
ಸುದ್ದಿಗಾಗಿ ಸಂಪರ್ಕಿಸಿ: garudavoice21@gmail.com
9740365719