ಹನುಮಂತಾಪುರ ಗೊಲ್ಲರಹಟ್ಟಿಯ ಕಾಡುಗೊಲ್ಲ ಸಮಾಜ ಬಾಂಧವರಿಂದ ಕಾಲ್ನಡಿಗೆಯಲ್ಲಿ ತುಂಗಭದ್ರಾ ನದಿಯೆಡೆಗೆ ಪ್ರಯಾಣ

ದಾವಣಗೆರೆ (ಜಗಳೂರು): ಸೊಕ್ಕಿದ ಎತ್ತುಗಳಿಗೆ ಬಣ್ಣ ಬಣ್ಣದ ಮೈಜೂಲುು, ಕೊಡಿಗೆ ಕೊಡಣಸುು, ಗಂಗರ, ಗೆಜ್ಜೆ, ಕಾಲ್ಗೆ ಗೆಜ್ಜೆ, ಕಟ್ಟಿ ತೆಂಗಿನ ಗರಿಗಳಿಂದ ಪೊಣಿಸಿದ ಎತ್ತಿನ ಬಂಡಿಯ ಸವಾರಿ ನಾ ಮುಂದು
ತಾ ಮುಂದು ಎಂದು ಮುನ್ನಗುತ್ತಿರವ ಅಲಕಾಂರಗೊಂಡ ಶೃಂಗಾರದ ಬಂಡಿಗಳು, ಉರುಮೆಯ ಗಟ್ಟಿನಾದ ಸೊಗಸಾದ ಸೋಭಾನ, ಮನಸ್ಸಿಗೆ ಮೃದು ನಿಡುವ ಕಗ್ಗದ ಪದ,
ಹೌದು ಇವೆಲ್ಲಾ ಕಂಡು ಬಂದಿದ್ದು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗಕ್ಕೆ ಆಗಮಿಸಿದ ಕಾಡುಗೊಲ್ಲರ ಆರಾದ್ಯ ದೈವಗಳಾದ ರಂಗಪ್ಪ,ಚಿತ್ರಲಿಂಗೇಶ್ವರ, ರಾಮಪ್ಪ, ಕರಿಯಮ್ಮ, ದೇವರುಗಳು ಹರಿಹರದ ಹೊಳೆ ಪೂಜೆಯ ಕಾರ್ಯಕ್ರಮದಲ್ಲಿ..
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು, ಹನುಮಂತಾಪುರ ಗೊಲ್ಲರಹಟ್ಟಿಯ ಕಾಡುಗೊಲ್ಲರ ಆರಾದ್ಯ ದೈವಗಳಾದ ರಂಗಪ್ಪ ಚಿತ್ರದೇವರು ರಾಮಪ್ಪ.ಹಾಗೂ ಕರಿಯಮ್ಮ ದೇವರುಗಳು ತುಂಗಭದ್ರಾ ನದಿಯ ತಟಕ್ಕೆ ಆದ್ದುರಿಯಾಗಿ ಹೊಳೆ ಪೂಜೆಗೆ ಹೊರಟಿತು.

ಬುಧವಾರ ಮಧ್ಯರಾತ್ರಿ ಹನುಮಂತಾಪುರ ಗೊಲ್ಲರಹಟ್ಟಿ ಯಿಂದ ಹೋರಟ ಸಾವಿರಾರು ಭಕ್ತರು ತಮ್ಮ ಆರಾದ್ಯ ದೈವಗಳನ್ನು ಹೊತ್ತು ನಡೆದರೆ ಒಂದು ಕಡೆ ಕುಟುಂಬದ ಹಿರಿಯರು ಮಕ್ಕಳು ಮಹಿಳೆಯರು ಸಿಂಗಾರ ಗೊಂಡ ನೂರಾರು ಎತ್ತಿನ ಗಾಡಿಗಳಲ್ಲಿ ಸವಾರಿ ಮಾಡಿ ಶ್ರೀಕ್ಷೇತ್ರ ಉಚ್ಚಂಗಿ ದುರ್ಗಕ್ಕೆ ಬಂದು ಇಂದು ಇಲ್ಲಿ ತಂಗಿದ್ದಾರೆ. ನಾಳೆ ಮದ್ಯರಾತ್ರಿ 3ಗಂಟೆಗೆ ಮತ್ತೆ ಹರಿಹರದ ಹೊಳೆಯ ಕಡೆ ಪ್ರಯಾಣ ಪ್ರಾರಂಭ ಮಾಡಲಾಗುತ್ತೆ..

ಒಟ್ಟಾರೆ ಈ ಆಧುನಿಕ ಕಾಲದಲ್ಲೂ ಹಿಂದಿನ ಕಾಲದ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಇಂದಿನ ಪೀಳಿಗೆಗೆ ವರದಾನವಾಗಿದೆ.