ಯುವ ಪತ್ರಕರ್ತ ಕರಿಬಸವರಾಜು ಅವರಿಗೆ ಬಸವ ರತ್ನ ರಾಷ್ಟ್ರ ಪ್ರಶಸ್ತಿ ಪ್ರದಾನ

ದಾವಣಗೆರೆ: ಅ:31 ರಂದು ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿರವರು ಹಮ್ಮಿಕೊಂಡ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿರವರ ಜನ್ಮ ದಿನಾಚರಣೆ ಮತ್ತು ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ದಾವಣಗೆರೆ ನಗರದ ನಿವಾಸಿ ಯುವ ಪತ್ರಕರ್ತ ಹಾಗು ಸಾಮಾಜಿಕ ಹೋರಾಟಗಾರ ಕರಿಬಸವರಾಜು ಅವರ ಸಾಮಾಜಿಕ ರಂಗದ ಹಾಗು ಪತ್ರಿಕೋದ್ಯಮದಲ್ಲಿ ಅನುಪಮ ಸೇವೆಯನ್ನ ಗುರುತಿಸಿ “ಬಸವ ರತ್ನ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಗಳಾದ ಹದಡಿ ವಿದ್ಯಾವರಣ್ಯ ಯೋಗೇಶ್ವರ ಮಠದ ಶ್ರೀ ಮುರುಳೀಧರ್ ಸ್ವಾಮೀಜಿ, ದಾವಣಗೆರೆ ಮಹಾನಗರ ಪಾಲಿಕೆಯ ಮಹಾ ಪೌರರಾದ ಎಸ್ ಟಿ ವೀರೇಶ್, ದಾವಣಗೆರೆ ವಿಶ್ವವಿದ್ಯಾನಿಲಯದ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಹೆಚ್ ವಿಶ್ವನಾಥ್, ಚಲನಚಿತ್ರ ನಟ ನಿರ್ದೇಶಕ ಸಾಹಿತಿ ಡಾ.ಗುಣವಂತ ಮಂಜು, ದಾವಣಗೆರೆ ಜಿಲ್ಲಾ ಆರೋಗ್ಯ ಇಲಾಖೆಯ ಜಿಲ್ಲಾ ಫಾರ್ಮಸಿ ಅಧಿಕಾರಿ ಡಾ. ಶಿವಾನಂದ ದಳವಾಯಿ, ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಎನ್ ಮಲ್ಲೇಶಪ್ಪ ಕುಕ್ಕವಾಡ, ವ್ಯವಸ್ಥಾಪಕ ಅಧ್ಯಕ್ಷ ಡಾ. ಎಂ. ಸಂತೋಷ್ ಕುಮಾರ್, ನಿರ್ದೇಶಕರುಗಳಾದ ಡಿಜಿ ಆಸೀಫ್ ಅಲಿ, ಎ ಶ್ರೀನಿವಾಸ್, ಎ.ಕೆ.ಪ್ರಕಾಶ್, ಆರ್. ರವಿ ನಾಯಕ್,ರವರು ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು,