ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಅದ್ಯಕ್ಷ ನಿಖಿಲ್ ಕೊಂಡಜ್ಜಿ ಹಾಗೂ ಸ್ನೇಹಿತರಿಂದ ಕೊವಿಡ್ ನಿಯಮಾವಳಿ ಉಲ್ಲಂಘನೆ – ಎಪಿಡೆಮಿಕ್ ಆಕ್ಟ್ ಅಡಿ ಹರಿಹರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು.

ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಅದ್ಯಕ್ಷ ನಿಖಿಲ್ ಕೊಂಡಜ್ಜಿ ಹಾಗೂ ಸ್ನೇಹಿತರಿಂದ ಕೊವಿಡ್ ನಿಯಮಾವಳಿ ಉಲ್ಲಂಘನೆ – ಎಪಿಡೆಮಿಕ್ ಆಕ್ಟ್ ಅಡಿ ಹರಿಹರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು.
ದಾವಣಗೆರೆ: ದಾವಣಗೆರೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಿಖಿಲ್ ಕೊಂಡಜ್ಜಿ ಮತ್ತು ಇತರರು COVID-19 ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಹಿನ್ನೆಲೆ, ದಾವಣಗೆರೆ ಪೊಲೀಸರು ಗುರುವಾರ ಇವರ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.
ಮೇ 18 ರಂದು ದಾವಣಗೆರೆಯ ಕೊಂಡಜ್ಜಿ ಗ್ರಾಮದಲ್ಲಿರುವ ಸ್ಕೌಟ್ ಮತ್ತು ಗೈಡ್ ಆವರಣದಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ಬಗ್ಗೆ ವರದಿಯಾಗಿತ್ತು. ಸಾಂಕ್ರಾಮಿಕ ರೋಗಗಳ ಕಾಯ್ದೆ 2020 COVID-19 ಮಾರ್ಗಸೂಚಿಗಳ ಉಲ್ಲಂಘನೆ ಕಾಯ್ದೆಯಡಿ ಪ್ರಕರಣವನ್ನ ಹರಿಹರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ. ಕಾಂಗ್ರೆಸ್ ಎಂ ಎಲ್ ಎ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್, ಸುಹಾಸ್, ಅಂಚಲ್, ಡಾ. ಹಿಥಾ, ಡಾ ಸಿಮ್ರಾನ್, ವಾರ್ಡನ್ ಚಂದ್ರಪ್ಪ, ಮತ್ತು ಸೆಕ್ಯುರಿಟಿ ಗಾರ್ಡಗ ನಂಜಪ್ಪ. ಇವರುಗಳ ವಿರುದ್ದ ಪ್ರಕರಣ ದಾಖಲಾಗಿದೆ. ಸ್ಕೌಟ್ ಹಾಲ್ನಲ್ಲಿ ಪಾರ್ಟಿವಾಗ ಗ್ರಾಮಸ್ಥರು ನಿಖಿಲ್ ಕೊಂಡಜ್ಜಿ ಜೊತೆಗೆ ಇದ್ದವರ ವಿಡಿಯೋ ಮಾಡಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಪ್ರಕರಣದ ಬಗ್ಗೆ ಮಾಹಿತಿ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.
ಪಾರ್ಟಿ ಹಿನ್ನೆಲೆ:
ಈಚೆಗೆ ಮದುವೆಯಾಗಿದ್ದ ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿಯವರ ಸಹೋದರನ ಮಗ ದಾವಣಗೆರೆ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ಲಾಕ್ಡೌನ್ ನಡುವೆಯೇ ಭರ್ಜರಿ ಎಣ್ಣೆ ಪಾರ್ಟಿ ಕೊಟ್ಟಿರುವ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದ ಸರ್ಕಾರಿ ಕಟ್ಟಡದಲ್ಲಿ ಪಾರ್ಟಿ ಮಾಡಿರುವ ಆರೋಪ ಇವರ ಮೇಲಿದೆ. ಸ್ಕೌಟ್ ಮತ್ತು ಗೈಡ್ ಭವನದಲ್ಲಿ ಮಂಗಳವಾರ ಮೇ 18 ರಂದು ಹಾಡಹಗಲೆ ಎಣ್ಣೆ ಪಾರ್ಟಿ ಮಾಡುತ್ತಿದ್ದ ನಿಖಿಲ್ ಮತ್ತು ಮಹಿಳೆಯರೂ ಭಾಗಿಯಾಗಿದ್ದ ಈ ಎಣ್ಣೆ ಪಾರ್ಟಿಯ ವಿರುದ್ಧ ಇದೀಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಲಾಕ್ಡೌನ್ ಸಂಕಷ್ಟದಲ್ಲಿ ಶ್ರೀಮಂತರ ಮಕ್ಕಳ ಮೋಜಿನಾಟ ನಡೆಯುತ್ತಿದ್ದರೂ ಅದನ್ನು ಕೇಳುವವರು ಇಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯ ಮಾತ್ರವಲ್ಲದೇ ದೇಶದ ಹಲವು ಸ್ಕೌಟ್ ಮತ್ತು ಗೈಡ್ ಶಿಬಿರ ನಡೆದ ಸ್ಥಳ ಇದಾಗಿದ್ದು, ಕೆರೆ ಪಕ್ಕದಲ್ಲಿ ಇದೆ. ಕೇಂದ್ರದ ಮಾಜಿ ಸಚಿವ ಕೊಂಡಜ್ಜಿ ಬಸಪ್ಪನವರ ಸಮಾಧಿ ಸ್ಥಳದ ಬಳಿ ಈ ಪಾರ್ಟಿ ನಡೆದಿದೆ. ಈ ಕುರಿತು ಸ್ಥಳೀಯರು ವಿಡಿಯೋ ಮಾಡಿದ್ದು ಅದರಲ್ಲಿ ನಿಖಿಲ್ ಕೊಂಡಜ್ಜಿ, ಮೃನಾಲ್ ಹೆಬ್ಬಾಳ್ಕರ್ ಪುತ್ರ ಸೇರಿದಂತೆ 8 ಜನರಿದ್ದರು.ಸ್ಥಳೀಯ ಯುವಕರಿಂದ ಸರ್ಕಾರಿ ಕಟ್ಟಡದಲ್ಲಿ ನಡೆದ ಪಾರ್ಟಿಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಅವರನ್ನೇ ಗದರಿಸಿದ್ದ ನಿಖಿಲ್ ಮತ್ತು ಸ್ನೇಹಿತರು ಯಾರನ್ನು ಕರೆಸುತ್ತೀಯೋ ಕರೆಸೋ ಎಂದು ಹೇಳಿದ್ದರು ಎನ್ನಲಾಗಿದೆ.
ಇದೀಗ ವಿಡಿಯೋ ಚಿತ್ರವನ್ನ ಆಧರಿಸಿ ಘಟನಾ ಸ್ಥಳಕ್ಕೆ ಹರಿಹರ ಪೊಲೀಸರು ತರಳಿಮಾಹಿತಿ ಕಲೆ ಹಾಕಿದ್ದಾರೆ. ನಿನ್ನೆ ರಾತ್ರಿ 8 ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ಡಿಸಾಸ್ಟರ್ ಮ್ಯಾನೇಜ್ಮೆಂಟ್, ಎಪಿಡೆಮಿಕ್ ಕಾಯ್ದೆಯಡಿ ದೂರು ದಾಖಲಾಗಿದೆ.