ಸೋಂಕಿತರ ಮನೆಗಳಿಗೆ ದಾವಣಗೆರೆ ಜಿ.ಪಂ ಸಿಇಓ ಭೇಟಿ-ಪರಿಶೀಲನೆ

ದಾವಣಗೆರೆ: ನ್ಯಾಮತಿ ತಾಲ್ಲೂಕಿನ ರಾಮೇಶ್ವರ ಮತ್ತು ಕೊಡತಾಳು ಗ್ರಾಮಗಳಲ್ಲಿ ಬಹಳಷ್ಟು ಮನೆಗಳಲ್ಲಿ ಕೋವಿಡ್ ಸೋಂಕು ಕಂಡು ಬಂದಿದ್ದು, ಈ ಗ್ರಾಮಗಳ ಮನೆಗಳಿಗೆ ಜಿಲ್ಲಾ ಪಂಚಾಯತ್ ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರು ಭೇಟಿ ನೀಡಿ ಸೋಂಕಿತರಿಗೆ ವಿತರಿಸಲಾಗಿರುವ ಔಷಧಿಗಳು ಮತ್ತು ಆರೋಗ್ಯ ತಪಾಸಣೆ ಕುರಿತು ವಿಚಾರಿಸಿದರು.ರಾಮೇಶ್ವರ ಗ್ರಾಮದಲ್ಲಿ 16 ಜನರಿಗೆ ಕೊರೊನಾ ಪಾಸಿಟಿವ ಬಂದಿದೆ, ಸಿಸಿಸಿ ಕೇಂದ್ರದಲ್ಲಿ ಕ್ವಾರಟೈನ್ನಲ್ಲಿದ್ದು ಆರೋಗ್ಯವಾಗಿದ್ದಾರೆ.