ನಮನ ಅಕಾಡಮಿ ಯ ಶಿವಸ್ಮರಣೆ ನೃತ್ಯ ಜಾಗರಣೆ ವಿಶೇಷ.!

IMG-20220302-WA0001

 

ದಾವಣಗೆರೆ: ಕಾರ್ಯಕ್ರಮ ನಗರದ ಪ್ರತಿಷ್ಠಿತ ನಾಲ್ಕು ದೇವಸ್ಥಾನಗಳಲ್ಲಿ ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು. ರಿಂಗ್ ರಸ್ತೆಯ ಶ್ರೀ ಶಾರದಾ ಮಂದಿರದಲ್ಲಿ ರಾತ್ರಿ 9:30 ಕ್ಕೆ ಶಂಕರ ಸೇವಾ ಸಂಘದ ಅಧ್ಯಕ್ಷರು ಆದ ಡಾll ಬಿ ಟಿ ಅಚ್ಚುತ್, ಹೆಸರಾಂತ ವೈದ್ಯರಾದ ಡಾll ಎ ಎಂ ಶಿವಕುಮಾರ್, ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಶ್ರೀ ದಿನೇಶ್ ಕೆ ಶೆಟ್ಟಿಯವರು ಉದ್ಘಾಟನೆ ಮಾಡಿದರು.

ಅಚ್ಚುತ್ ಅವರು ಮಾತನಾಡಿ ನಮನ ಅಕಾಡೆಮಿಯು ವಿಶಿಷ್ಟವಾದ ರೀತಿಯಲ್ಲಿ ಶಿವಸ್ಮರಣೆ ನೃತ್ಯ ಜಾಗರಣೆ ಮಾಡುತ್ತಿದ್ದಾರೆ ಅವರಿಗೆ ಶುಭವಾಗಲಿ ಎಂದು ಹಾರೈಸಿದರು, ಶಿವಕುಮಾರ್ ಅವರು ಮಾತನಾಡಿ ಈ ಒಂದು ವಿಶೇಷ ಜಾಗರಣೆ ಹೆಚ್ಚು ಹೆಚ್ಚು ಸ್ಥಳಗಳಲ್ಲಿ ನಡೆದು ಹೆಚ್ಚು ಅರ್ಥ ಕೊಡಲಿ ಎಂದು ಹಾರೈಸಿದರು, ದಿನೇಶ್ ಕೆ ಶೆಟ್ಟಿ ಅವರು ಮಾತನಾಡಿ ಭರತನಾಟ್ಯ ಕಲೆಯು ಸಾಮಾನ್ಯರಿಗೆ ಎಟಕುವ ಹಾಗೆ ಕಲೆಯನ್ನು ಕಲಿಸುತ್ತಿರುವ ಗುರು ಮಾಧವಿ ಡಿ ಕೆ ಅವರ ಪರಿಕಲ್ಪನೆ ಅದ್ಭುತವಾದದ್ದು ಈ ಕಲೆ ದಾವಣಗೆರೆಯ ಆಸಕ್ತರಿಗೆ ಲಭಿಸುತ್ತಿರುವುದು ಅತ್ಯಂತ ಸಂತೋಷದ ವಿಷಯ ನಮನ ಅಕಾಡೆಮಿಯೂ ಅಂತರರಾಷ್ಟ್ರೀಯ ಮಟ್ಟದಲ್ಲೂ ಅತ್ಯಂತ ಯಶಸ್ವಿಯಾಗಲಿ ಎಂದು ಹಾರೈಸಿದರು.

ನಂತರ ಆರಂಭಗೊಂಡ ಶಿವಸ್ಮರಣೆ ನೃತ್ಯ ಜಾಗರಣೆ ನೃತ್ಯಕಾರ್ಯಕ್ರಮದಲ್ಲಿ ನಮನ ಅಕಾಡೆಮಿಯ ಗುರು ಹಾಗೂ 8 ಜನ ಶಿಷ್ಯರು ಸುಮಾರು 40 ನಿಮಿಷಗಳವರೆಗೆ ಪ್ರದರ್ಶನವನ್ನು ನೀಡಿ ಅದನ್ನು ಪರಮೇಶ್ವರನಿಗೆ ಅರ್ಪಿಸಿದರು. ವಿಶೇಷವೆಂದರೆ ಗುರು ಮಾಧವಿ ಡಿ ಕೆ ಅವರು ಪ್ರದರ್ಶಿಸಿದ ಶಿವಾಷ್ಟಕಮ್ ನೃತ್ಯಕ್ಕೆ ಅದೇ ಸಮಯದಲ್ಲಿ ಶ್ರೀ ರವಿ ಹುದ್ದಾರ್, ಪ್ರೊಫೈಟರ್ , ಸ್ವಸ್ತಿ ಆರ್ಟ್ ಗ್ಯಾಲರಿ, ತರಳಬಾಳು ಬಡಾವಣೆ, ದಾವಣಗೆರೆ ಇವರು ರಚಿಸಿದ ಶಿವನ ಚಿತ್ರವು ಎಲ್ಲರ ಮೆಚ್ಚುಗೆ ಗಳಿಸಿತು. ನಂತರ ಲಿಂಗೇಶ್ವರ ದೇವಸ್ಥಾನ, ಶ್ರೀ ಕೂಡಲಿ ಶಂಕರ ಮಠ ಹಾಗೂ ಕೊನೆಯದಾಗಿ ವಿದ್ಯಾನಗರದ ಈಶ್ವರ ಪಾರ್ವತಿ ದೇವಸ್ಥಾನದಲ್ಲಿ ಶಿವಸ್ಮರಣೆ ನೃತ್ಯ ಜಾಗರಣೆಯ ಕಾರ್ಯಕ್ರಮವನ್ನು ನೀಡಲಾಯಿತು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!