ಜಾಗತಿಕ ವಿಷಯಗಳ ಬಗ್ಗೆ ತಿಳಿದುಕೊಳ್ಳಿ: ಪ್ರೊ. ನಾರಾಯಣಸ್ವಾಮಿ

WhatsApp Image 2022-03-12 at 15.24.28

ದಾವಣಗೆರೆ : ವಾಣಿಜ್ಯ ವಿದ್ಯಾರ್ಥಿಗಳು ಜಾಗತಿಕ ವ್ಯವಹಾರಗಳ ಬಗ್ಗೆ ಮತ್ತು ಪ್ರಚಲಿತ ವಿದ್ಯಾಮಾನಗಳ ಕುರಿತು ಪ್ರತಿ ನಿತ್ಯ ತಿಳಿಯುವ ಪ್ರಯತ್ನ ಮಾಡಿ ಜ್ಞಾನವನ್ನು ಬೆಳಿಸಿಕೊಳ್ಳಬೆಕು. ಎ೦ದು ಪ್ರೊ. ನಾರಾಯಾಣಸ್ವಾಮಿಯವರು ಹೇಳಿದರು. ಅವರು ಇ೦ದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ಸ್ನಾತಕೋತ್ತರ ವಿಭಾಗದ ವತಿಯಿಂದ ಆಯೋಜಿಸಿದ್ದ ಪ್ರಥಮ ವರ್ಷದ ಎಂಕಾಂ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು . ಜಾಗತಿಕ ವಿದ್ಯಮಾನಗಳು ವಿದ್ಯಾರ್ಥಿಗಳ ಆಸಕ್ತಿ ಮೂಡಿಸುವಂಥದ್ದು ಆಸಕ್ತಿವಹಿಸಿ ಹಂಬಲದಿಂದ ಅವುಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಅಂತರ್ ವಿಷಯಗಳ ಬಗ್ಗೆ ಆಸಕ್ತಿವಹಿಸಬೇಕು. ಆಡಳಿತಾತ್ಮಕ ಸೇವೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು. ಯಶಸ್ವಿಯಾಗಿ ಪ್ರಾಮಾಣಿಕತೆಯಿoದ ಸೇವೆ ನೀಡಬೆಕು ಎಂದು ಸಲಹೆ ನೀಡಿದರು. ಮುಖ್ಯ ಅತಿಥಿಗಳಾಗಿ ವೆಂಕಟೇಶ್ ಬಾಬು ಅವರು ಮಾತನಾಡುತ್ತಾ ಇದು ಬದಲಾವಣೆಯ ಕಾಲ ಬೇರೆಯವರು ಬದಲಾಗಲಿಲ್ಲ ಎಂದು ದೂಷಿಸುವುದಕ್ಕಿಂತ ತಾವು ಬದಲಾಗುವುದು ಉತ್ತಮ ಇದರಿಂದ ಬದುಕು ಬದಲಾಗುತ್ತದೆ ಎಂದು ಹೇಳಿದರು. ಸಾಮಾಜಿಕವಾಗಿ ಆರ್ಥಿಕವಾಗಿ ಪ್ರಸ್ತುತ ದಿನಮಾನಗಳಲ್ಲಿ ಬದಲಾವಣೆಯಾಗುತ್ತಿದೆ ವಿದ್ಯಾರ್ಥಿಗಳು ಕೂಡಅದಕ್ಕೆ ತಕ್ಕಂತೆ ಬದಲಾಗಬೇಕು ಎಂದು ಹೇಳಿದರು.

ಪ್ರಾಧ್ಯಾಪಕರಾದ ನಾಗರಾಜ್ ಆರ್ ಸಿ ಅಮೂಲ್ಯ ರವಿ ಸಿಂಗ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನಕಟ್ಟೆ ಜಯಣ್ಣರವರು ವಿದ್ಯಾರ್ಥಿಗಳು ಹೊಸ ಪರಿಸರಕ್ಕೆ ಹೊಂದಿಕೊಂಡು ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು ತಮ್ಮ ವಿದ್ಯಾರ್ಥಿ ಜೀವನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು . ಕಾರ್ಯಕ್ರಮದಲ್ಲಿ ಕುಮಾರಿ ಕಾವ್ಯಾ ಹಾಗೂ ಹರ್ಷಿತಾ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಸಂಜನಾ ಅತಿಥಿಗಳನ್ನು ಸ್ವಾಗತಿಸಿದರು ಮೆಘನಾರವರು ವಂದಿಸಿದರು. ಕುಮಾರಿ ಶ್ವೇತಾ ಹಾಗೂ ವಿಜಯಕುಮಾರ ಕಾರ್ಯಕ್ರಮವನ್ನು ನಿರೂಪಿಸಿದರು. ವಿಭಾಗದ ಎಲ್ಲ ಅಧ್ಯಾಪಕರು ಮತ್ತು ಬೋಧಕೇತರರು ಭಾಗವಹಿಸಿದ್ದರು .

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!