ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್ ಮುಖ್ಯಾಂಶಗಳು!

ದಾವಣಗೆರೆ : ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಇಂದು ನಡೆದ 2021-22ನೇ ಸಾಲಿನ ಪರಿಷ್ಕೃತ ಹಾಗೂ 2022-23ನೇ ಸಾಲಿನ ಆಯ-ವ್ಯಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 21.56 ಕೋಟಿ ರೂ.ಗಳ ಉಳಿತಾಯ ಬಜೆಟ್ ಮಂಡಿಸಲಾಗಿದೆ. ಬಜೆಟ್ನ ಮುಖ್ಯಾಂಶಗಳು ಈ ಕೆಳಕಂಡ0ತಿವೆ.
ಮೂಲಭೂತ ಸೌಕರ್ಯ ಆಸ್ತಿಗಳ ನಿರ್ವಹಣೆ ಮತ್ತು ದುರಸ್ತಿ
* ಹೊರಗುತ್ತಿಗೆ ವೆಚ್ಚಗಳು
* ಉಗ್ರಾಣ ಸಾಮಾಗ್ರಿಗಳ ಖರೀದಿ
* ಸ್ಮಶಾನಗಳ ಅಭಿವೃದ್ದಿ
* ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು
* ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಐ.ಎ.ಎಸ್/ಕೆ.ಎ.ಎಸ್ ಗೆ ಆಯ್ಕೆಯಾಗಲು ತರಬೇತಿ
* ಅನಗತ್ಯವಾಗಿ ನಿರ್ಮಿಸಿರುವ ರಸ್ತೆ ಉಬ್ಬುಗಳನ್ನು ತೆರವುಗೊಳಿಸುವುದು ಹಾಗೂ ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕಾಮಗಾರಿ
* ನಗರ ಅರಣ್ಯೀಕರಣ ಹಾಗೂ ವಿಶ್ವ ಪರಿಸರ ದಿನಾಚರಣೆ
* ಮಳೆನೀರು ಮರುಪೂರಣ
* ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ನಗರದ ಕ್ರೀಡಾಪಟುಗಳಿಗೆ ಪ್ರೋತ್ಸಾಹ
* ವಯೋ ವೃದ್ಧಾಶ್ರಮಗಳಿಗೆ ಪರಿಕರವನ್ನು ನೀಡುವುದು
* ಉದ್ಯಾನವನಗಳನ್ನು ನಿರ್ವಹಣೆ ಮಾಡಲು ಪರಿಕರಗಳ ಖರೀದಿ
* ಡಿಜಿಟಲ್ ಗ್ರಂಥಾಲಯ ನಿರ್ಮಾಣ
* ಪಾಲಿಕೆ ಒಡೆತನದಲ್ಲಿ ಬರುವ ನಿವೇಶನದಲ್ಲಿ ಒಂದು ಸುಸಜ್ಜಿತವಾದ ಸಮುದಾಯ ಭವನ ನಿರ್ಮಿಸುವುದು
* ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಸರ್ಕಾರದ ವಿಶೇಷ ಅನುದಾನದಲ್ಲಿ ಅಭಿವೃದ್ಧಿ ಯೋಜನೆ
* ಅಂಗವಿಕಲತೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಉತ್ತಮ ಪರಿಕರಗಳನ್ನು ನೀಡುವುದು
* ಪೌರಸನ್ಮಾನ ಕಾರ್ಯಕ್ರಮ
* ಇ-ತ್ಯಾಜ್ಯ ಸಂಗ್ರಹಣಾ ಘಟಕ
* ಯಾಂತ್ರೀಕೃತ ಕಸಗುಡಿಸುವ ಯಂತ್ರ ಮತ್ತು ರೋಡ್ ಬ್ರೇಕರ್ ಮಿಷನ್ಗಳ ಖರೀದಿ
* ಪಾರಂಪರಿಕ ತ್ಯಾಜ್ಯ ವಿಲೇ ಪಡಿಸುವಿಕೆ
* ಘನತ್ಯಾಜ್ಯ ವಿಲೇವಾರಿ ಮಾಡಲು ನಗರದ ನಾಲ್ಕು ದಿಕ್ಕಿನಲ್ಲಿಯೂ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ನಿವೇಶನ ಖರೀದಿಸುವುದು
* ಮಹಾನಗರ ಪಾಲಿಕೆಯ ಪೌರಕರ್ಮಿಕರಿಗೆ ಹಾಜರಾತಿ ಸ್ಥಳಗಳಲ್ಲಿ ವಿಶ್ರಾಂತಿ ಗೃಹ ನಿರ್ಮಾಣ
* ಮಹಾನಗರ ಪಾಲಿಕೆಯ ಸದಸ್ಯರುಗಳ ಜ್ಞಾನಾರ್ಜನೆಗಾಗಿ ಅಧ್ಯಯನ ಪ್ರವಾಸ
* ಮಹಾನಗರ ಪಾಲಿಕೆಗಳ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಕೂಟ ಆಯೋಜನೆ
* ಮೇಯರ್ ಕಪ್
* ಬೀದಿ ಬದಿ ವ್ಯಾಪಾರಸ್ಥರಿಗೆ ಕಲ್ಯಾಣ ನಿಧಿ ಸ್ಥಾಪನೆ
* ವಿಕಲಚೇತನ ಬಡ ವಿದ್ಯರ್ಥಿಗಳಿಗೆ ಸೋಲಾರ್ ದೀಪ ವಿತರಣೆ
* ನಗರ ವ್ಯಾಪ್ತಿಯ ಹಳೇ ಮರಗಳನ್ನು ವೈಜ್ಞಾನಿಕ ರೀತಿಯಲ್ಲಿ ತೆರವುಗೊಳಿಸುವುದು
* ಕೈಗಾರಿಕಾ ವಸಾಹಾತು ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ
* ಪ್ರತಿ ಉದ್ಯಾನವನಗಳಲ್ಲಿ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ತೊಟ್ಟಿಗಳ ನಿರ್ಮಾಣ
* ಗರಡಿ ಮನೆ
* ದುಗ್ಗಮ್ಮನ ಬಾವಿಯನ್ನು ಅಭಿವೃದ್ಧಿ ಪಡಿಸುವುದು
* Sky Walk ನಿರ್ಮಾಣ
* ನಗರ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ಮಹಾತ್ಮರ ಪ್ರತಿಮೆಗಳಿಗೆ ಸುಣ್ಣ-ಬಣ್ಣ ಸೇರಿದಂತೆ ವೃತ್ತಗಳ ನವೀಕರಣಕ್ಕಾಗಿ
* ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಸ್ವಚ್ಛತಾ ಕಾರ್ಯಕ್ಕೆ ಪರಿಕರಗಳನ್ನು ವಿತರಿಸುವುದು
* ಕಸಾಯಿ ಖಾನೆ (Slaughter House) ನಿರ್ಮಾಣ
* ರಾಜಕಾಲುವೆಗಳಲ್ಲಿ ಹೂಳೆತ್ತುವ ಕಾಮಗಾರಿ
* ಒಳಚರಂಡಿ ದುರಸ್ಥಿ ಹಾಗೂ ನಿರ್ಮಾಣಕ್ಕಾಗಿ
* ಕನ್ನಡ ಅನುಷ್ಠಾನಕ್ಕಾಗಿ ಕಾರ್ಯಕ್ರಮ
* ಸಮುದಾಯ ಭವನ ನಿರ್ಮಾಣ ಹಾಗೂ ನವೀಕರಣ ಕಾಮಗಾರಿ
* ಮಾನಸಿಕ ಅಸ್ವಸ್ಥತೆಯ ಬಗ್ಗೆ ಅರಿವು ಮೂಡಿಸುವುದು
* ಕಛೇರಿಯ ಹಳೇ ಕಡತಗಳನ್ನು ಸಂರಕ್ಷಿಸುವುದು
* ಜೀವ ವೈವಿದ್ಯ ನಿರ್ವಹಣೆ ಸಂರಕ್ಷಣಾ ಚಿಕಿತ್ಸಾ ಕೇಂದ್ರ ಸ್ಥಾಪನೆ
* ತಾರಸಿ ಉದ್ಯಾನವನ
* ಆಯುರ್ವೇದ ಥೀಮ್ ಪಾರ್ಕ್
* ಬೋನ್ಸಾಯ್ ಉದ್ಯಾನವನ