Murder: ಉಚ್ಚಂಗಿದುರ್ಗದ ಬಳಿ ಸ್ನೇಹಿತರಿಂದಲೇ ಕೊಲೆಯಾದ ದಾವಣಗೆರೆ ನಿಟ್ಟುವಳ್ಳಿಯ ಯುವಕ..!

dhanya murder at Uchangidurga

ದಾವಣಗೆರೆ: ದಾವಣಗೆರೆ ನಿಟ್ಟುವಳ್ಳಿ ವಾಸಿ ಯುವಕನನ್ನ Davanagere Nittuvalli ಕೊಚ್ಚಿ ಕೊಲೆ ಮಾಡಿರುವ Murder ಘಟನೆ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗ ದೇವಸ್ಥಾನ Harapaahalli Uchangidurga Halammana Thopu ಸಮೀಪದ ಹಾಲಮ್ಮನ ತೋಪಿನ ಬಳಿ ನಡೆದಿದೆ.

ಕೊಲೆಗೆ ನಿಖರವಾದ ಕಾರಣಗಳು ತಿಳಿದು ಬಂದಿಲ್ಲವಾದರೂ ಸ್ನೇಹಿತರು ಸೇರಿಕೊಂಡು ಬಾಡೂಟ ಮಾಡುವ ಸಂದರ್ಭದಲ್ಲಿ ಸಣ್ಣಪುಟ್ಟ ವಿಚಾರ ದೊಡ್ಡದಾಗಿ ಬೇಳೆದು ಕೊಲೆಯ ಹಂತಕ್ಕೆ ತಿರುಗಿದೆ. ಈ ಬಗ್ಗೆ Arasikere Police Station ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕಾಗಿ ಕೊಲೆ ನಡೆದಿದೆ ಎನ್ನುವ ಬಗ್ಗೆ ತನಿಖೆಗೆ ಮುಂದಾಗಿದ್ದು Vijayanagara SP  ವಿಜಯನಗರ ಎಸ್ ಪಿ ಸ್ಥಳಕ್ಕೆ ಭೇಟಿ ನೀಡುವ ಸಾದ್ಯತೆ ಹೆಚ್ಚಿದೆ.

ಕೊಲೆಗೀಡಾದ ಯುವಕನನ್ನು ದಾವಣಗೆರೆ ನಗರದ ನಿಟುವಳ್ಳಿ ಧನ್ಯಕುಮಾರ್(ಧನ್ಯ) ಎನ್ನಲಾಗಿದೆ. ಊಟಕ್ಕೆ ಎಂದು ಕರೆದುಕೊಂಡು ಹೋಗಿ ಭರ್ಬರ ಹತ್ಯೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.

ದೇಹದಾರ್ಡ್ಯ ಪಟುವಾಗಿದ್ದ Weight Lifter ಧನ್ಯಕುಮಾರ್, ಹಲವಾರು ದೇಹದಾರ್ಡ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದರು. ಕೊಲೆಗೆ  ನಿಖರವಾದ ಕಾರಣ ತಿಳಿದು ಬಂದಿಲ್ಲವಾದರೂ, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸ್ನೇಹಿತರೇ ಆತನನ್ನು ಕರೆದುಕೊಂಡು ಹೋಗಿ  ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಉಚ್ಚಂಗಿದುರ್ಗದ ಹಾಲಮ್ಮ ತೋಪಿನಿಂದ ಬೆವಿನಹಳ್ಳಿ ತಾಂಡದ ಜಾಗದಲ್ಲಿ ರಕ್ತಸಿಕ್ತವಾಗಿ ಬಿದ್ದಿರುವ  ಧನ್ಯಕುಮಾರ್ ಮೃತ ದೇಹ ಪತ್ತೆಯಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಕೊಲೆಯ ಜಾಡು ಹಿಡಿದು ಆರೋಪಿಗಳ ಪತ್ತೆ ಕಾರ್ಯದಲ್ಲಿ  ತೊಡಗಿದ್ದಾರೆ. ಈ ಬಗ್ಗೆ ಅರಸೀಕೆರೆ ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

garudavoice21@gmail.com. 9740365719

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!