ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕರ ವರ್ಗಾವಣೆ! ದಾವಣಗೆರೆ ಉಪನಿರ್ದೇಶಕ ವಿಜಯಕುಮಾರ್ ಬಳ್ಳಾರಿಗೆ ವರ್ಗ

ddpi transfer dvg

ದಾವಣಗೆರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರು ವೃಂದದ ರಾಜ್ಯದ ವಿವಿಧ ಜಿಲ್ಲೆಗಳ ಅಧಿಕಾರಿಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಒಟ್ಟು 8 ಜನ ಉಪನಿರ್ದೇಶಕರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಅದರೆಂತೆ ದಾವಣಗೆರೆ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ ಹೆಚ್. ಇವರನ್ನು ಬಳ್ಳಾರಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
ದಾವಣಗೆರೆ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಸ್ಥಾನಕ್ಕೆ ತುಮಕೂರಿನ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣ ಘಟಕ ಹಾಗೂ ಉಪನಿರ್ದೇಶಕರು, ಪಿಡಿಎಂ ತನಿಖೆ, ಪ್ರಧಾನ ಕಚೇರಿ ಹುದ್ದೆಯ ಅಧಿಕ ಪ್ರಭಾರರಾದ ವಾಸಂತಿ ಉಪ್ಪಾರ್ ಅವರನ್ನು ನೇಮಿಸಲಾಗಿದೆ.

ಉಸ್ಮಾನ ವಿ ಉಪನಿರ್ದೇಶಕರು (ಸ್ಥಳ ನಿರೀಕ್ಷಣೆಯಲ್ಲಿ) ಇವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಸನಕ್ಕೆ, ಬಳ್ಳಾರಿ ಜಿಲ್ಲೆ ಉಪನಿರ್ದೇಶಕ ನಾಗರಾಜ ಆರ್., ಇವರನ್ನು ಮಂಡ್ಯ ಜಿಲ್ಲೆಯ ರಾಜಮೂರ್ತಿ ಎಸ್., ಅವರ ಜಾಗಕ್ಕೆ ಹಾಗೂ ಮಂಡ್ಯ ಜಿಲ್ಲೆಯ ರಾಜಮೂರ್ತಿ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಖಾಲಿ ಹುದ್ದೆಗೆ, ದಕ್ಷಿಣ ಕನ್ನಡ ಜಿಲ್ಲೆಯ ಇಲಾಖೆಯ ಉಪನಿರ್ದೇಶಕ ಪಾಪಾಬೋವಿ ಇವರನ್ನು ಉಡುಪಿ ಜಿಲ್ಲೆಯ ಖಾಲಿ ಹುದ್ದೆಗೆ, ಕೊಪ್ಪಳ ಜಿಲ್ಲೆಯ ಉಪನಿರ್ದೇಶಕ ಕೆ.ಎಸ್. ರಾಜಾನಾಯ್ಕ್ ಇವರನ್ನು ಚಿಕ್ಕಮಗಳೂರು ಜಿಲ್ಲೆಯ ಪದ್ಮಾವತಿ ಅವರ ಜಾಗಕ್ಕೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಉಪನಿರ್ದೇಸಕರಾದ ಪದ್ಮಾವತಿ ಅವರನ್ನು ಕೊಪ್ಪಳ ಜಿಲ್ಲೆಯ ರಾಜಾನಾಯ್ಕ್ ಕೆ.ಎಸ್. ಇವರ ಜಾಗಕ್ಕೆ ವರ್ಗಾಯಿಸಿ ಜೂನ್. 4ರ,2022ರಂದು ಅಧಿಸೂಚನೆ ಹೊರಡಿಸಲಾಗಿದೆ.

garudavoice21@gmail.com 9740365719

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!