ಮಹಾಂತೇಶ್ ಬೀಳಗಿ ಜಿಲ್ಲಾಧಿಕಾರಿ ಎನ್ನುವುದಕ್ಕಿಂತ, ಜನಾಧಿಕಾರಿ ಎನ್ನಬಹುದೇ.,?

WhatsApp Image 2022-07-12 at 7.34.17 PM

ದಾವಣಗೆರೆ: ಶ್ರೀಸಾಮಾನ್ಯರ ಜಿಲ್ಲಾಧಿಕಾರಿ ಎಂದು ಖ್ಯಾತಿ ಹೊಂದಿದ್ದ ಮಹಾಂತೇಶ್ ಬೀಳಗಿ ಯವರು 2 ವರ್ಷ 11 ತಿಂಗಳ ನಂತರ ದಾವಣಗೆರೆ ಜಿಲ್ಲೆಯಿಂದ ವರ್ಗಾವಣೆ ಆಗುತ್ತಿರುವುದು ಜಿಲ್ಲೆಯ ಶ್ರೀ ಸಾಮಾನ್ಯನಿಗೆ ಬಹಳ ಬೇಸರವಾಗಿದೆ ಎನ್ನಬಹುದು ಯಾಕೆಂದರೆ ಜಿಲ್ಲೆಯ ಕಟ್ಟ ಕಡೆಯ ಗ್ರಾಮಕ್ಕೂ ರಸ್ತೆ ಕಲ್ಪಿಸಿದ ಮಹಾನ್ ವ್ಯಕ್ತಿ, ಸಾರ್ವಜನಿಕರ ಸಮಸ್ಯೆಗಳಿಗೆ ಸದಾ ಹಸನ್ಮುಖಿಯಾಗಿ ಪರಿಹಾರ ನೀಡಿದಂತಹ ದಿಟ್ಟ ಅಧಿಕಾರಿ, ಜಿಲ್ಲಾಧಿಕಾರಿಗಳೊಂದಿಗೆ ಸಾಮಾನ್ಯ ನಾಗರಿಕರು ಇಷ್ಟು ಧೈರ್ಯವಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂಬ ವಾತಾವರಣವನ್ನು ನಿರ್ಮಿಸಿದಂತಹ ವ್ಯಕ್ತಿ ಇವರು ಎಂದರೆ ಉತ್ಪೇಕ್ಷೆಯಾಗದು.

ವರ್ಗಾವಣೆ ಎನ್ನುವುದು ಸರ್ಕಾರಿ ನೌಕರಿಯಲ್ಲಿ ನಿರೀಕ್ಷಿತ ಎನ್ನುವ ಕಾರಣಕ್ಕೆ ಇವರ ವರ್ಗಾವಣೆಯನ್ನು ಜಿಲ್ಲೆಯ ಜನ ಸಹಿಸಿಕೊಳ್ಳಬಹುದು ಆದರೆ ಇಂತಹ ಅಧಿಕಾರಿಯನ್ನು ಮರೆಯಲು ಮಾತ್ರ ಸಾಧ್ಯವಿಲ್ಲ.

ಕೋವಿಡ್ ಸಮಯದಲ್ಲಿ ನೂರಾರು ಜೀವ ಉಳಿಸಿದ ಖ್ಯಾತಿ, ರೋಗಿಗಳು ಅವರ ಕುಟುಂಬಸ್ಥರು ಮಾಡಿದ ಮನವಿಗೆ ಸ್ಪಂದಿಸಿದ ರೀತಿ ಅವರಿಂದ ಅನುಕೂಲ ಪಡೆದ ಯಾರೊಬ್ಬರೂ ಮರೆಯಲಾರರು.

ಇವರ ಅವಧಿಯಲ್ಲಿ ಜಿಲ್ಲೆಯಲ್ಲಿ ಬಹುಶಃ ಇವರ ಗಮನಕ್ಕೆ ಬರದೇ ಸಮಸ್ಯೆಗಳು ಉಳಿದಿರಬಹುದೇ ವಿನಹ ಇವರ ಗಮನಕ್ಕೆ ಬಂದು ಪರಿಹಾರವಾಗದೆ ಇರಲು ಸಾಧ್ಯವೇ ಇಲ್ಲ ಎನ್ನುವುದಕ್ಕೆ ನೂರಾರು ಉದಾಹರಣೆಗಳನ್ನು ನೀಡಬಹುದು.

ಅಧಿಕಾರದಲ್ಲಿರುವ ಪಕ್ಷಕ್ಕೆ ಸಹಕಾರಿ ರೀತಿ ವರ್ತಿಸುತಿದ್ದಾರೆ ಎನ್ನುವ ಅಪವಾದವನ್ನು ಕೆಲವರು ಮಾಡುತ್ತಿದ್ದರು ಸಹ, ಅಧಿಕಾರಿಗಳು ಅಧಿಕಾರದಲ್ಲಿರುವ ಪಕ್ಷದ ಮಾತನ್ನು ಕೇಳಲೇಬೇಕಾದ ಅನಿವಾರ್ಯತೆ ಇರುತ್ತದೆ ಎನ್ನುವುದನ್ನು ನೆನೆಯೋಣ.

ಮುಂದೆ ಬರುವಂತಹ ಅಧಿಕಾರಿಗಳು ಸಹ ಶ್ರೀಸಾಮಾನ್ಯನಿಗೆ ಹತ್ತಿರವಾಗಿ ಅವರ ಸಮಸ್ಯೆಗಳಿಗೆ ಪರಿಹಾರ ನೀಡುವಂತಾಗಲಿ ಎಂದು ಬಯಸುತ್ತಾ ವರ್ಗಾವಣೆಗೊಂಡು ಹೋಗುತ್ತಿರುವ ಶ್ರೀ ಮಹಾಂತೇಶ್ ಬೀಳಗಿಯವರಿಗೆ ಅವರ ಅವಧಿಯಲ್ಲಿ ಜಿಲ್ಲೆಯಲ್ಲಿ ಮಾಡಿದ ಅತ್ಯುತ್ತಮ ಕಾರ್ಯಕ್ರಮಗಳಿಗೆ ಧನ್ಯವಾದಗಳನ್ನು ತಿಳಿಸೋಣ.

ಕೆ.ಎಲ್.ಹರೀಶ್ ಬಸಾಪುರ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!