ದಾವಣಗೆರೆಯ ಡಾಂಗೇ ಪಾರ್ಕ್ ಬಳಿ ಯುವಕನ ಕೊಲೆ.! ಸ್ಥಳಕ್ಕೆ ಎಸ್ ಪಿ ರಿಷ್ಯಂತ್ ಭೇಟಿ

ದಾವಣಗೆರೆ: ದಾವಣಗೆರೆ ನಗರದ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಡಾಂಗೆ ಪಾರ್ಕ್ ಬಳಿ ಅಣ್ಣ ತಮ್ಮನ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ.
ಹಲವು ವರ್ಷ ವರ್ಷಗಳಿಂದ ಡಾಂಗೇ ಪಾರ್ಕ್ ಕಾಂಪೌಂಡ್ ಬಳಿ ತಾಯಿ ಜೊತೆ ಇಬ್ಬರು ಮಕ್ಕಳು ತಾಡಪಾಲುಗಳಿಂದ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದರು. ಇಂದು ಜಮೀರ್ ತನ್ನ ಸಹೋದರ ಶೌಕತ್ ಆಲಿಯನ್ನು ವಾಸವಿದ್ದ ಸ್ಥಳದಲ್ಲೇ ಕೊಲೆ ಮಾಡಿದ್ದಾನೆ.
ಸಹೋದರರಿಬ್ಬರೂ ಪಂಚರ್ ಹಾಕಲು ಬಳಸುವ ಸೊಲುಷನ್ ಸೇವನೆಯ ಚಟದ ದಾಸರಾಗಿದ್ದರು, ಸ್ಥಳೀಯರ ಜೊತೆ ಹಲವು ಸಲ ಜಗಳವಾಡುತ್ತಿದ್ದರು, ಇವರನ್ನ ಬೇರೆ ಕಡೆ ಸ್ಥಳಾಂತರಿಸಿದ್ದರೂ ಪುನಃ ಇಲ್ಲೆ ಬಂದು ವಾಸ ಮಾಡುತ್ತಿದ್ದರು.
ಕೊಲೆ ಪ್ರಕರಣದ ಘಟನಾ ಸ್ಥಳಕ್ಕೆ ದಾವಣಗೆರೆ ಪೊಲೀಸ್ ಅಧೀಕ್ಷಕರಾದ ಸಿ. ಬಿ. ರಿಷ್ಯಂತ್ ಬೇಟಿ ನೀಡಿ ಪರಿಶೀಲಿಸಿದರು. ತನಿಖಾಧಿಕಾರಿಗಳಿಗೆ ಸೂಕ್ತ ತನಿಖಾ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ಶ್ರಿ ಆರ್. ಬಿ.ಬಸರಗಿ ರವರು, ನಗರ ಡಿವೈಎಸ್ಪಿ ಶ್ರಿ ನರಸಿಂಹ ವಿ ತಾಮ್ರದ್ವಜ, ಸಿಪಿಐ ಶ್ರಿ ಗಜೇಂದ್ರಪ್ಪ, ಕೆಟಿಜೆ ನಗರ ಪಿಎಸೈ ಪ್ರಭು ಕೆಳಗಿನಮನೆ ಉಪಸ್ಥಿತರಿದ್ದರು.