ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪತ್ರಾಂಕಿತ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಂಡ ಜಗದೀಶ ನಾಯ್ಕ

ದಾವಣಗೆರೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆ ಇಲ್ಲಿಗೆ ಶ್ರೀ ಜಗದೀಶ್ ನಾಯ್ಕ ರವರು ಪತ್ರಾಂಕಿತ ವ್ಯವಸ್ಥಾಪಕ ರಾಗಿ ಅಧಿಕಾರ ವಹಿಸಿಕೊಂಡರು. ಅವರು ಇಲ್ಲಿವರೆಗೂ ಹಿರೇಕೆರೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ಫ್ರೆಂಚ್ ಪನ್ನರಾದ ಸಾಯಿರಾ ಬಾನು ಫಾರೂಕಿಯವರು ಸಿ ಜಗದೀಶ್ ಅವರನ್ನು ಸ್ವಾಗತಿಸಿ ಕಾಲೇಜಿನ ಎಲ್ಲಾ ಸಿಬ್ಬಂದಿಗಳ ಪರಿಚಯ ಮಾಡಿಕೊಟ್ಟರು. ಜಗದೀಶ್ ರವರು ಮಾತನಾಡುತ್ತಾ ಈ ಹಿಂದೆ ಇದೇ ಕಾಲೇಜಿನಲ್ಲಿ ಸೇವೆ ಮಾಡಿರುವ ಅನುಭವ ಇರುವುದರಿಂದ ಎಲ್ಲಾ ಸಹೋದ್ಯೋಗಿ ಮಿತ್ರರೊಂದಿಗೆ ಹೊಂದಿಕೊಂಡು ಕಾಲೇಜನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ನನ್ನ ಕೈಲಾದ ಸೇವೆ ಮಾಡುತ್ತೇನೆಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರೊ ಗಿರಿಸ್ವಾಮಿ ಪ್ರೊಸೆಸರ್ ಬಿ ಬಿ ಸುಣಗಾರ್ ಪ್ರೊಸೆಸರ್ ವೀರೇಶ್ ಪ್ರೊ ಮಂಜಣ್ಣ ಟಿ ವೆಂಕಟೇಶ್ ಬಾಬು ಮಂಜುನಾಥ್ ಮರುಳಸಿದ್ದಪ್ಪ ಪ್ರಕಾಶ್ ಶ್ರೀ ತಿರುಮಲ ಪ್ರೊ ಕೆ ಶ್ಯಾಮಲಾ ಷಣ್ಮುಖ ಅಮೂಲ್ಯ ಹಾಗೂ ಎಲ್ಲಾ ಉಪನ್ಯಾಸಕ ವರ್ಗದವರು ಹಾಜರಿದ್ದರು