ಪಡಿತರ ಅಕ್ಕಿ ಕಾಳ ಸಂತೆಕೋರರಿಗೆ ಸಿಂಹಸ್ವಪ್ನವಾದ ದಾವಣಗೆರೆ ಪೊಲೀಸ್.! 2 ವಾರದಲ್ಲಿ 50 ಟನ್ ಅಕ್ಕಿ ಜಪ್ತಿ.!
ದಾವಣಗೆರೆ: ಸರ್ಕಾರದಿಂದ ವಿತರಿಸುತ್ತಿರುವ ಪಡಿತರ ಅಕ್ಕಿಯನ್ನು ಪರ ಊರಿಗೆ ಸಾಗಾಟ ಮಾಡುತ್ತಿರುವ ಲಾರಿಯನ್ನು ತಡೆದು ಸುಮಾರು 23 ಟನ್ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿಪಿಐ ಗುರುಬಸವರಾಜ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ದೀಪಕ್ ಎಂಬುವವರಿಗೆ ಸೇರಿದ ಲಾರಿಯಲ್ಲಿ ಇಂದು ರಾಣೆಬೆನ್ನೂರಿನಿಂದ ತುರುವೆಕೆರೆಗೆ ಪಡಿತರ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು.
ಕಾಳಸಂತೆಕೋರರ ಪಾಲಗುತ್ತಿರುವ ಅಕ್ಕಿಯನ್ನು ವಶಕ್ಕೆ ಪಡೆಸಿಕೊಳ್ಳುವಲ್ಲಿ ವಿದ್ಯಾನಗರ ಠಾಣೆ ಪೊಲೀಸರ ತಂಡ ಯಶಸ್ವಿಯಾಗಿದೆ.
ಹತ್ತು ದಿನದಲ್ಲಿ ಇದು ಎರಡನೇ ಪ್ರಕರಣವಾಗಿದ್ದು, ಪ್ಲಾಸ್ಟಿಕ್ ಚೀಲದಿಂದ ಗೋಣಿ ಚೀಲಕ್ಕೆ ಅಕ್ಕಿಯನ್ನು ಹಾಕಿಕೊಂಡು ತುರುವೆಕೆರೆಗೆ ಸಾಗಿಸಲಾಗುತ್ತಿತ್ತು. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.