ಸರ್ಕಾರದ ಆದೇಶದಲ್ಲಿ ‘ಕನ್ನಡ ಪದಗಳಿಗೆ’ ಅವಮಾನ.!

ಬೆಂಗಳೂರು: ರಾಜ್ಯ ಸರ್ಕಾರದ ಆದೇಶದಲ್ಲಿ ಕನ್ನಡ ಪದಗಳ ನ್ಯೂನತೆಗಳು.
ರಾಜ್ಯದ ಎಲ್ಲಾ ಸರ್ಕಾರಿ ಇಲಾಖಾ ಕಚೇರಿಗಳಲ್ಲಿ ಅನುಮತಿ ಇಲ್ಲದೆ ಸಾರ್ವಜನಿಕರು ಫೋಟೋ, ವಿಡಿಯೋ ತೆಗೆಯುವುದನ್ನು ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿತ್ತು, ಈ ಆದೇಶವನ್ನು ಜುಲೈ15 ರ ರಾತ್ರಿ ವಾಪಾಸ್ ಪಡೆಯಲಾಗಿದೆ ಎಂಬ ಆದೇಶದ ಪತ್ರದಲ್ಲಿ ತಪ್ಪುಗಳ ಸರಮಾಲೆ ಎದ್ದುಕಂಡಿದೆ ಅಲ್ಲದೆ ಸರ್ಕಾರಿ ಆದೇಶದಲ್ಲಿ ಕನ್ನಡಕ್ಕೆ ಅವಮಾನ ಮಾಡಲಾಗಿದೆ.
ಸರ್ಕಾರಿ ನೌಕರರ ಸಂಘದ ಮನವಿಯ ಮೇರೆಗೆ ಸರ್ಕಾರ ಆದೇಶ ಹೊರಡಿಸಿತ್ತು, ಆ ಆದೇಶಕ್ಕೆ ರಾಜ್ಯದಲ್ಲಿ ತೀವ್ರ ಆಕ್ಷೇಪಣೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರಿ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ, ವಿಡಿಯೋ ತೆಗೆಯಬಾರದು ಎನ್ನುವ ಆದೇಶವನ್ನು ತಡರಾತ್ರಿ ವಾಪಾಸ್ ಪಡೆಯಲಾಗಿದೆ ಎಂದು ಸರ್ಕಾರದ ಉಪ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿದ ಸುಧಾರಣೆ ಇಲಾಖೆ (ಸೇವೆಗಳು) ಇವರು ಆದೇಶ ಹೊರಡಿಸಿದ್ದಾರೆ.
ಆದೇಶದಲ್ಲಿ ಪತ್ರದಲ್ಲಿ ಈ ಕೆಳಕಂಡ ನ್ಯೂನತೆಗಳನ್ನು ನೋಡಬಹುದು.
‘ನಡಾವಳಿಗಳು ಬದಲು ನಡವಳಿಗಳು’
‘ಪ್ರಸ್ತಾವನೆ ಬದಲು ಪ್ರಸತ್ತಾವನೆ’
ಮೇಲೆ ಬದಲು ಮೇಲೇ,
ಭಾಗ-1 ಬದಲು ಬಾಗ,
ಕರ್ನಾಟಕ ಬದಲು ಕರ್ನಾಟ,
ಆಡಳಿತ ಬದಲು ಆಡಳಿದ