Audi Car Accident: ಐಷಾರಾಮಿ ಕಾರ್ ಅಪಘಾತ| ಶಾಸಕರ ಪುತ್ರ ಸೇರಿ 7 ಮಂದಿ ದುರ್ಮರಣ

ಬೆ‌ಂಗಳೂರು: ಅಡಿ ಕ್ಯೂ ಕಾರ್ ಡಿಕ್ಕಿಯಾಗಿ 7 ಜನ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಕೋರಮಂಗಲದಲ್ಲಿ ತಡರಾತ್ರಿ ಮಂಗಳ ಕಲ್ಯಾಣ ಮಂಟಪದ ಬಳಿ ಈ ಭೀಕರ ದುರ್ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಐಷಾರಾಮಿ ಆಡಿ ಕ್ಯೂ 3 ಕಾರು ಡಿಕ್ಕಿ ಹೊಡೆದಿದ್ದು. ಘಟನೆ ವೇಳೆ ಕಾರಿನಲ್ಲಿ ಇದ್ದ ನಾಲ್ಕು ಪುರುಷರು ಮೂವರು ಮಹಿಳೆಯರು ಸೇರಿ ಒಟ್ಟು ಏಳು ಮಂದಿ ಸಾವಿಗೀಡಾಗಿದ್ದಾರೆ . KA 03 MY 6666 ಈ ನಂಬರಿನ ಕಾರು ಅಪಘಾತದ ರಭಸಕ್ಕೆ ಸಂಪೂರ್ಣ ನಜ್ಜುಗುಜ್ಜಾಗಿದೆ.

ಕಾರಿನ ಎಡಭಾಗದ 2 ಟೈರ್ ಸಂಪೂರ್ಣ ತುಂಡು ತುಂಡು ಆಗಿದೆ.
ಈ ಘಟನೆ ತಡರಾತ್ರಿ ರಾತ್ರಿ ಸುಮಾರು 1 : 30 ರ ವೇಳೆ ನಡೆದಿದೆ ಎನ್ನಲಾಗಿದ್ದು , ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ .ಸ್ಥಳಕ್ಕೆ ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .
6 ಜನರು ಸ್ಥಳದಲ್ಲೇ ಮೃತಪಟ್ಟಿದ್ದು , ಒಬ್ಬರು ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿದ್ದಾರೆ.

ಅಪಘಾತಕ್ಕೆ ಅತಿ ವೇಗವೇ ಕಾರಣ . ವೇಗದ ಚಾಲನೆಯಿಂದ ಅಪಘಾತ ಸಂಭವಿಸಿದೆ . ಫುಟ್‌ಪಾತ್‌ ಹತ್ತಿ 2 ಬೋಲ್ಲಾರ್ಡ್ಸ್‌ಗೆ ಕಾರು ಡಿಕ್ಕಿಯಾಗಿದೆ . ಬಳಿಕ ಪಕ್ಕದ ಕಟ್ಟಡದ ಗೋಡೆಗೂ ಗುದ್ದಿದೆ . ನಂತರ ಕಂಬಕ್ಕೆ ಡಿಕ್ಕಿ ಹೊಡೆದಿದೆ .
ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಅಪಘಾತದಲ್ಲಿ ಮೃತಪಟ್ಟವರೆಲ್ಲ ಸ್ನೇಹಿತರಾಗಿದ್ದು , 20 ರಿಂದ 30 ವರ್ಷದವರಾಗಿದ್ದಾರೆ . ಹೊಸೂರು ಮೂಲದ ಡಿಎಂಕೆ ಶಾಸಕರ ಪುತ್ರ ಕರುಣಾಸಾಗರ್ , ಪತ್ನಿ ಬಿಂದು ( 28 ) , ಕೇರಳ ಮೂಲದ ಅಕ್ಷಯ್ ಗೋಯಲ್ , ಇಶಿತಾ ( 21 ) , ಧನುಷಾ ( 21 ) , ಹುಬ್ಬಳ್ಳಿಯ ರೋಹಿತ್ , ಹರಿಯಾಣ ಮೂಲದ ಉತ್ಸವ್ ಮೃತ ದುರ್ದೈವಿಗಳು . ಇವರೆಲ್ಲ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಬಂದು ಬೇರೆ ಬೇರೆ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!