ಬಡವರ ಸೇವೆ ಮಾಡಿದರೆ ದೇವರ ಸೇವೆ ಮಾಡಿದಂತೆ – ಶ್ರೀ ಬಸವಪ್ರಭು ಸ್ವಾಮೀಜಿ

ದಾವಣಗೆರೆ: ಆ 20- ಕೋರೊನಾ ಸಂಕಷ್ಟದಲ್ಲಿ ಬಡವರಿಗೆ ಆಹಾರ ಕಿಟ್ ಮತ್ತು ಔಷಧೋಪಚಾರಗಳನ್ನು ನಿರಂತರವಾಗಿ ನೀಡುತ್ತಾ ಬಂದಿರುವ ಲೋಕಿಕೆರೆ ನಾಗರಾಜ್ ರವರು ಬಡವರ ಸೇವೆ ಮಾಡಿ ದೇವರನ್ನ ಕಾಣುತ್ತಿದ್ದಾರೆ ಎಂದು ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮೀಜಿಯವರು ಆಶೀರ್ವಾದಿಸಿ ಮಾತನಾಡಿದರು..ಇಂದು ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ರವರ ಜನ್ಮದಿನವನ್ನ ಸರಳವಾಗಿ ಆಚರಿಸಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಆಶೀರ್ವಚನ ನೀಡುತ್ತಾ
ಹನ್ನೆರಡನೇ ಶತಮಾನದಲ್ಲಿ ಶೋಷಿತರ ಧ್ವನಿಯಾಗಿ ಸಾಮಾಜಿಕ ನ್ಯಾಯ ನೀಡಿದ ವಿಶ್ವಗುರು ಬಸವಣ್ಣನವರು ಹೇಳಿದಂತೆ ಬಡವರ ಸೇವೆ ಮಾಡುವ ಮೂಲಕ ದೇವರನ್ನ ಕಾಣಬೇಕು ಎನ್ನುವ ರೀತಿಯಲ್ಲಿ ದಣೆವರಿಯದೇ ಕೋರುನಾ ಸಂಕಷ್ಟದ ಸಮಯದಲ್ಲಿ ಬಡವರಿಗೆ.ಕಲಾವಿದರಿಗೆ.ಆಟೋ ಚಾಲಕರಿಗೆ.ಅಂಧಮಕ್ಕಳಿಗೆ.ಮಂಗಳಮುಖಿಯರಿಗೆ ಆಹಾರ ಕಿಟ್ ಮತ್ತು ಔಷಧೋಪಚಾರಗಳನ್ನ ನೀಡಿ ಸಂಕಷ್ಟದಲ್ಲಿ ಸಂಜೀವಿನಿಯಾಗಿದ್ದಾರೆ ಎಂದು ಲೋಕಿಕೆರೆ ನಾಗರಾಜ್ ರವರ ಮುಂದಿನ ದಿನಮಾನಗಳಲ್ಲಿ ಉತ್ತಮ ಭವಿಷ್ಯ ಸಿಗಲಿ ಎಂದು ಆಶೀರ್ವಾದಿಸಿದರು. ಈ ಸಂಧರ್ಭದಲ್ಲಿ ಮಹಾಪೌರ ಎಸ್.ಟಿ.ವಿರೇಶ್. ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಹಾಗೂ ಮಾಜಿ ನಗರ ಪಾಲಿಕೆ ಸದಸ್ಯ ದೇವರಮನಿ ಶಿವಕುಮಾರ್. ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್.ನಗರ ಪಾಲಿಕೆ ಸದಸ್ಯ ಶಿವನಗೌಡ ಪಾಟೀಲ್. ಬಿಜೆಪಿ ಹಿರಿಯಾ ಮುಖಂಡ ಟಿಂಕರ್ ಮಂಜಣ್ಣ ಉಪಸ್ಥಿತಿಯಲ್ಲಿದ್ದರು