ಬ್ಯಾಂಕಿಂಗ್ ಸೌಲಭ್ಯ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಬೇಕು – ಕೆ.ರಾಘವೇಂದ್ರ ನಾಯರಿ

IMG-20220723-WA0092

 

ದಾವಣಗೆರೆ: ಬ್ಯಾಂಕಿಂಗ್ ಸೌಲಭ್ಯವು ದೇಶದ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿಸುವುದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಕಳೆದೆರಡು ದಶಕಗಳಿಂದ ಹೋರಾಡುತ್ತಿದೆ.

ಆದರೆ ದೇಶದ 638000 ಹಳ್ಳಿಗಳ ಪೈಕಿ ಇಂದಿಗೂ ಕೇವಲ 35000 ಹಳ್ಳಿಗಳಲ್ಲಿ ಮಾತ್ರ ಬ್ಯಾಂಕಿಂಗ್ ಸೌಲಭ್ಯ ಲಭ್ಯವಿದೆ. ಈ ಅಸಮತೋಲನ ನಿವಾರಣೆಯಾಗಬೇಕಾದರೆ ಸರಕಾರವು ರಾಷ್ಟ್ರೀಕರಣದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು ಹಾಗೂ ವಿಸ್ತಾರಗೊಳಿಸಬೇಕು ಎಂದು ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್‌‌ನ ಜಂಟಿ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಹೇಳಿದರು.

ಬ್ಯಾಂಕ್ ರಾಷ್ಟ್ರೀಕರಣದ 53 ನೇ ವಾರ್ಷಿಕೋತ್ಸವದ ಅಂಗವಾಗಿ ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘವು ದಾವಣಗೆರೆಯ ಹೆಚ್‌ಐವಿ ಸೋಂಕಿತ ಅನಾಥ ಮಕ್ಕಳನ್ನು ಆರೈಕೆ ಮಾಡುತ್ತಿರುವ ವಿಬಿಎಫ್ ಫೌಂಡೇಶನ್‌ನ ಪ್ರೇರಣಾ ಮಕ್ಕಳ ಆರೈಕೆ ಕೇಂದ್ರಕ್ಕೆ ಆರ್ಥಿಕ ನೆರವು ನೀಡಿ ಮಾಡಿ ಕೆ.ರಾಘವೇಂದ್ರ ನಾಯರಿ ಮಾತನಾಡುತ್ತಿದ್ದರು.

ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಬಿ.ಆನಂದಮೂರ್ತಿ ಮಾತನಾಡಿ ಬ್ಯಾಂಕ್ ರಾಷ್ಟ್ರೀಕರಣ ನಮ್ಮ ದೇಶದ ಅಭಿವೃದ್ಧಿಯ ಹೆಬ್ಬಾಗಿಲಾಗಿದೆ. ಆದರೆ ಇತ್ತೀಚೆಗೆ ಸರಕಾರಗಳು ರಾಷ್ಟ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಖಾಸಗೀ ಬ್ಯಾಂಕಿಂಗ್ ನೀತಿಯನ್ನು ಜಾರಿಗೊಳಿಸುತ್ತಿರುವುದು ದೇಶ ವಿರೋಧಿಯಾಗಿದೆ‌. ದೇಶದ ಜನರು ಸರಕಾರಿ ಬ್ಯಾಂಕುಗಳ ಮೇಲೆ‌ ವಿಶ್ವಾಸವಿಟ್ಟಿದ್ದಾರೆಯೇ ವಿನಹ ಖಾಸಗಿ ಬ್ಯಾಂಕುಗಳ ಮೇಲೆ ಅಲ್ಲ. ಸರಕಾರವು ಪ್ರಸ್ತುತ ಇರುವ ರಾಷ್ಟ್ರೀಕೃತ ಬ್ಯಾಂಕುಗಳನ್ನು ಬಲಗೊಳಿಸುವುದರ ಜೊತೆಗೆ ಖಾಸಗಿ ಬ್ಯಾಂಕುಗಳನ್ನೂ ರಾಷ್ಟ್ರೀಕರಣಗೊಳಿಸಬೇಕು ಎಂದರು.

ವಿಬಿಎಫ್ ಫೌಂಡೇಶನ್‌ನ ಅಧ್ಯಕ್ಷ ಶಿವಕುಮಾರ ಮೇಗಳಮನೆ‌ ಬ್ಯಾಂಕ್ ನೌಕರರ ಸಂಘದ ನೆರವನ್ನು‌ ಸ್ವೀಕರಿಸಿ ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘವು ತನ್ನ ಸದಸ್ಯರ ಹಿತರಕ್ಷಣೆಯ ಜೊತೆಗೆ ಈ ರೀತಿಯ ಸಮಾಜಮುಖಿ ಸೇವೆಯನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಇತರ ಸಂಘ ಸಂಸ್ಥೆಗಳೂ ಇದೇ ರೀತಿ ನಮಗೆ ಸಹಕಾರ ನೀಡಿದಲ್ಲಿ‌ ನಮ್ಮ ವಿಬಿಎಫ್ ಫೌಂಡೇಶನ್ ಇನ್ನಷ್ಟು ಸೇವಾ ಕಾರ್ಯಗಳನ್ನು ನಡೆಸಲು ಪ್ರೇರಣೆಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಬಿ.ಆನಂದಮೂರ್ತಿ, ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ, ಖಜಾಂಚಿ ಕೆ.ವಿಶ್ವನಾಥ್ ಬಿಲ್ಲವ, ಉಪಾಧ್ಯಕ್ಷ ಆರ್.ಆಂಜನೇಯ, ಪದಾಧಿಕಾರಿಗಳಾದ ಪರಶುರಾಮ್, ಹೆಚ್.ಎಸ್.ತಿಪ್ಪೇಸ್ವಾಮಿ, ಸುರೇಶ್ ಚೌಹಾಣ್, ಕೆ.ಶಶಿಶೇಖರ್, ವಿ.ಆರ್.ಹರೀಶ್, ಅಮೃತಾ, ರಮೇಶ್, ಜ್ಞಾನೇಶ್ವರ ಮಾಕವಾಡೆ, ಎಸ್‌.ಪ್ರಶಾಂತ್ ಹಾಗೂ ಪ್ರೇರಣಾ ಮಕ್ಕಳ ಆರೈಕೆ ಕೇಂದ್ರದ ಶಂಭು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೆ.ರಾಘವೇಂದ್ರ ನಾಯರಿ
ಪ್ರಧಾನ ಕಾರ್ಯದರ್ಶಿ
ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!