ಮದ್ಯಪಾನ ನಿಷೇಧಕ್ಕೆ ಜಗಳೂರಿನ ಭೈರನಾಯಕನಹಳ್ಳಿ, ಪೇಟೆಕಣುಕುಪ್ಪೆ ಗ್ರಾಮಸ್ಥರ ಮನವಿ! ಮದ್ಯ ಮಾರಾಟಗಾರರು ಯಾರು ಗೊತ್ತಾ?

ದಾವಣಗೆರೆ: ಜಗಳೂರು ತಾಲೂಕಿನ ಭೈರನಾಯಕನಹಳ್ಳಿ ಹಾಗೂ ಪೇಟೆ ಕಣಕುಪ್ಪೆ ಗ್ರಾಮದಲ್ಲಿ ಮದ್ಯಪಾನ ನಿಷೇಧಿಸುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿದ್ದಾರೆ.

ಜಿಲ್ಲಾಧಿಕಾರಿಗಳಿಗೆ ಜೂನ್ 6ರ ಇಂದು ಮನವಿ ಸಲ್ಲಿಸಿರುವ ಗ್ರಾಮಸ್ಥರು ಮದ್ಯಪಾನ ಸೇವೆನೆಯಿಂದಾಗಿ ಗ್ರಾಮದಲ್ಲಿ ಅನೇಕರು ಸಾವನ್ನಪ್ಪಿದ್ದಾರೆ. ಅಷ್ಟೇಅಲ್ಲದೆ ಕೌಟುಂಬಿಕ ಗಲಾಟೆ, ಕಳ್ಳತನ, ದರೋಡೆ, ಹೆಣ್ಣು ಮಕ್ಕಳ ಮೇಲೆ ದುರ್ವತನೆ, ದೌರ್ಜನ್ಯ, ಲೈಂಗಿಕ ಕಿರುಕುಳದಂತಹ ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ಜಗಳೂರು ಪೊಲೀಸ್ ಠಾಣೆಯಲ್ಲಿ ಮನವಿ ಕೊಟ್ಟರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮದ್ಯಪಾನ ಮಾಡುವವರು ಯಾರು ಗೊತ್ತಾ?:
ಭೈರನಾಯಕನಹಳ್ಳಿ ಗ್ರಾಮದಲ್ಲಿ ಸಾರಾಯಿ ಓಬಣ್ಣ s/o ಓಬಪ್ಪ, ಮಂಜಮ್ಮ w/o ಮರೇಶ್, ಮಂಜಮ್ಮ w/o ಅಶೋಕ, ಬೋಸಪ್ಪ s/o ಸಟ್ಲ ಹನುಮಂತಪ್ಪ, ಮರೇಶ್ s/o ಸಣ್ಣಸಿದ್ದವ್ವರ ಸಿದ್ದಪ್ಪ, ರವಿಚಂದ್ರ s/o ಬುಲ್ಡಣ್ಣರ ಸಿದ್ದಪ್ಪ, ಹನುಮಂತಪ್ಪ s/o ಕ್ಯಾಸೇನಹಳ್ಳಿ ಚೌಡಪ್ಪ, ಕಡ್ಡಿಪುಡಿ ಹನುಮಂತಪ್ಪ s/o ದೊಡ್ಡ ಚೌಡಪ್ಪ, ಪಾಲಮ್ಮ w/o ದೊಡ್ಡನಿಂಗಪ್ಪ, ಪಾಲಮ್ಮ w/o ಗ್ವಾಲಿಓಬಯ್ಯ

ಪಟೇಕಣುಕುಪ್ಪೆ ಗ್ರಾಮದಲ್ಲಿ ರೇಣುಕಮ್ಮ w/o ಲಕ್ಷ್ಮಣ , ಶಿವಣ್ಣ s/o ಅಣಜಿನಾಗಪ್ಪ, ಹನುಮಂತಪ್ಪ s/o ಕ್ಯಾಸೇನಹಳ್ಳಿ ರುದ್ರಪ್ಪ ಇವರು ಮದ್ಯ ಮಾರಾಟ ಮಾಡುತ್ತಿದ್ದು, ಇವರೆಲ್ಲರಿಗೂ ವೆಂಕಟೇಶ್ವರ ಬಾರ್‌ನಿಂದ ಮಾಲೀಕರಾದ ರೆಡ್ಡಿಯವರು ಮದ್ಯ ಸರಬರಾಜು ಮಾಡುತ್ತಾರೆಂದು ಮನವಿಯಲ್ಲಿ ತಿಳಿಸಿದ್ದು, ಇವರೆಲ್ಲರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎರಡು ಗ್ರಾಮದ ಜನ ಮನವಿ ಮಾಡಿದ್ದಾರೆ.

 

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!