Bjp/Jds Love: ಸ್ವಜಾತಿಯ ಜೆಡಿಎಸ್ ಮಾಜಿ ಶಾಸಕರ ಪರ ಬ್ಯಾಟಿಂಗ್ ಮಾಡಿದ ಮಾಜಿ ಮೇಯರ್.? ಕಮಲ ಪಾಳಯದಲ್ಲೀಗ ಅಜಯಕುಮಾರ್ ಬಗ್ಗೆ ಬೇಸರ.!(?)

ದಾವಣಗೆರೆ: ಪಾಲಿಕೆಯ ಮಾಜಿ ಮೇಯರ್ ಬಿಜೆಪಿ ಸದಸ್ಯರಾಗಿರುವ ಬಿ.ಜೆ. ಅಜಯಕುಮಾರ್ ಜೆಡಿಎಸ್ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಗೆಲುವಿಗೆ ಬ್ಯಾಟಿಂಗ್ ಬೀಸಿದ್ದಾರೆ.
ಇತ್ತೀಚೆಗೆ ನಡೆದ ಲಿಂಗಾಯತ ಪಂಚಮಸಾಲಿ ಪ್ರತಿಜ್ಞಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಸ್ವಜಾತಿಯ ಕಾರಣಕ್ಕಾಗಿ ಅಜಯ್ ಕುಮಾರ್ ಅವರು ಶಿವಶಂಕರ್ ಅವರಿಗೆ ಐದೈದು ಜನರಂತೆ ಪ್ರಚಾರ ಮಾಡಿದರೂ ಸಾಕು ಹೆಚ್.ಎಸ್. ಶಿವಶಂಕರ್ ಅವರ ಗೆಲುವು ನಿಶ್ಚಿತ ಎಂದು ಕರೆ ನೀಡಿದ್ದಾರೆ.
ಇತ್ತ ಬಿಜೆಪಿ ಪಕ್ಷದವರು ಸ್ವಪಕ್ಷದವರ ಬಗ್ಗೆ ವಕಾಲತ್ತು ವಹಿಸಿ, ಸ್ವಪಕ್ಷೀಯ ಅಭ್ಯರ್ಥಿ ಪರವಾಗಿ ಮಾತನಾಡಬೇಕಿದ್ದ ಅಜಯಕುಮಾರ್ ಅವರು ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಕರೆ ನೀಡಿರುವುದ ಕಂಡು ಕನಲಿ ಕೆಂಡವಾಗಿದ್ದಾರೆ.
ಸ್ವಜಾತಿಯವರನ್ನು ಗೆಲ್ಲಿಸಲು ಬಂದ ಕೂಡಲೇ ರತ್ನಗಂಬಳಿ ಹಾಸಿ ಮೇಯರ್ ಮಾಡಿದ್ದ ಸ್ವಪಕ್ಷ ಬಿಜೆಪಿಯನ್ನೇ ಅಜಯ್ ಕುಮಾರ್ ಮರೆತಿದ್ದಾರ ಹೇಗೆ ಎಂಬ ಮಾತುಗಳೀಗ ಸಾರ್ವಜನಿಕ ವಲಯದಲ್ಲಿ ತೇಲಾಡುತ್ತಿವೆ.
ಬಿಜೆಪಿ ಜಿಲ್ಲಾಧ್ಯಕ್ಷರ ಕ್ಷೇತ್ರದಲ್ಲಿ ಜೆಡಿಎಸ್ ಗೆ ಮತ ಹಾಕಲು ವಿನಂತಿಸಿದ ಬಿಜೆಪಿ ಕಾರ್ಪೋರೇಟರ್.!
ಶಿಸ್ತಿನ ಪಕ್ಷ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವ ಬಿಜೆಪಿ ಪಕ್ಷ ತನ್ನ ಪಕ್ಷದ ಕಾರ್ಪೊರೇಟರ್ ಒಬ್ಬರು, ತಮ್ಮ ಪಕ್ಷದ ಜಿಲ್ಲಾಧ್ಯಕ್ಷರ ಕ್ಷೇತ್ರದಲ್ಲಿಯೇ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಲು ಸಮಾಜ ಬಾಂಧವರಲ್ಲಿ ವಿನಂತಿಸಿದ ಘಟನೆ ನಗರದ ಸಮಾರಂಭವೊಂದರಲ್ಲಿ ನಡೆದಿದ್ದು ಇದಕ್ಕೆ ಬಿಜೆಪಿ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂದು ಕಾದು ನೋಡಬೇಕಾಗಿದೆ.
ಪಕ್ಷ ಇದನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಶಿಸ್ತು ಕ್ರಮ ತೆಗೆದುಕೊಳ್ಳುವುದೋ ಅಥವಾ ಪಾಲಿಕೆಯ ಅಧಿಕಾರಿ ಹಿಡಿಯಲು ಸಹಕರಿಸಿದ ಒಬ್ಬ ಉದ್ಯಮಿಯ ಮಾತು ಎಂದು ಸುಮ್ಮನಾಗಿ ಮುಂದಿನ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಟಿಕೆಟ್ ನೀಡುವುದೋ ಕಾದು ನೋಡಬೇಕಾಗಿದೆ. – ಹರೀಶ್ ಬಸಾಪುರ್