ದಾವಣಗೆರೆ ಜಿಲ್ಲಾ ಪತ್ರಕರ್ತರ ಸಂಘದ ಚುನಾವಣೆ ಪ್ರಚಾರ: ಚುನಾವಣಾ ಅಭ್ಯರ್ಥಿಗಳ ಕರಪತ್ರ ಬಿಡುಗಡೆ ಮಾಡಿ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿದ ಪತ್ರಕರ್ತ ಬಿ ಎನ್ ಮಲ್ಲೇಶ್

IMG-20220221-WA0014

 

ದಾವಣಗೆರೆ: ಇದೇ ಫೆಬ್ರವರಿ 27 ರಂದು ನಡೆಯುವ ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಗೆ ವೀರಪ್ಪ ಎಂ ಭಾವಿ, ಕೆ ಚಂದ್ರಣ್ಣ ಮತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮಂಜುನಾಥ್ ಏಕಬೋಟೆ ಇವರ ತಂಡದ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ನಗರವಾಣಿ ಕಛೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.

ನಗರವಾಣಿ ಪತ್ರಿಕೆಯ ಸಹ ಸಂಪಾದಕ ಬಿ ಎನ್ ಮಲ್ಲೇಶ್, ತಂಡದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸುವುದರ ಮೂಲಕ ತಮ್ಮ ಸಂಪೂರ್ಣ ಬೆಂಬಲ ನಿಮಗಿದೆ ಎಂದು ತಿಳಿಸಿದರು. ಪತ್ರಕರ್ತರಿಗೆ ಒಂದು ಸೂರು ನೀಡುವುದು ಸಂಘದ ಮುಖ್ಯ ಕರ್ತವ್ಯವಾಗಲಿ ನಿಮ್ಮಲರಿಗೂ ಶುಭವಾಗಲಿ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ವೀರಪ್ಪ ಎಂ ಭಾವಿ, ರಾಜ್ಯ ಸಮಿತಿ ಸದಸ್ಯ ಕೆ ಚಂದ್ರಣ್ಣ, ಚುನಾವಣಾ ಅಭ್ಯರ್ಥಿಗಳಾದ ಇಎಂ ಮಂಜುನಾಥ್, ಮಾಗನೂರು ಮಂಜಪ್ಪ, ಹೆಚ್ ಎಂ ಪಿ ಕುಮಾರ್, ಆರ ಎಸ್ ತಿಪ್ಪೇಸ್ವಾಮಿ, ಜೆ ಎಸ್ ವೀರೇಶ್, ಇಂದುಧರ ನಿಶಾನಿಮಠ, ಎನ್ ಆರ್ ರವಿ, ಸಿ ಸತೀಶ್, ಮದ್ದಯ್ಯ, ತಾರೀಖ್ ನಕಾಶ್, ಕೆ ಜಿ ಶಿವಕುಮಾರ್, ಕರವೇ ಅಧ್ಯಕ್ಷ ರಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!