ಮೋದಿ ವರ್ಚುವಲ್ ಲೈವ್ ಶಂಕುಸ್ಥಾಪನೆ ವೇಳೆ , ಅಂತಾರಾಷ್ಟ್ರೀಯ ಯೋಗಬಾಲೆ ಹರಿಹರದ ಸೃಷ್ಟಿ ಯೋಗ ಪ್ರದರ್ಶನ.

ಹರಿಹರ : ನಗರದ ರೈಲ್ವೆ ನಿಲ್ದಾಣ ಅಮೃತ್ ಭಾರತ್ ನಿಲ್ದಾಣ ಯೋಜನೆ ಅಡಿಯಲ್ಲಿ ಪುನರ್ ನಿರ್ಮಾಣಕ್ಕೆ ಮೋದಿ ವರ್ಚ್ಯುವಲ್ ಲೈವ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ , ಆರಂಭದಲ್ಲಿ ಮೋದಿಯವರಿಗೆ ಪ್ರಿಯವಾದ ಯೋಗ ಪ್ರದರ್ಶನ ಮಾಡಲಾಯಿತು. ಹರಿಹರದ ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಬಾಲಪಟು ಸೃಷ್ಟಿ ಕೆ. ವೈ ಅಧ್ಬುತ ಲೈವ್ ಯೋಗ ಪ್ರದರ್ಶನ ನೀಡಿ ಸಂಸದರು, ಸೇರಿದಂತೆ ರೈಲ್ವೆ ಇಲಾಖೆ ಅಧಿಕಾರಿಗಳ ಗಮನ ಸೆಳೆದು ಸೈ ಎನಿಸಿಕೊಂಡಿದ್ದಾರೆ.

ಸೃಷ್ಟಿ ಕೆ ವೈ ನಮ್ಮ ದಾವಣಗೆರೆ ಜಿಲ್ಲೆಯ ಇಪ್ಟಾ ಕಲಾತಂಡದ ಉಪಾಧ್ಯಕ್ಷೆ ಶ್ರೀಮತಿ ಶಾಂಭವಿ ರವರ ಏಕೈಕ ಪುತ್ರಿ ರಾಜ್ಯ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ದಲ್ಲಿ ಹಲವು ಪ್ರಶಸ್ತಿಗಳ ಗಳಿಸಿ ಕೀರ್ತಿ ತಂದಿರುವ ಸೃಷ್ಟಿಗೆ ಮೋದಿ ಯವರ ಈ ಹರಿಹರದ ರೈಲ್ವೆ ನಿಲ್ದಾಣ ಅಮೃತ್ ಭಾರತ್ ನಿಲ್ದಾಣ ಕ್ಕೆ ಶಂಕುಸ್ಥಾಪನೆ ಮುನ್ನ ಅವರಿಗೆ ಪ್ರಿಯವಾದ ಯೋಗ ವನ್ನ ಸೃಷ್ಟಿ ಯಿಂದ ಪ್ರದರ್ಶನ ನೀಡಲು ರೈಲ್ವೆ ಇಲಾಖೆ ಅವಕಾಶ ನೀಡಿದ್ದನ್ನು ಸ್ಮರಿಸಬಹುದು.