ಜಗಳೂರು ಪಟ್ಟಣದಲ್ಲಿ ಜಾತ್ರೆ ಗಲಾಟೆ:16 ಜನರು ಪೊಲೀಸ್ ವಶಕ್ಕೆ ಲಘು ಲಾಠಿ ಚಾರ್ಜ್

ಜಗಳೂರು ಪಟ್ಟಣದಲ್ಲಿ ಜಾತ್ರೆ ಗಲಾಟೆ:16 ಜನರು ಪೊಲೀಸ್ ವಶಕ್ಕೆ ಲಘು ಲಾಠಿ ಚಾರ್ಜ್

ದಾವಣಗೆರೆ: ಮಾರಿಕಾಂಬ ದೇವಿಯ ಜಾತ್ರೆ ಆಚರಣೆ ವೇಳೆ ಧಾರ್ಮಿಕ ಪದ್ಧತಿ ಆಚರಣೆ ಉಲ್ಲಂಘಿಸಿದ ಕಾರಣಕ್ಕಾಗಿ ರೊಚ್ಚಿಗೆದ್ದ ಗ್ರಾಮದ ಯುವಕರು ಅಲ್ಲಿದ್ದ ವಾಹನಗಳ್ನು ಜಖಂ ಗೊಳಿಸಿದ್ದಾರೆ ಎನ್ನಲಾಗಿದ್ದು, ಯುವಕರ ಮೇಲೆ ಹಣ ಕಿತ್ತುಕೊಂಡ ಹಾಗೂ ವಾಹನ ಜಖಂಗೊಳಿಸಿದ ಬಗ್ಗೆ ದೂರುಗಳು ದಾಖಲಾಗಿವೆ.

 ಜಗಳೂರು ಪಟ್ಟಣದಲ್ಲಿ ಜಾತ್ರೆ ಗಲಾಟೆ:16 ಜನರು ಪೊಲೀಸ್ ವಶಕ್ಕೆ ಲಘು ಲಾಠಿ ಚಾರ್ಜ್
ಈ ಹಿನ್ನಲೆಯಲ್ಲಿ 16 ಜನರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನದಲ್ಲಿಟ್ಟಿದ್ದಾರೆ.
ಜಗಳೂರು ಪಟ್ಟಣದ ಜಾತ್ರೆ ವೇಳೆ ನಡೆದ ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ಅರುಣ್ ಅವರು, ಘಟನೆಗೆ ಸಂಬಂಧ 16 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ ಎಂದು ಹೇಳಿದ್ದಾರೆ.

 ಜಗಳೂರು ಪಟ್ಟಣದಲ್ಲಿ ಜಾತ್ರೆ ಗಲಾಟೆ:16 ಜನರು ಪೊಲೀಸ್ ವಶಕ್ಕೆ ಲಘು ಲಾಠಿ ಚಾರ್ಜ್
ಗಾಡಿಗಳನ್ನು ಜಂಖಂಗೊಳಿಸಿ, ಹಣ ಕಿತ್ತುಕೊಂಡ ಬಗ್ಗೆ ದೂರುಗಳನ್ನು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಜಗಳೂರು ಠಾಣೆ ಪೊಲೀಸರು 16 ಜನರನ್ನು ವಶಕ್ಕೆ ಪಡೆದಿದ್ದರು. ಆಗ ಗ್ರಾಮಸ್ಥರು ಬಂದು ಗಲಾಟೆ ಮಾಡುತ್ತಿದ್ದಾಗ ಗುಂಪು ಚದುರಿಸಲು ಲಘು ಲಾಠಿ ಪ್ರಹಾರ ಮಾಡಲಾಗಿದೆ.

ಜಗಳೂರು ಪಟ್ಟಣದಲ್ಲಿ ಜಾತ್ರೆ ಗಲಾಟೆ:16 ಜನರು ಪೊಲೀಸ್ ವಶಕ್ಕೆ ಲಘು ಲಾಠಿ ಚಾರ್ಜ್
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಗ್ರಾಮದ ಮುಖಂಡರು ಹಾಗೂ ಜಾತ್ರಾ ಆಯೋಜಕರೊಂದಿಗೆ ಶಾಂತಿ ಸಭೆ ನಡೆಸಿದ್ದು, ಪರಿಸ್ಥಿತಿ ತಿಳಿಗೊಂಡಿದೆ ಎಂದು ಎಸ್ಪಿ ಹೇಳಿದ್ದಾರೆ.
 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!