ನಕಲಿ‌ಜಾತಿ‌ ಪ್ರಮಾಣ‌ ಪತ್ರ ಪ್ರಕರಣ: ಬಿ.ಎಂ. ವಾಗೀಶ ಸ್ವಾಮಿ ಸೇರಿದಂತೆ ನಾಲ್ವರ ಮೇಲೆ‌ FIR ದಾಖಲು

ನಕಲಿ‌ಜಾತಿ‌ ಪ್ರಮಾಣ‌ ಪತ್ರ ಪ್ರಕರಣ: ಬಿ.ಎಂ. ವಾಗೀಶ ಸ್ವಾಮಿ ಸೇರಿದಂತೆ ನಾಲ್ವರ ಮೇಲೆ‌ FIR ದಾಖಲು

ದಾವಣಗೆರೆ: ನಕಲಿ‌ ಜಾತಿ ಪ್ರಮಾಣ ಪತ್ರ ಪಡೆದ ಪ್ರಕರಣಕ್ಕೆ ಸಂಬಂದಿಸಿದಂತೆ ದಾವಣಗೆರೆ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ಎಂ. ವಾಗೀಶ ಸ್ವಾಮಿ ಸೇರಿದಂತೆ ನಾಲ್ವರ ಮೇಲೆ‌ ಎಫ್ ಐ ಅರ್ ದಾಖಲಿಸಲಾಗಿದೆ.

ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿಯ ಇನ್ ಸ್ಪೆಕ್ಟರ್ ಎ.ವಿ. ವೆಂಕಟೇಶ ಮೂರ್ತಿ ನೀಡಿರುವ ದೂರಿನ‌ ಮೇರೆಗೆ ಬೆಂಗಳೂರಿನ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ‌

ಸುಳ್ಳು ದಾಖಲೆ ಸೃಷ್ಟಿಸಿ ವಾಗೀಶ ಸ್ವಾಮಿ ಅವರು ನಕಲಿ‌ಜಾತಿ ಪ್ರಮಾಣ ಪತ್ರ ಪಡೆದಿದ್ದು, ಅವರಿಗೆ ಸಹಕರಿಸಿದ್ದ ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್, ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅವರಿಗೆ ನೋಟಿಸ್ ನೀಡಿ, ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದಾವಣಗೆರೆ ನಿವಾಸಿ ವಾಗೀಶ್, ಬೆಂಗಳೂರಿನ ಎಚ್‌ಎಸ್ಆರ್ ಲೇಔಟ್‌ನಲ್ಲಿ ವಾಸವಿರುವುದಾಗಿ ಸುಳ್ಳು ದಾಖಲೆ ಸೃಷ್ಟಿಸಿದ್ದರು. ಲಿಂಗಾಯತ ಜಾತಿಗೆ ಸೇರಿದ್ದ ವಾಗೀಶ್, ‘ಬೇಡ ಜಂಗಮ’ ಜಾತಿ ಹೆಸರಿನಲ್ಲಿ 2021ರ ಜುಲೈ 6ರಂದು ಪರಿಶಿಷ್ಟ ಜಾತಿ (ಎಸ್.ಸಿ) ಪ್ರಮಾಣ ಪತ್ರ ಪಡೆದಿದ್ದರು. ಇವರದ್ದು ಸುಳ್ಳು ಜಾತಿ ಪ್ರಮಾಣ ಪತ್ರವೆಂಬುದು ಗೊತ್ತಾಗುತ್ತಿದ್ದಂತೆ ಜಾತಿ ಪರಿಶೀಲನೆ ಸಮಿತಿ ಹಾಗೂ ಜಿಲ್ಲಾಧಿಕಾರಿ ತನಿಖೆ ನಡೆಸಿತ್ತು.

‘ವಾಗೀಶ್ ಅವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದು ಗೊತ್ತಾಗುತ್ತಿದ್ದಂತೆ, ಅದನ್ನು ರದ್ದುಪಡಿಸಲಾಗಿದೆ. ಜೊತೆಗೆ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಇನ್‌ಸ್ಪೆಕ್ಟರ್ ದೂರು ನೀಡಿದ್ದಾರೆ. ವಾಗೀಶ್ ಯಾವ ರೀತಿ ಪ್ರಮಾಣ ಪತ್ರ ಪಡೆದಿದ್ದಾರೆ ಎನ್ನುವ ಕುರಿತು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!