ಭಾರಿ ಮಳೆ ಹಿನ್ನೆಲೆ, ಅಗಸ್ಟ್ 23 ರ ಪಿಎಸ್ಐ ಹುದ್ದೆಗಳ ನೇಮಕಾತಿಯ ಸಹಿಷ್ಣುತೆ, ದೇಹದಾರ್ಢ್ಯ‌ ಪರೀಕ್ಷೆ ಮುಂದೂಡಿಕೆ – ಐಜಿಪಿ

IMG-20210818-WA0013

ದಾವಣಗೆರೆ: ಆಗಸ್ಟ್ 23 ರಂದು‌ ನಿಗಧಿಯಾಗಿದ್ದ ಪಿಎಸ್‌ಐ (ಸಿವಿಲ್) (ಪುರುಷ & ಮಹಿಳಾ) (ಸೇವಾ ನಿರತ) ಹುದ್ದೆಗಳ ನೇಮಕಾತಿ ಸಂಬಂಧ ಆಯೋಜಿಸಿದ್ದ ಸಹಿಷ್ಣುತೆ ಮತ್ತು ದೇಹದಾರ್ಢತೆ ಪರೀಕ್ಷೆಯನ್ನು ಮುಂದೂಡಲಾಗಿದೆ.

ಆಗಸ್ಟ್ 18 ರಿಂದ 26 ರವರೆಗೆ ಒಟ್ಟು 06 ದಿನಗಳ ಕಾಲ ದಾವಣಗೆರೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲು ಅಭ್ಯರ್ಥಿಗಳಿಗೆ ತಿಳಿಸಲಾಗಿತ್ತು. ಆದರೆ, ದಾವಣಗೆರೆಯಲ್ಲಿ ಆಗಸ್ಟ್ 17, 18 ಹಾಗೂ 19 ರಂದು ಸುರಿದ ಭಾರಿ ಮಳೆಯಿಂದಾಗಿ ಜಿಲ್ಲಾ ಕ್ರೀಡಾಂಗಣವು ಸಂಪೂರ್ಣವಾಗಿ ಒದ್ದೆಯಾಗಿರುವುದರಿಂದ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗದೆ ಮುಂದುಡಲಾಗಿತ್ತು. ಆಗಸ್ಟ್ 22 ಭಾನುವಾರ ಸಹ ದಾವಣಗೆರೆಯಲ್ಲಿ ಭಾರಿ ಮಳೆಯಿಂದ ಕ್ರೀಡಾಂಗಣ ಒದ್ದೆಯಾಗಿದೆ. ಅದ್ದರಿಂದ ಆಗಸ್ಟ್ 23 ರಂದು ಕೂಡ ನಿಗಧಿಪಡಿಸಿದ್ದ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಲಾಗಿದ್ದು, ಮುಂದೂಡಲಾದ ಪರೀಕ್ಷಾ ದಿನಾಂಕದ ಬಗ್ಗೆ ಅಭ್ಯರ್ಥಿಗಳ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಲಾಗುವುದು ಮತ್ತು ಇಲಾಖೆಯ ವೆಬ್‌ಸೈಟ್ www.ksp.gov.in ನಲ್ಲಿ ಪರೀಕ್ಷಿಸಬಹುದು ಎಂದು ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!