ಕೆ.ಎಸ್.ಬಸಂತಪ್ಪ ಚುನಾವಣಾ ಪ್ರಚಾರ ಆರಂಭ

ದಾವಣಗೆರೆ: ಮಾಯಕೊಂಡ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಬಸವಂತಪ್ಪ ಅವರು ಕ್ಷೇತ್ರದ ವ್ಯಾಪ್ತಿಯಲ್ಲಿ ಶುಕ್ರವಾರ ಹೆಮ್ಮನಬೇತೂರು ಗ್ರಾಮದಲ್ಲಿರುವ ಶ್ರೀ ಮರುಳಸಿದ್ದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಚುನಾವಣಾ ಪ್ರಚಾರ ಪ್ರಾರಂಭಿಸಿದರು.
ಮಾಯಕೊಂಡದ ಕ್ಷೇತ್ರದ ಕುರುಡಿ, ಕಿತ್ತೂರು, ಅಣಜಿ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೀಡಿ ಮತಯಾಚನೆ ಮಾಡಿದರು.
ಪ್ರಚಾರದಲ್ಲಿ ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ. ಟಿ. ಹನುಮಂತಪ್ಪ. ಎಸ್.ವೆಂಕಟೇಶ್ ನಲ್ಕುದುರೆ, ಶಶಿಕಲಮ್ಮ, ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಿಖಿಲ್ ಕೊಂಡಜ್ಜಿ, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್, ಗುಮ್ಮನೂರು ಮಲ್ಲಿಕಾರ್ಜುನಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಕುರ್ಕಿ ಕುಬೇರಪ್ಪ, ತ್ಯಾವಣಿಗಿ ಗೋವಿಂದಸ್ವಾಮಿ, ಕೊಟ್ರೇಶ್ ನಾಯ್ಕ್, ಅಸಂಘಟಿತ ಕಾರ್ಮಿಕರ ಜಿಲ್ಲಾಧ್ಯಕ್ಷ ಲಿಂಗರಾಜ ನಾಯ್ಕ್ ಪಾಲ್ಗೊಂಡಿದ್ದರು.