ಕಾಂಗೈ ಅಭ್ಯರ್ಥಿ ಡಾ. ಎಸ್ ಎಸ್ ರವರಿಗೆ ಶ್ರೀ ನಿರಂಜನ ಪ್ರಭು ದೇವರಿಂದ ಆಶೀರ್ವಾದ

ಕಾಂಗೈ ಅಭ್ಯರ್ಥಿ ಡಾ. ಎಸ್ ಎಸ್ ರವರಿಗೆ ಶ್ರೀ ನಿರಂಜನ ಪ್ರಭು ದೇವರಿಂದ ಆಶೀರ್ವಾದ

ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ ಕಾಂಗೈ ಅಭ್ಯರ್ಥಿ ಡಾ. ಶಾಮನೂರು ಶಿವಶಂಕರಪ್ಪನವರಿಗೆ ಗರಗ-ನಾಗಲಾಪುರದ ಕುರುಗೋಡು ಶ್ರೀ ಕೊಟ್ಟೂರು ಸ್ವಾಮಿ ಶಾಖಾಮಠದ ಶ್ರೀ ನಿರಂಜನ ಪ್ರಭು ದೇವರು ರವರು ಶಾಲು ಹೊದಿಸಿ ವಿಜಯಶಾಲಿಯಾಗುವಂತೆ ಆಶೀರ್ವದಿಸಿದರು.

ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಅನ್ನದಾನೇಶ್ವರ ಮಠದಲ್ಲಿ ನಡೆದ ಶಿವಾನಭವ ಸಂಪದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಾll ಶಾಮನೂರು ಶಿವಶಂಕರಪ್ಪನವರು ಆಶೀರ್ವಚನ ಪಡೆದರು.

ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಅಥಣಿ ಎಸ್ ವೀರಣ್ಣ. ಕಾರ್ಯದರ್ಶಿ ಎನ್. ಅಡಿವೆಪ್ಪ. ಕೈಗಾರಿಕೋದ್ಯಮಿ ಎಸ್ ಎಸ್ ಗಣೇಶ್. ಮಹಾನಗರ ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್. ಪತ್ರಕರ್ತ ವೀರಪ್ಪ ಎಂ ಭಾವಿ. ದಿನೇಶ್ ಕೆ ಶೆಟ್ಟಿ.ಡಿಎನ್ ರೇವಣಸಿದ್ದಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯದರ್ಶಿ ರೇಣುಕಾ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!