ಕೇರಳದಲ್ಲಿ ಭಾರೀ ಮಳೆ.! 19,20,21 ರಂದು ಶಬರಿಮಲೈ ಪ್ರವೇಶ ನಿಷೇಧ

ಕೇರಳ: ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಅ. 19, 20 ಮತ್ತು 21 ರಂದು ಶಬರಿಮಲೆ ಪ್ರವೇಶ ನಿಷೇಧಿಸಿ ತಿರುವಾಂಕೂರು ದೇವಸ್ವಂ ಬೋರ್ಡ್ ತಿಳಿಸಿದೆ.

ಮಳೆಯ ಆರ್ಭಟ ಹೆಚ್ಚಿರುವುದರಿಂದ ಪಂಪಾದಲ್ಲಿನ ನೀರಿನ ಮಟ್ಟ ಅಪಾಯಕಾರಿಯಾಗಿ ಏರಿಕೆಯಾಗಬಹುದು. ವಿವಿಧ ಪ್ರದೇಶಗಳಲ್ಲಿ ದರ್ಶನಕ್ಕಾಗಿ ಕಾಯುತ್ತಿರುವ ಅಯ್ಯಪ್ಪ ಭಕ್ತರು ತಮ್ಮ ತಮ್ಮ ಸ್ಥಳಗಳಿಗೆ ಹಿಂತಿರುಗುವಂತೆ ದೇವಸ್ವಂ ಮಂಡಳಿ ಅಧ್ಯಕ್ಷ ಎನ್. ವಾಸು ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!