ಸ್ಥಳೀಯ ಸಮಸ್ಯೆಗಳ ಸಂಶೋಧನೆಯಾಗಲಿ

WhatsApp Image 2022-07-03 at 10.19.23 PM

ದಾವಣಗೆರೆ : ವಿದ್ಯಾರ್ಥಿಗಳು ಸಂಶೋಧನೆ ಕೈಗೊಳ್ಳುವಾಗ ಸ್ಥಳೀಯ ಸಮಸ್ಯೆಗಳ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಪರಿಹಾರ ಹುಡುಕುವುದರಲ್ಲಿ ಪ್ರಯತ್ನಪಡಬೇಕು ಆಗ ಸ್ಥಳೀಯ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ ಎಂದು ಯು ಬಿ ಬಿ ಡಿ ಟಿ ತಾಂತ್ರಿಕ ಮಹಾವಿದ್ಯಾಲಯದ ಪ್ರೊ ಮರುಳಸಿದ್ಧಯ್ಯನವರು ಹೇಳಿದರು ಅವರು ಇಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಿಪರೇಶನ್ ಆಫ್ ಪ್ರಾಜೆಕ್ಟ್ ರಿಪೋರ್ಟ್ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು .

ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ನಿಯಮದಂತೆ ರಿಪೋರ್ಟ್ ತಯಾರಿಕೆ ಕಡ್ಡಾಯವಾಗಿರುತ್ತದೆ ಹಾಗೆಂದು ವಿದ್ಯಾರ್ಥಿಗಳು ಯಾರೋ ಮಾಡಿದ್ದ ವರದಿಗಳನ್ನು ನಕಲು ಮಾಡದೆ ಸಲ್ಲಿಸುವುದಲ್ಲ ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ವಾಣಿಜ್ಯ ವ್ಯವಹಾರಿಕ ಸೇವಾ ಕ್ಷೇತ್ರ ಬ್ಯಾಂಕಿಂಗ್ ಕ್ಷೇತ್ರ ವಿಮಾ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಕಂಡು ಹಿಡಿದು ಅದಕ್ಕೆ ಪರಿಹಾರ ಕಂಡು ಬಂದರೆ ಆ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಯತ್ನ ಪಡಬಹುದು ಎಂದು ಹೇಳಿದರು. ವಿಷಯಗಳ ಆಯ್ಕೆ ಇದರ ಉದ್ದೇಶ ಹಾಗೂ ಸಂಪನ್ಮೂಲಗಳ ಬಳಕೆ ಬಗ್ಗೆ ಸಕಾರಾತ್ಮಕವಾಗಿ ವಿದ್ಯಾರ್ಥಿಗಳಿಗೆ ಮನನ ಮಾಡಿಕೊಟ್ಟರು.

ಪ್ರಾಸ್ತವಿಕವಾಗಿ ಮಾತನಾಡಿದ ಪ್ರೊಫೆಸರ್ ವೆಂಕಟೇಶ್ ಬಾಬು ರವರು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮಟ್ಟವನ್ನು ಉನ್ನತೀಕರಿಸಲು ವಿಶ್ವವಿದ್ಯಾಲಯಗಳು ವರದಿ ತಯಾರಿಕೆಯನ್ನು ಕಡ್ಡಾಯಗೊಳಿಸಿದ್ದಾರೆ ವಿದ್ಯಾರ್ಥಿಗಳು ಯಾವುದೇ ವರದಿ ತಯಾರಿಸುವಾಗ ಕುತೂಹಲದಿಂದ ಆಸಕ್ತಿಯಿಂದ ತಯಾರಿಸುವಲ್ಲಿ ಪ್ರಯತ್ನಪಡಬೇಕು ಆಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ ಇದರಿಂದ ಮುಂದಿನ ದಿನಗಳಲ್ಲಿ ಉದ್ಯೋಗ ಅವಕಾಶಗಳು ದೊರೆಯುವ ಸಾಧ್ಯತೆಗಳು ಹೆಚ್ಚು ಹಾಗೂ ವಿದ್ಯಾರ್ಥಿಗಳಿಗೆ ವಿಶ್ಲೇಷಣಾತ್ಮಕ ಕಲೆ ಮತ್ತು ಕೌಶಲ್ಯಗಳು ಬೆಳೆಯುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೌಶಲ್ಯಾ ಭಿವೃದ್ಧಿ ಕೋಶದ ಸದಸ್ಯರು ಹಾಗೂ ಇತರ ಬೋಧಕ ಬೋಧಕೇತರ ಸಿಬ್ಬಂದಿಯವರು ಹಾಜರಿದ್ದರು .

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!