ಜ.17 ರಂದು ಉಚ್ಚoಗೇಮ್ಮನ ದರ್ಶನಕ್ಕೆ ಅವಕಾಶವಿಲ್ಲ.
ಉಚ್ಚoಗಿದುರ್ಗ :- ಒಮಿಕ್ರಾನ್ ವೈರಸ್ ಹರಡದಂತೆ ತಡೆಯಲು ಜ.17 ರಂದು ಉಚ್ಚಂಗಿದುರ್ಗದ ಉತ್ಸವಾಂಬ ಕ್ಷೇತ್ರದಲ್ಲಿ ನಡೆಯಲಿರುವ ಬನದ ಹುಣ್ಣಿಮೆಗೆ ಜನ ಸೇರದಂತೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್. ಪಿ ಆದೇಶಿಸಿದ್ದಾರೆ.
ಹುಣ್ಣಿಮೆ ಅಂಗವಾಗಿ ಸಾವಿರಾರು ಭಕ್ತರು ಸೇರುವ ನೀರಿಕ್ಷೆಯಿದ್ದು ಜನಸಂಧಣಿಯಿಂದಾಗಿ ಸೋಂಕು ತೀವ್ರವಾಗಿ ಹರಡುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದಂತೆ ಜ.17 ರಂದು ಸೋಮವಾರ ಹುಣ್ಣಿಮೆ ದಿನ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ ಎಂದು ಕಾರ್ಯ ನಿರ್ವಾಹಕ ಅಧಿಕಾರಿ ಮಲ್ಲಪ್ಪನವರು ತಿಳಿಸಿದ್ದಾರೆ..