ಮಾರ್ಚ್ 25 ಕ್ಕೆ ದಾವಣಗೆರೆಯಲ್ಲಿ ‘ಮಹಾಸಂಗಮ’ ಕ್ಕೆ ಸಾಕ್ಷಿ ಪ್ರಧಾನಿ ಮೋದಿ

ದಾವಣಗೆರೆಯಲ್ಲಿ 'ಮಹಾಸಂಗಮ' ಕ್ಕೆ ಸಾಕ್ಷಿ ಪ್ರಧಾನಿ ಮೋದಿ
ದಾವಣಗೆರೆ: ಇದೇ ತಿಂಗಳು 25 ನೇ ತಾರೀಖಿನಂದು ರಾಜ್ಯದ ನಾಲ್ಕು ಭಾಗಗಳಿಂದ ‘ವಿಜಯ ಸಂಕಲ್ಪ ಯಾತ್ರೆ’ ದಾವಣಗೆರೆಯಲ್ಲಿ ಅಂತ್ಯಗೊಂಡು ‘ಮಹಾ ಸಂಗಮ’ ನಡೆಯಲಿದೆ ಎಂದು ಬಿಜೆಪಿ ಮಾಜಿ ಜಿಲ್ಲಾ ಅದ್ಯಕ್ಷ ಯಶವಂತ್ ರಾವ್ ಜಾದವ್ ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ವಿಶ್ವ ಮೆಚ್ಚಿದ ನಾಯಕ, ನಮ್ಮ ನೆಚ್ಚಿನ ಪ್ರದಾನ ಮಂತ್ರಿ ನರೇಂದ್ರ ಮೋದಿ ಜೀ. ಅವರ ಆಗಮಿಸುವ ಹಿನ್ನೆಲೆಯಲ್ಲಿ ಜಿ.ಎಂ.ಐ.ಟಿ. ಕಾಲೇಜ್ ಪಕ್ಕದಲ್ಲಿ ಸರಿ ಸುಮಾರು 400 ಎಕರೆ ಜಾಗದಲ್ಲಿ ಹತ್ತು ಲಕ್ಷ ಜನರ ಬರುವ ನಿರೀಕ್ಷೆ ಇದ್ದು 30 ಜೆ.ಸಿ.ಬಿ ಯಿಂದ ಸ್ವಚ್ಚತಾ ಕಾರ್ಯ ನಡೆಸಲಾಯಿತು.
ಈ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾ ಅಧ್ಯಕ್ಷರಾದ ಯಶವಂತರಾವ್ ಜಾಧವ್,ಮಾಜಿ ಧೂಡಾ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷರಾದ ಜಿ.ಮಂಜನಾಯ್ಕ, ಮಾಯಕೊಂಡದ ಚುನಾವಣಾ ಪ್ರಭಾರಿಗಳಾದ ಎನ್.ರಾಜಶೇಖರ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಶಿವನಗೌಡ ಟಿ.ಪಾಟೀಲ್,ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ನಿರ್ದೇಶಕ ಗೌತಮ್ ಜೈನ್, ಸುರೇಶ್ ಗಂಡಗಳೆ,ರಾಜು ನಿಲಗೂಂದ ಸ ಗೌಡ,ಮಾದ್ಯಮ ಪ್ರಮುಖ ವಿಶ್ವಾಸ, ಟಿಂಕರ್ ಮಂಜಣ್ಣ,ಬಾಲರಾಜ ಶ್ರೇಷ್ಠ, ಶಂಕರಗೌಡ ಬಿರಾದರ್,ಕಿರೀಟ ಸಿ.ಕಲಾಲ್,ಸೇರಿದಂತೆ ಅನೇಕ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.