ಸರ್ಕಾರಿ ಶಾಲೆಯ ನೂತನ ಕಟ್ಟಡಗಳ ಗುದ್ದಲಿ ಪೂಜೆ ಕಾರ್ಯಕ್ರಮವನ್ನು, ಸ್ವಂತ ಮನೆಯ ಗುದ್ದಲಿ ಪೂಜೆ ಎಂಬಂತೆ ಸಂಭ್ರಮಿಸಿದ ಶಿಕ್ಷಕರು

IMG-20210825-WA0008

 

ಪ್ರತಿಯೊಬ್ಬರಿಗೂ ತಾವು ಒಂದು ನೂತನ ಮನೆ ಕಟ್ಟಿಸಬೇಕೆಂಬ ಮಹದಾಸೆ ಇದ್ದೇ ಇರುತ್ತದೆ, ಅಂತಹ ಸಂದರ್ಭ ಬಂದಾಗ ಮನೆಯ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಮನೆಯ ಸದಸ್ಯರು ಯಾವ ರೀತಿ ಸಂಭ್ರಮಿಸುತ್ತಿದ್ದರೋ ಅದಕ್ಕಿನ್ನ ಹೆಚ್ಚಿನ ರೀತಿ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಬಸಾಪುರದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡಗಳ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಆ ಶಾಲೆಯ ಶಿಕ್ಷಕರು ಸಂಭ್ರಮಿಸಿದ್ದು ಕಂಡು ಬಂತು.

ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪನವರು ಶಿಫಾರಸ್ಸಿನ ಮೇರೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಶಾಲೆಗೆ 6 ಕಟ್ಟಡಗಳಿಗೆ ಅನುದಾನ ದೊರೆತಿದ್ದು, ಇಂದು ಕಟ್ಟಡಗಳ ಗುದ್ದಲಿ ಪೂಜೆ ಕಾರ್ಯ ನಡೆಯಿತು, ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ರವರು ತಾವೇ ಅರ್ಚಕರಾಗಿ ಪೂಜೆಯನ್ನು ವ್ಯವಸ್ಥಿತವಾಗಿ ನಡೆಸಿದರೆ, ಶಾಲೆಯ ಶಿಕ್ಷಕಿಯರು ಗ್ರಾಮದ ಮುಖಂಡರಿಗೆ ಕಂಕಣ ಕಟ್ಟುವ ಮೂಲಕ ಸಂಭ್ರಮಿಸಿದರು.

ಈ ವಿಶೇಷ ಸಮಾರಂಭಕ್ಕೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಬಾ.ಮ.ಬಸವರಾಜಯ್ಯ, ಎಸ್ ಡಿ ಎಂ ಸಿ ಅಧ್ಯಕ್ಷ ಪ್ರಕಾಶ, ಮಾಜಿ ನಗರಾಭಿವೃದ್ಧಿ ಸದಸ್ಯ ಎಂ.ಎಸ್. ಕೊಟ್ರಯ್ಯ,ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ.ಎಲ್.ಹರೀಶ್, ಗ್ರಾಮದ ಮುಖಂಡರುಗಳಾದ ಸಿ. ಮಹೇಶ್ವರಪ್ಪ, ನಾಗೇಂದ್ರಚಾರ್, ಎನ್.ಎಂ.ಕೊಟ್ರಯ್ಯ, ಬಿ.ಕೆ. ದೇವೇಂದ್ರಪ್ಪ, ಕೆ.ಬಿ. ಲಿಂಗರಾಜ್, ಕೆ.ಬಿ.ಪ್ರಕಾಶ್, ಅದಿಮನಿ ಶಿವಕುಮಾರ್, ಬಿ.ಟಿ. ಮರುಳಸಿದ್ದಪ್ಪ,ಲೋಕೇಶ್ವರಯ್ಯ ಹನುಮಂತಪ್ಪ, ಸ್ಮಾರ್ಟ್ ಸಿಟಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತಕರಾದ ಶಿವರಾಜ್, ಸಹಾಯಕ ಅಭಿಯಂತಕರಾದ ವೀರೇಶ್, ಅನೂಪ್ ಸಾಕ್ಷಿಯಾದರು.

Leave a Reply

Your email address will not be published. Required fields are marked *

error: Content is protected !!