ಶಾಮನೂರು ಶಿವಶಂಕರಪ್ಪನವರಿಗೆ ದೈವಜ್ಞ ಬ್ರಾಹ್ಮಣ ಸಮಾಜದ ಶ್ರೀಗಳ ಆಶೀರ್ವಾದ

ಶಾಮನೂರು ಶಿವಶಂಕರಪ್ಪನವರಿಗೆ ದೈವಜ್ಞ ಬ್ರಾಹ್ಮಣ ಸಮಾಜದ ಶ್ರೀಗಳ ಆಶೀರ್ವಾದ

ದಾವಣಗೆರೆ: ಶಾಸಕರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ|| ಶಾಮನೂರು ಶಿವಶಂಕರಪ್ಪನವರನ್ನು ದೈವಜ್ಞ ಬ್ರಾಹ್ಮಣ ಸಮಾಜದ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರು ಆಶೀರ್ವದಿಸಿದರು.
ದಾವಣಗೆರೆ ನಗರಕ್ಕೆ ಖಾಸಗಿ ಕಾರ್ಯಕ್ತಮದ ನಿಮಿತ್ತ ಆಗಮಿಸಿದ ಶ್ರೀಗಳನ್ನು ಶಾಮನೂರು ಶಿವಶಂಕರಪ್ಪನವರು ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ದೈವಜ್ಞ ಸಮಾಜ ಸಂಘದ ಅಧ್ಯಕ್ಷ ಪ್ರಶಾಂತ್ ವಿಶ್ವನಾಥ ಅಣ್ವೇಕರ್, ಕಾರ್ಯದರ್ಶಿ ಸತೀಶ್ ಶ್ರೀಕಾಂತ್ ಸಾನು, ನಿರ್ದೇಶಕರುಗಳಾದ ಶಂಕರ್ ನಾಗಪ್ಪ ವಿಠ್ಠಲ್ ಕರ್, ಉಮೇಶ್ ನಾರಾಯಣ ಪುರುಷನ್, ರಾಜೇಶ್ ಪಾಂಡುರಂಗ ರೇವಣ್‍ಕರ್, ಪಾಂಡುರಂಗ ಶ್ರೀನಿವಾಸಭಟ್ ಆವಾಜಿ, ಸುಬ್ಬಾರಾವ್ ಡಿ.ಎನ್., ಈ ನಾಗರಾಜ್ ಅಣಜಿ ಕುಡ್ತರಕರ್, ಮಂಜುನಾಥ ವಜ್ರಪ್ಪ ಕುಡ್ತರಕರ್, ಸಾಯಿ ಪ್ರಕಾಶ್ ಸುಪರರಾವ್ ವೆರ್ಣೆಕರ್, ರಾಜೀವ್ ವಿನಾಯಕ ವೆರ್ಣೆಕರ್, ಮಂಜುನಾಥ ರಾಮಚಂದ್ರ ಕುರ್ಡೇಕರ್, ರಾಘವೇಂದ್ರ ನರಸಿಂಹಪ್ಪ ದಿವಾಕರ, ರಾಘವೇಂದ್ರ ಸುರೇಶ್ ಕುರ್ಡೇಕರ್, ಸಚಿನ್ ಎಸ್. ವೆರ್ಣೆಕರ್, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರಾದ ಶ್ರೀಮತಿ ನಿರ್ಮಲಾ ವೆರ್ಣೆಕರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಖಜಾಂಚಿ ನಲ್ಲೂರು ರಾಘವೇಂದ್ರ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!