ಶಾಮನೂರು ಶಿವಶಂಕರಪ್ಪನವರ ಪರ ಪ್ರಥಮ್ ಪ್ರಚಾರ: ಅಜಾತ ಶತ್ರು ಗೆಲ್ಲಿಸಿ ದಾವಣಗೆರೆ ಅಭಿವೃದ್ಧಿಗೆ ಸಹಕರಿಸಲು ಮನವಿ

ಶಾಮನೂರು ಶಿವಶಂಕರಪ್ಪನವರ ಪ್ರಥಮ್ ಪ್ರಚಾರ ಅಜಾತ ಶತ್ರು ಗೆಲ್ಲಿಸಿ ದಾವಣಗೆರೆ ಅಭಿವೃದ್ಧಿಗೆ ಸಹಕರಿಸಲು ಮನವಿ

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಡಾ|| ಶಾಮನೂರು ಶಿವಶಂಕರಪ್ಪನವರ ಪರವಾಗಿ ಚಲನಚಿತ್ರ ನಟ, ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಪ್ರಚಾರ ನಡೆಸಿದರು.

ಇಂದು 14ನೇ ವಾರ್ಡ್ನ ವಿವಿಧ ಕಡೆಗಳಲ್ಲಿ ಪ್ರಚಾರ ನಡೆಸಿದ ಪ್ರಥಮ್ ಅವರು ದಾವಣಗೆರೆಯಷ್ಟೇ ಅಲ್ಲ ರಾಜ್ಯಾದ್ಯಂತ ಉತ್ತಮ ಹೆಸರು ಗಳಿಸಿರುವ ಅಜಾತ ಶತ್ರು ಡಾ|| ಶಾಮನೂರು ಶಿವಶಂಕರಪ್ಪನವರನ್ನು ಗೆಲ್ಲಿಸಿ ದಾವಣಗೆರೆಯ ಸಮಗ್ರ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.

ದಾವಣಗೆರೆ ನಗರ ಸಮಗ್ರ ಅಭಿವೃದ್ಧಿ ಆಗಿದ್ದು, ಇನ್ನಷ್ಟು ಅಭಿವೃದ್ಧಿ ಆಗಬೇಕಿದೆ. ದಾವಣಗೆರೆ ಜನತೆ ಅಭಿವೃದ್ಧಿಗೆ ಮತ ನೀಡುವೀರಿ ಎಂಬ ವಿಶ್ವಾಸವಿದೆ. ನಿಮ್ಮ ಮತ ದಾವಣಗೆರೆ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ಶಾಮನೂರು ಶಿವಶಂಕರಪ್ಪನವರ ಪ್ರಥಮ್ ಪ್ರಚಾರ ಅಜಾತ ಶತ್ರು ಗೆಲ್ಲಿಸಿ ದಾವಣಗೆರೆ ಅಭಿವೃದ್ಧಿಗೆ ಸಹಕರಿಸಲು ಮನವಿ
ಈ ಸಂದರ್ಭದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಡಾ|| ಶಾಮನೂರು ಶಿವಶಂಕರಪ್ಪ, ಉದ್ಯಮಿ ಎಸ್.ಎಸ್.ಗಣೇಶ್, ಮೇಯರ್ ವಿನಾಯಕ ಪೈಲ್ವಾನ್, ಮಹಾನಗರ ಪಾಲಿಕೆ ಸದಸ್ಯ ಕೆ.ಚಮನ್‌ಸಾಬ್, ಜಾಕೀರ್ ಅಲಿ, ಶಫೀಖ್ ಪಂಡಿತ್, ಎ.ಬಿ.ರಹೀಂ, ಸಿಮೇಎಣ್ಣೆ ಮಲ್ಲೇಶ್ , ಡಾ|| ದೀಪಕ್ ಬೋಂದಾಡೆ, ಅಣಬೇರು ರಾಜಣ್ಣ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!