ಕಳುವಾಗಿದ್ದ ಎತ್ತುಗಳು ಪತ್ತೆ, ಓರ್ವ ಆರೋಪಿತನ ಬಂಧನ

ದಾವಣಗೆರೆ ಜಿಲ್ಲೆ, ಚಿನ್ನಗಿರಿ ಉಪ ವಿಭಾಗದ, ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ. ದಿನಾಂಕ: 14-06-2024 ರಂದು ಹೊನ್ನಾಳಿ ತಾಲೂಕ್ ಚೀಲಾಪುರ ಗ್ರಾಮದ ವಾಸಿ ಶ್ರೀ ಧರ್ಮನಾಯ್ಕ ತಂದೆ ಹಾಲೇಶ್ ನಾಯ್ಕ ಠಾಣೆಗೆ ಹಾಜರಾಗಿ ಪಿರ್ಯಾದಿಯವರ ವಾಸದ ಮನೆಯ ಪಕ್ಕದ ಖಾಲಿ ಜಾಗದಲ್ಲಿ ಕಟ್ಟಿದ್ದ ಸುಮಾರು 90.000/- ರೂ ಬೆಲೆ ಬಾಳುವ ಒಂದು ಜೊತೆ ಎತ್ತುಗಳನ್ನು (ಎರಡು ಎತ್ತುಗಳು) ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ದೂರು ನೀಡಿದ್ದರ ಮೇರೆಗೆ ಹೊನ್ನಾಳಿ ಪೊಲೀಸ್ ಠಾಣೆ ಗನ್ನೆ ನಂ: 159/2024 ಕಲಂ: 379 ಐ.ಪಿ.ಸಿ. ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತದೆ.

ನಂತರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ದಾವಣಗೆರೆ ಜಿಲೆ, ದಾವಣಗೆರೆ, ಪೊಲೀಸ್ ಉಪಾಧೀಕ್ಷಕರು, ಚನ್ನಗಿರಿ ಉಪ ವಿಭಾಗ, ಚನ್ನಗಿರಿ ರವರ ಮಾರ್ಗದರ್ಶನದಲ್ಲಿ ಹೊನ್ನಾಳಿ ನಿರೀಕ್ಷಕರವರಾದ ಶ್ರೀ ಸುನೀಲ್ ಕುಮಾರ್ ಹೆಚ್ ಎಸ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳನ್ನೊಳಗೊಂಡ ತಂಡವು ದಿನಾಂಕ: 16-06-2024 ರಂದು ಮಧ್ಯಾಹ್ನ ಸಮಯದಲ್ಲಿ ಹೊನ್ನಾಳಿ ತಾಲ್ಲೂಕ್ ಗೊಲರಹಳ್ಳಿ, ಗ್ರಾಮದ ಬಸವಪಟ್ಟಣ ಕ್ರಾಸ್ ನಲ್ಲಿ. ಬಕ್ರೀದ್ ಹಬ್ಬದ ಪ್ರಯುಕ್ತ ಹಾಕಿದ್ದ ಚೆಕ್ ಪೋಸ್ಟ್ ಬಳಿ ದನಗಳನ್ನು ತುಂಬಿಕೊಂಡು ಬಂದ ಒಂದು ಗೂಡ್ ವಾಹನವನ್ನು ನಿಲಿಸಲು ತಿಳಿಸಿದಾಗ ಗೂಡ್ಸ್ ವಾಹನ ಚಾಲಕ ಗೂಡ್ಸ್ ವಾಹವನವನ್ನು ನಿಲ್ಲಿಸಿ ಇಳಿದು ಓಡಿ ಹೋಗಲು ಪ್ರಯತ್ನಿಸಿದವನನ್ನು ಹಿಡಿದುಕೊಂಡು ವಿಚಾರ ಮಾಡಲಾಗಿ ಮತ್ತು ಎತ್ತುಗಳ ಮಾಲೀಕರು ಯಾರು ಅಂತ ವಿಚಾರ ಮಾಡಲಾಗಿ ಸದರಿ ಆಸಾಮಿಯು ಸರಿಯಾದ ಮಾಹಿತಿ ನೀಡದೇ ಇದ್ದು ಆಸಾಮಿಯ ಮೇಲೆ ಅನುಮಾನ ಬಂದು ಆತನ ಹೆಸರು ವಿಳಾಸ ಕೇಳಲಾಗಿ ಮಹಮ್ಮದ್ ಆಸೀಫ್ @ ಆಶಿದ್, 29 ವರ್ಷ, ಗೂಡ್ಸ್ ವಾಹನ ಚಾಲಕ, ಚೀಲಾಪುರ ಗ್ರಾಮ ಹೊನ್ನಾಳಿ ತಾ ಅಂತ ತಿಳಿಸಿದ್ದರಿಂದ ಗೂಡ್ಸ್ ವಾಹನದಲ್ಲಿರುವ ಎತ್ತುಗಳು ಕಳ್ಳತನವಾಗಿರುವ ಮಾಲು ಅಂತ ಅನುಮಾನ ಬಂದಿದ್ದರಿಂದ ಕೂಡಲೇ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮೇಲ್ಕಂಡ ಪ್ರಕರಣದಲ್ಲಿ ಕಳವು ಆಗಿರುವ ಎತ್ತುಗಳು ಆಗಿದ್ದು, ಕಳ್ಳತನ ಮಾಡಿಕೊಂಡು ತಂದಿರುವುದು ಅಂತ ಬೆಳಕಿಗೆ ಬಂದಿರುತ್ತದೆ, ಮೇಲ್ಕಂಡ ಆರೋಪಿತ ಮಹಮ್ಮದ್ ಆಸೀಫ್ ಈತನ ಬಳಿ ದೊರೆತ ಕೆಎ-41/ಸಿ-6984 ನೇ ಗೂಡ್ಸ್ ವಾಹನ (ಅಂದಾಜು 3 ಲಕ್ಷ ಮೌಲ್ಯ) ಮತ್ತು ಅಂದಾಜು ಮೊತ್ತ 90 ಸಾವಿರ ರೂ ಮೌಲ್ಯದ ಒಂದು ಜೊತೆ ಎತ್ತುಗಳನ್ನು ( ಎರಡು ಎತ್ತುಗಳು) ಅಮಾನತ್ತು ಪಡಿಸಿಕೊಂಡಿದ್ದು, ಆರೋಪಿತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ, ಪತ್ತೆಯಾದ ಎತ್ತುಗಳನ್ನು ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಎತ್ತುಗಳ ವಾರಸುದಾರರ ವಶಕ್ಕೆ ನೀಡಲಾಗಿರುತ್ತದೆ.

ಮೇಲ್ಕಂಡ ಪ್ರಕರಣದಲ್ಲಿ ಕಳ್ಳತನವಾದ ಎತ್ತುಗಳನ್ನು ಪತ್ತೆ ಮಾಡಿ, ಆರೋಪಿತನನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಹೊನ್ನಾಳಿ ನಿರೀಕ್ಷಕರವರಾದ ಶ್ರೀ ಸುನೀಲ್ ಕುಮಾರ್ ಹೆಚ್ ಎಸ್, ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ, ಶ್ರೀ ತಿಪ್ಪೇಸ್ವಾಮಿ ಟಿ, ಶ್ರೀ ಹರೀಶ್ ಎ,ಎಸ್,ಐ, ರವಿ ಎನ್. ಚೇತನ್ ಕುಮಾ‌ರ್, ಮಂಜುನಾಥ, ಪ್ರಸನ್ನ ರವರನ್ನು ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್, ಪೊಲೀಸ್ ಅಧೀಕ್ಷಕರು, ದಾವಣಗೆರೆ ಜಿಲ್ಲೆ ರವರು ಪ್ರಶಂಸೆ ವ್ಯಕ್ತ ಪಡಿಸಿರುತ್ತಾರೆ

Leave a Reply

Your email address will not be published. Required fields are marked *

error: Content is protected !!