Expectation

ಸಚಿವರಾಗಿ ಎಸ್.ಎಸ್.ಎಂ ಪ್ರಮಾಣವಚನ… ಜಿಲ್ಲೆಯ ಬಡವರು,ಯುವಕರು ಹಾಗೂ ಮಹಿಳೆಯರಿಗೆ ಹೆಚ್ಚಿದ ನಿರೀಕ್ಷೆ – ಕೆ.ಎಲ್.ಹರೀಶ್ ಬಸಾಪುರ.

ದಾವಣಗೆರೆ :ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಸಂಪುಟದಲ್ಲಿ ನೂತನವಾಗಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎಸ್ ಮಲ್ಲಿಕಾರ್ಜುನ್ ತಮ್ಮ ರಾಜಕೀಯ ಅಜ್ಞಾತವಾಸದಿಂದ ಮರಳಿದ್ದು, ಇದರಿಂದ...

ಶಿವಗಂಗೋತ್ರಿಯಲ್ಲಿ ಮತ ಎಣಿಕೆಗೆ ಸಿದ್ದತೆ ಹೇಗಿದೆ ಗೊತ್ತಾ.? ಮಧ್ಯಾಹ್ನದ ವೇಳೆಗೆ ನಿಚ್ಚಳ ಫಲಿತಾಂಶ ನಿರೀಕ್ಷೆ- ಶಿವಾನಂದ ಕಾಪಶಿ

ದಾವಣಗೆರೆ: ವಿಧಾನಸಭೆಗೆ ಮೇ 10 ರಂದು ನಡೆದ ಚುನಾವಣೆಯ ಮತ ಎಣಿಕೆಯು ಮೇ 13 ರಂದು ಬೆಳಗ್ಗೆ 8 ಗಂಟೆಯಿಂದ ದಾವಣಗೆರೆ ವಿಶ್ವವಿದ್ಯಾಲಯ ಶಿವಗಂಗೋತ್ರಿಯಲ್ಲಿ ನಡೆಯಲಿದ್ದು ಇದಕ್ಕೆ...

ಕೇಂದ್ರ ಸರ್ಕಾರ ಮಂಡಿಸಿರುವ  ಬಜೆಟ್ ಜನಸಾಮಾನ್ಯರ ನಿರೀಕ್ಷೆಯನ್ನು ಹುಸಿಗೊಳಿಸಿದೆ. 

ಚಿತ್ರದುರ್ಗ:  ದೇಶದ ಯುವಕರಿಗೆ ಉದ್ಯೋಗ ಹಾಗೂಬಡತನ ನಿರ್ಮೂಲನೆಗೆ ಅನುಕೂಲಕರವಾದಂತಹ ಯಾವುದೇ ಯೋಜನೆ  ನೀಡಿಲ್ಲ. ಪೆಟ್ರೋಲ್,ಡಿಸೇಲ್ ,ಗ್ಯಾಸ್ ಹಾಗೂ ದಿನ ನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಅವುಗಳ ಮೇಲೆ ಹೇರಿರುವ ಮತ್ತಷ್ಟು ಸೆಸ್ಗಳು ಜೊತೆಗೆ ಕೃಷಿ ಮತ್ತು ಕೃಷಿಗೆ ಬಳಸುವ ರಸಗೊಬ್ಬರದ ಮೇಲಿನ ಸೆಸ್ ಹೆಚ್ಚಳದಿಂದ ದೇಶದ ರೈತರಿಗೆ ಶಾಕ್ ನೀಡಿದ್ದಾರೆ. ಹೀಗೆಎಲ್ಲಾ ವಲಯದಲ್ಲೂ ಹೆಚ್ಚಿನ ಸೆಸ್ ಹೊರೆಯಾಗಿದ್ದು ಯಾವುದೇ ರೀತಿಯ ಮುನ್ನೋಟ ಹಾಗೂ ಜನ ಸಾಮಾನ್ಯರಿಗೆಅನುಕೂಲಕರವಾಗುವಂತಹ ಯಾವುದೇ ಸಿಹಿಸುದ್ದಿಯನ್ನೊಳಗೊಳ್ಳದ ಬಜೆಟ್ ಜನರ ನಿರೀಕ್ಷೆ ಹುಸಿಗೊಳಿಸಿರುವುದಂತೂ ನಿಜ. ಇನ್ನೂ ಕರ್ನಾಟಕದ ಪಾಲಿಗಂತೂ ನಿರಾಶೆಯ ಬಜೆಟ್ ಆಗಿದ್ದು , ಭದ್ರಾ ಮೇಲ್ದಂಡೆ ಯೋಜನೆಗೆ 5300ಕೋಟಿ ರೂಮೀಸಲಿಟ್ಟಿರುವುದು ಕೇವಲ ಮಿಸಲಾಗಿದ್ದರೆ ಈಗದು ಅದು ಬಳಕೆಯಾಗಬೇಕು. ಈ ಹಿಂದಿನ ಹಲವು ರೈಲ್ವೇ ಹಾಗೂ ನಿರಾವರಿಯೋಜನೆಗಳಿಗೆ ಮೀಸಲಿಟ್ಟಿದ್ದ ಹಣ ಒಂದು ರೂಪಾಯಿಯೂ ಬಳಕೆಯಾಗಿಲ್ಲ. ವೈದ್ಯಕೀಯ ಉಪಕರಣಗಳು ಮತ್ತು ವಸ್ತುಗಳ ಬೆಲೆಯೇರಿಕೆ ಮಾಡಿರುವುದು ದುರದೃಷ್ಟಕರ. ಒಟ್ಟಾರೆಯಾಗಿ ಈ ಬಜೆಟ್ಜನಸಾಮಾನ್ಯರಿಗೆ ನಿರಾಶಾದಾಯಕವಾದದ್ದಂತೂ ಸತ್ಯ. ಪ್ರಕಾಶ್ ರಾಮಾನಾಯ್ಕ್.,ಜಿಲ್ಲಾಧ್ಯಕ್ಷರು. ಮಾಹಿತಿ ತಂತ್ರಜ್ಞಾನ ವಿಭಾಗ,ಜಿಲ್ಲಾ ಕಾಂಗ್ರೆಸ್ ಸಮಿತಿ,ಚಿತ್ರದುರ್ಗ.

ಈ ಕೋಣಕ್ಕೆ 1.50 ಕೋಟಿ ಬೆಲೆ ನಿರೀಕ್ಷೆ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಇಲ್ಲಿನ ಕಾಗವಾಡ ತಾಲ್ಲೂಕಿನ ಮಂಗಸೂಳಿ ಗ್ರಾಮದ ವಿಲಾಸ ಗಣಪತಿ ನಾಯಿಕ ಕುಟುಂಬದವರು ಸಾಕಿರುವ ಕೋಣ ಬರೋಬ್ಬರಿ ಒಂದೂವರೆ ಟನ್ ತೂಗುತ್ತಾನೆ. ಅಷ್ಟೇಅಲ್ಲದೆ ಈ...

ಇಷ್ಟರಲ್ಲಿಯೇ ಸಂಪುಟ ವಿಸ್ತರಣೆ ಆಗಲಿದೆ ಎಂಬ ನಿರೀಕ್ಷೆ ಇದೆ – ಸುಳಿವು ನೀಡಿದ ಬಿ ಎಸ್ ವೈ

ದಾವಣಗೆರೆ: ಸಿದ್ದು ಸೊಕ್ಕಿಗೆ, ಧಿಮಾಕಿನ ಮಾತಿಗೆ ಚುನಾವಣಾ ಫಲಿತಾಂಶ ಉತ್ತರ ನೀಡಲಿದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕುಟುಕಿದರು. ಚಿತ್ರದುರ್ಗ-ದಾವಣಗೆರೆ ಕ್ಷೇತ್ರದ ವಿಧಾನಪರಿಷತ್ ಬಿಜೆಪಿ ಅಭ್ಯರ್ಥಿ...

error: Content is protected !!