ಬೈಕ್ ಕದ್ದು ಆರ್ ಟಿ ಓ ಅಧಿಕಾರ ಸಹಾಯದಿಂದ ಮಾರಾಟದ ಜಾಲ ಬೇಧಿಸಿದ ಪೊಲೀಸರು.! 13 ಲಕ್ಷ ರೂ. ಮೌಲ್ಯದ 26 ಬೈಕುಗಳ ವಶ.!

ದಾವಣಗೆರೆ :ನಕಲಿ ಕೀ ಬಳಸಿ ಬೈಕುಗಳನ್ನು ಕದ್ದು, ಆರ್ಟಿಒ ಏಜೆಂಟರುಗಳ ಸಹಾಯದಿಂದ, ಆರ್ಟಿಒ ಕಚೇರಿ ಸಿಬ್ಬಂದಿಯೊಂದಿಗೆ ಶಾಮೀಲಾಗಿ ಕದ್ದ ಬೈಕುಗಳ ಆರ್ಸಿಗಳನ್ನು ಬೈರೆಯವರಿಗೆ ಬಲದಾವಣೆ ಮಾಡಿ ಮಾರಾಟ ಮಾಡುವ ಜಾಲವನ್ನು ಪೋಲಿಸರು ಬೇಧಿಸಿದ್ದು, ಆರೋಪಿಗಳಿಂದ 13 ಲಕ್ಷ ರೂ. ಬೆಲೆ ಬಾಳುವ 26 ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಮಾರ್ಚ್ 16ರಂದು ಹೊನ್ನಾಳಿ ಪಟ್ಟಣದ ಟಿ.ಬಿ. ವೃತ್ತದ ಬಳಿ ಇರುವ ತೋಟಗಾರಿಕೆ ಇಲಾಖೆ ಕಚೇರಿ ಮುಂಭಾಗ ನಿಲ್ಲಿಸಿದ್ದ ಹೆಚ್ಎಫ್ ಡಿಲಕ್ಸ್ ಬೈಕು ಕಳ್ಳತನವಾದ ಬಗ್ಗೆ ದೂರು ದಾಖಲಾಗಿತ್ತು.
ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು, ಬೈಕ್ ಕಳುವ ಮಾಡಿದ್ದ ಆರೋಪಿಗಳಾದ ದಾವಣಗೆರೆಯ ನಿಟುವಳ್ಳಿಯ ಸಿದ್ದೇಶ್ (36), ಮಂಜುನಾಥ್ (27) ಎಂಬುವವರನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ಮಾಡಿದಾಗ ಇವರು ಹೊನ್ನಾಳಿ, ದಾವಣಗೆರೆ, ಹರಪನಹಳ್ಳಿ, ಜಗಳೂರು, ಹಾವೇರಿ, ರಾಣೇಬೆನ್ನೂರು, ಶಿವಮೊಗ್ಗ, ಚನ್ನಗಿರಿ, ಹೊಳಲ್ಕೆರೆ, ಚಿತ್ರದುರ್ಗ, ಹಾಗೂ ವಿವಿಧ ಕಡೆಗಳಲ್ಲಿ ಬೈಕುಗಳನ್ನು ನಕಲಿ ಕೀ ಗಳನ್ನು ಬಳಸಿ ಬೈಕುಗಳನ್ನು ಕಳ್ಳತನ ಮಾಡುತ್ತಿದ್ದುದು ತಿಳಿದು ಬಂದಿದೆ.
ಆರೋಪಿಗಳು ಬೈಕುಗಳನ್ನು ಕಳುವ ಮಾಡಿ ನಿಟುವಳ್ಳಿ ವಾಸಿ ಆರ್ಟಿಒ ಏಜೆಂಟ್ ಪ್ರಕಾಶ್ (43) ಭಾಷಾನಗರದ ವಾಸಿ ಕಲೀಂ (29), ಎಸ್.ಪಿ.ಎಸ್. ನಗರದ ವಾಸಿ ಮಹಮದ್ ಯಾಸೀರ್ ಅರಾಫತ್ (32) ಇವರುಗಳಿಗೆ ಬೈಕುಗಳನ್ನು ಮಾರಾಟ ಮಾಡುತ್ತಿದ್ದರು.
ಇವರು ಆರ್ ಟಿ ಓ ಕಚೇರಿಯಲ್ಲಿ ಪರಿಚಯವಿರುವ ಏಜೆಂಟ್ಗಳ ಮೂಲಕ ಕಚೇರಿಯಲ್ಲಿನ ಸಿಬ್ಬಂದಿಗಳೊಂದಿಗೆ ಶಾಮೀಲಾಗಿ ಕದ್ದು ಬೈಕುಗಳ ಆರ್ಸಿಗಳನ್ನು ಬೇರೆಯವರಿಗೆ ಬದಲಾವಣೆ ಮಾಡಿ ಮಾರಾಟ ಮಾಡುತ್ತಿದ್ದರು.