Good News: ಅನಾವಶ್ಯಕ ವಾಹನಗಳ ತಪಾಸಣೆ ನಿಲ್ಲಿಸಿ.! ಎಲ್ಲಾ ಎಸ್ ಪಿ ಗಳಿಗೆ ಡಿಜಿಪಿ ಪ್ರವೀಣ್ ಸೂದ್ ಹೊಸ ಆದೇಶ

Garudavoice Big Exclusive
ಬೆಂಗಳೂರು: ರಾಜ್ಯದಲ್ಲಿ ಅನಾವಶ್ಯಕವಾಗಿ ವಾಹನಗಳ ದಾಖಲೆಗಳ ತಪಾಸಣೆ ನೆಪದಲ್ಲಿ ಪೊಲೀಸರು ತೊಂದರೆ ನೀಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಪದೇ ಪದೇ ದೂರು ಗಳು ಬರುವುದನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೆವೆ ಇದು ತಕ್ಷಣದಿಂದ ನಿಲ್ಲಬೇಕು ಎಂದು ಪ್ರವೀಣ್ ಸೂದ್ ಜುಲೈ 16 ರಂದು U.O NOTE ಮೂಲಕ ಹೇಳಿದ್ದಾರೆ.
ಕಳೆದ ತಿಂಗಳು ಡಿಜಿಪಿ ಕೇವಲ ಬೆಂಗಳೂರಿನ ಕಮಿಷನರ್ ಗೆ ತಮ್ಮ ಟ್ವಿಟರ್ ಮೂಲಕ ವಾಹನ ತಪಾಸಣೆ ಯಾವ ರೀತಿಯ ಸನ್ನಿವೇಶದಲ್ಲಿ ನಡೆಸುವ ಬಗ್ಗೆ ಹೇಳಿದ್ದರು, ಇದೀಗ ರಾಜ್ಯಾದ್ಯಂತ ಅನ್ವಯವಾಗುವಂತೆ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಒಂದು ದಶಕಗಳಿಂದ ಹೇಳಿದ್ದರು ಇದನ್ನು ಪೊಲೀಸ್ ಅಧಿಕಾರಿಗಳು ಪಾಲನೆ ಮಾಡುತ್ತಿಲ್ಲ ಎಂದು ಡಿಜಿಪಿ ಹೇಳಿದ್ದಾರೆ. ವಾಹನ ತಪಾಸಣೆಯನ್ನು ಯಾವ ಸಂದರ್ಭದಲ್ಲಿ ಮಾಡಬೇಕು ಎಂಬಂತೆ ತಮ್ಮ ಕೆಳ ಹಂತದ ಅಧಿಕಾರಿಗಳಿಗೆ ಸೂಚನೆ ನೀಡಬೇಕು, ಪೊಲೀಸರು ಈ ನಿಯಮವನ್ನ ಪಾಲಿಸದಿದ್ದರೆ ಅಂತವರ ವಿರುದ್ದ ಕ್ರಮ ಕೈಗೊಳ್ಳಲು ರಾಜ್ಯದ ಎಲ್ಲಾ ಎಸ್ ಪಿ ಗಳಿಗೆ ಹಾಗೂ ಪೊಲೀಸ್ ಆಯುಕ್ತರಿಗೆ ಡಿಜಿಪಿ ಪ್ರವೀಣ್ ಸೂದ್ ಆದೇಶ ಮಾಡಿದ್ದಾರೆ.
ನಾನು ಇನ್ನೊಮ್ಮೆ ಸ್ಪಷ್ಟ ಪಡಿಸುತ್ತೇನೆ. ಬರಿಯ ಕಣ್ಣಿಗೆ ಕಾಣುವಂಥಹ ಟ್ರಾಫಿಕ್ ಉಲ್ಲಂಘನೆಯನ್ನು ಮಾಡದ ಹೊರತು ಯಾವುದೇ ಕಾರಣಕ್ಕೂ ದಾಖಲೆಗಳ ಪರಿಶೀಲನೆ ಮಾಡುವ ಸಲುವಾಗಿ ವಾಹನಗಳನ್ನು ನಿಲ್ಲಿಸುವಂತಿಲ್ಲ. ಆದರೆ ಕುಡಿದು ವಾಹನ ಚಲಾಯಿಸುವ ಕೃತ್ಯಗಳಿಗೆ ಇದು ಅನ್ವಯಿಸುದಿಲ್ಲ. ನಾವು ಒಂದು ದಶಕಗಳಿಂದ ಈ ಆದೇಶ ಪಾಲಿಸುವಂತೆ ಹೇಳಿದ್ದರೂ ಯಾರೂ ಪಾಲಿಸುತ್ತಿಲ್ಲ ಎಂದು ತಮ್ಮ ಪತ್ರದಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ.
ಸಾಮಾನ್ಯವಾಗಿ ವಾಹನ ತಡೆದರೆ ಒಂದಲ್ಲ ಒಂದು ಕಾರಣದಿಂದ ಸಾರ್ವಜನಿಕರಿಗೆ ಕಿರಿ ಕಿರಿ ಮಾಡುತ್ತೀರಾ ಇದರೆ ಉದ್ದೇಶಿತ ಅರ್ಥ ನಮಗೆ ಗೊತ್ತಾಗುತ್ತೆ ಇದು ನಮ್ಮ ಗಮನಕ್ಕೆ ಬಂದಿದೆ. ದುರಂತ ಎಂದರೆ ಇದು ನಗರ, ಪಟ್ಟಣ, ಅಲ್ಲದೆ ಹೆದ್ದಾರಿಗಳಲ್ಲಿ ಕೂಡ ಅನಾವಶ್ಯಕವಾಗಿ ವಾಹನಗಳ ತಪಾಸಣೆ ಮಾಡಲಾಗುತ್ತಿದೆ.
ಬರೀಯ ಕಣ್ಣಿಗೆ ಕಾಣುವ ಸಾರಿಗೆ ನಿಯಮ ಉಲ್ಲಂಘನೆ ಮಾಡಿದ್ದರೆ ಮಾತ್ರ ಅಂತಹ ವಾಹನ ತಡೆಯಬೇಕು ಹಾಗೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳುಬೇಕು, ಉದಾಹರಣೆಗೆ ಸಿಗ್ನಲ್ ಜಂಪ್, ಟ್ರಿಬಲ್ ರೈಡಿಂಗ್, ಹೆಲ್ಮೆಟ್ ಧರಿಸದಿದ್ದರೆ, ಇಂತಹಗಳನ್ನ ಬಿಟ್ಟು ಸುಖಾ ಸುಮ್ಮನೇ ವಾಹನಗಳನ್ನ ತಡೆದು ದಾಖಲೆಗಳಚೆಕ್ ಮಾಡುವಂತಿಲ್ಲ ಎಂದು ಪ್ರವೀಣ್ ಸೂದ್ ಹೇಳಿದ್ದಾರೆ.
ಇದನ್ನು ಕೂಡಲೇ ಅನುಷ್ಠಾನಕ್ಕೆ ತರಬೇಕು ಎಂದು ರಾಜ್ಯದ ಎಲ್ಲಾ ಎಸ್ ಪಿ ಗಳು ಸೇರಿದಂತೆ ಕಮಿಷನರ್ ಗಳಿಗೂ ಡಿಜಿಪಿ ಆದೇಶ ಹೊರಡಿಸಿದ್ದಾರೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್.