ವಿದ್ಯುತ್ ಬಿಲ್ ಪ್ರಿಪೇಡ್ ಮಾಡಿದಂತೆ, ರೈತರು ಬೆಳೆದ ಬೆಳೆಗೆ ಬೆಲೆಯನ್ನು ಪ್ರೀಪೇಡ್ ಮಾಡಿ

IMG-20210814-WA0001

 

ದಾವಣಗೆರೆ: ಸರ್ಕಾರ ದಿನಕ್ಕೊಂದು ಹೊಸ ರೀತಿಯ ಕಾನೂನುಗಳನ್ನು ತಂದು ಜನಸಾಮಾನ್ಯರಿಗೆ,ಉದ್ಯಮಿಗಳಿಗೆ ಹಿಂಸೆ ನೀಡಿದ್ದಲ್ಲದೆ ಈಗ ಅವರ ವಕ್ರದೃಷ್ಟಿ ಅನ್ನದಾತರಾದ ರೈತರ ಮೇಲೆ ನೆಟ್ಟಿದೆ.

ರೈತರಿಗೆ ವರ್ಷಪೂರ್ತಿ ಕಷ್ಟಪಟ್ಟು ದುಡಿದು ಬೆಳೆ ಕೈಗೆ ಸಿಗುವ ಸಮಯಕ್ಕೆ ನೂರಾರು ವಿಘ್ನಗಳು, ಒಮ್ಮೆ ಬರಗಾಲ ಬಂದರೆ, ಮತ್ತೊಮ್ಮೆ ಅತಿವೃಷ್ಟಿ ಬಂದು ಎಲ್ಲಾ ಕೊಚ್ಚಿಕೊಂಡು ಹೋಗುತ್ತದೆ, ಇನ್ನೂ ಎಲ್ಲಾ ಸರಿಯಾಗಿ ಬೆಳೆ ಕೈಗೆ ಬಂದರೂ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ, ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಸ್ಥಿತಿ ಈ ಬಡ ರೈತನನದ್ದು.

ಇಂತಹ ಸಂದರ್ಭದಲ್ಲಿ ರೈತರು ತಾವು ಉಪಯೋಗಿಸುವ ವಿದ್ಯುತ್ತಿಗೆ ಮುಂಗಡವಾಗಿ ಹಣ ಕಟ್ಟುವ ಯೋಜನೆಯನ್ನು ತರಲು ಹೊರಟಿರುವ ಸರ್ಕಾರಗಳಿಗೆ ರೈತರ ಬಗ್ಗೆ ಕಾಳಜಿ ಇದೆಯೇ ಎಂಬ ಪ್ರಶ್ನೆ ಕಾಡದೇ ಇರದು… ಉಪಯೋಗಿಸುವ ವಿದ್ಯುತ್ತಿಗೆ ಪ್ರಿಪೇಯ್ಡ್ ಯೋಜನೆಯನ್ನು ತರಲು ಹೊರಟಿರುವ ಸರ್ಕಾರ, ಅದೇ ರೀತಿ ರೈತ ಬೆಳೆಯುವ ಬೆಳೆಗೆ ಪ್ರಿಪೇಯ್ಡ್ ಖರೀದಿ ಕೇಂದ್ರವನ್ನು ಪ್ರಾರಂಭಿಸಬೇಕಾಗಿ ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ, ಆಗಲಾದರೂ ತಾನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ನೇಣಿಗೆ ಶರಣಾಗುವ ರೈತನ ಜೀವ ಉಳಿಯಬಹುದು ಅಲ್ಲವೇ????

ಕೆ.ಎಲ್.ಹರೀಶ್ ಬಸಾಪುರ
ಕಾಂಗ್ರೆಸ್ ಯುವ ಮುಖಂಡ

Leave a Reply

Your email address will not be published. Required fields are marked *

error: Content is protected !!