ಕಾಂಗ್ರೆಸ್‌ನ ವಿನಾಯಕ್ ಪೈಲ್ವಾನ್ ನೂತನ ಮೇಯರ್‌.! ಬಿಜೆಪಿಯ ಯಶೋಧ ಹೆಗ್ಗೆಪ್ಪ ಉಪ ಮೇಯರ್

Vinayak Pailwan of Congress is the new mayor.  BJP's Yashoda Heggeppa is the Deputy Mayor

ಕಾಂಗ್ರೆಸ್‌ನ ವಿನಾಯಕ್ ಪೈಲ್ವಾನ್ ನೂತನ ಮೇಯರ್‌

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ನಾಲ್ಕನೇ ಅವಧಿ ಗೆ ಮೇಯರ್ ಆಗಿ ಏಳನೇ ವಾರ್ಡ್‌ನ ಕಾಂಗ್ರೆಸ್‌ನ ವಿನಾಯಕ ಪೈಲ್ವಾನ್, ಉಪ ಮೇಯರ್ ಆಗಿ ಬಿಜೆಪಿಯ   27ನೇ ವಾರ್ಡ್ ಸದಸ್ಯೆ ಯಶೋಧ ಹೆಗ್ಗೆಪ್ಪ ಆಯ್ಕೆಯಾದರು.

ಶನಿವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಮೇಯರ್ ಆಗಿ ವಿನಾಯಕ ಪೈಲ್ವಾನ್ ಅವಿರೋಧವಾಗಿ ಆಯ್ಕೆ ಯಾದರು. ಉಪ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯಶೋಧ ಹೆಗ್ಗೆಪ್ಪ ಐದು ಮತಗಳ ಅಂತರದಲ್ಲಿ ಜಯಗಳಿಸಿದರು. ಯಶೋಧ ಹೆಗ್ಗೆಪ್ಪ 29 ಮತಗಳ ಪಡೆದರೆ ಎದುರಾಳಿ ಕಾಂಗ್ರೆಸ್‌ನ ಶಿವಲೀಲಾ ಕೊಟ್ರಯ್ಯ 24 ಮತಗಳ ಪಡೆದರು.

ಚುನಾವಣಾಧಿಕಾರಿಯಾಗಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಕಾರ್ಯ  ನಿರ್ವಹಿಸಿದರು. ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆ ಸಂದರ್ಭದಲ್ಲಿನ ಹೈಡ್ರಾಮ ಈವರೆಗೆ ದಾವಣಗೆರೆ ಮಹಾನಗರ ಪಾಲಿಕೆಯ ಇತಿಹಾಸದಲ್ಲೇ ನಡೆದಿಲ್ಲ. ಅಷ್ಟೊಂದು ಹೈಡ್ರಾಮ ನಡೆಯಿತು. ಮೇಯರ್ ಸ್ಥಾನಕ್ಕೆ ವಿನಾಯಕ ಪೈಲ್ವಾನ್ ನಾಮಪತ್ರ ಸಲ್ಲಿಕೆಯಿಂದ ಹಿಡಿದು ಮೇಯರ್‌ಯಾಗಿ ಆಯ್ಕೆಯಾದ ನಂತರವೂ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪ, ತಳ್ಳಾಟ, ನೂಕಾಟ ನಿಲ್ಲಲೇ ಇಲ್ಲ.

ಮೇಯರ್ ನಮ್ಮವರು ಎಂಬುದಾಗಿ ಬಿಜೆಪಿಯವರು ಪ್ರತಿಪಾದಿಸಿದರೆ ನಮ್ಮ ಪಕ್ಷಕ್ಕೇ ಸೇರಿದವರು ಎಂದು ಕಾಂಗ್ರೆಸ್‌ನವರು ವಾದಿಸಿದರು. ವಿನಾಯಕ ಪೈಲ್ವಾನ್ ಬಿಜೆಪಿಯವರೊಂದಿಗೆ ಸೇರಿಕೊಂಡು ನಾಮಪತ್ರ ಸಲ್ಲಿಸಿ, ಬೆಂಬಲದಿಂದ ಮೇಯರ್‌ ಆದರೂ, ತಾಂತ್ರಿಕವಾಗಿ  ಕಾಂಗ್ರೆಸ್‌ನ ಸದಸ್ಯರಾಗಿಯೇ ಉಳಿದುಕೊಂಡರು. ಈ ಗೊಂದಲ ಸ್ಪಷ್ಟವಾಗಿ ಬಗೆಹರಿಯಲು ಕಾಲಾವಕಾಶ ಬೇಕಾಗುತ್ತದೆ.

ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಮೇಯರ್ ಸ್ಥಾನಕ್ಕೆ ಏರಲು ಅಗತ್ಯವಾದ ಬಹುಮತ ಹೊಂದಿದ್ದರೂ ಬಿಜೆಪಿಯಲ್ಲಿ ಪರಿಶಿಷ್ಟ ಪಂಗಡದವರು ಇರಲಿಲ್ಲ. ಹಾಗಾಗಿ ಕಾಂಗ್ರೆಸ್ ನ ವಿನಾಯಕ ಪೈಲ್ವಾನ್ ಅವರನ್ನು ಸೆಳೆದ ಬಿಜೆಪಿಯವರು. ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ನೆರವಾದರು.

ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನ ಸವಿತಾ ಹುಲ್ಮನೆ ಗಣೇಶ್ ನಾಮಪತ್ರ  ಸಲ್ಲಿಸಿದ ನಂತರದ ಕೆಲ ಹೊತ್ತಿನಲ್ಲಿ ವಿನಾಯಕ ಪೈಲ್ವಾನ್ ಮಾಜಿ ಮೇಯರ್ ಎಸ್.ಟಿ. ವೀರೇಶ್,ಸದಸ್ಯರಾದ ಕೆ. ಪ್ರಸನ್ನ ಕುಮಾರ್, ಸೋಗಿ ಶಾಂತ ಕುಮಾರ್ ಅವರೊಟ್ಟಿಗೆ ನಾಮಪತ್ರ ಸಲ್ಲಿ ಸಲು ಆಗಮಿಸುತ್ತಿದ್ದಂತೆಯೇ ವಿರೋದ

ಪಕ್ಷದ ನಾಯಕ ಜಿ.ಎಸ್. ಮಂಜುನಾಥ್, ಪಾಮೇನಹಳ್ಳಿ ನಾಗರಾಜ್, ಕೆ. ಚಮನ್‌ಸಾಬ್, ಉದಯ್‌ಕುಮಾರ್ ಇತರರು, ಬಿಜೆಪಿ ಯವರ ಜೊತೆಗೆ ಹೋಗಬೇಡ. ನಮ್ಮ ಜೊತೆಗೆ ಇರು ಎಂದು ಒತ್ತಾಯಿಸಿದರು. ವಿನಾಯಕ ಪೈಲ್ವಾನ್ ಅವರನ್ನು ಹಿಡಿದು ಸೆಳೆಯಲು ಯತ್ನಿಸಿದರು. ನಾನು ಎಲ್ಲಿಗೂ ಹೋಗಿಲ್ಲ. ಪಕ್ಷ ಬಿಟ್ಟಿಲ್ಲ..ಎಂದು ಹೇಳುತ್ತಲೇ ನಾಮಪತ್ರ ಸಲ್ಲಿಸಲು ತೆರಳಿದರು.

ನಾಮಪತ್ರ ಸಲ್ಲಿಸಿ ಹೊರ ಬಂದ ನಂತರ ಕಾಂಗ್ರೆಸ್ ಕಾರ್ಯಕರ್ತರು ಮತ್ತೆ ವಿನಾಯಕ ಪೈಲ್ವಾನ್ ಅವರಿಗೆ ಮುತ್ತಿಗೆ ಹಾಕಿದರು. ಈ ಸಂದರ್ಭದಲ್ಲಿ ತಳ್ಳಾಟ ನೂಕಾಟ ನಡೆಯಿತು. ಪರಸ್ಪರ ದಿಕ್ಕಾರ ಕೂಗಿದರು. ಪೊಲೀಸರು ಪರಿಸ್ಥಿತಿ ತಿಳಿ ಗೊಳಿಸಿದರು. ಬಿಜೆಪಿ ಸದಸ್ಯರು ವಿನಾಯಕ ಪೈಲ್ವಾನ್  ಅವರನ್ನು ಕರೆದೊಯ್ದರು.

ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಗಮಿಸಿದ ವಿನಾಯಕ ಪೈಲ್ವಾನ್ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನ ಕಂಡೊಡನೆ ಪಾದಕ್ಕೆ ನಮಸ್ಕರಿಸಿ, ಮೇಯರ್ ಆಗಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.

ಶಾಮನೂರು ಶಿವಶಂಕರಪ್ಪ ಅವರ ಸೂಚನೆಯಂತೆ ಸವಿತಾ ಹುಲ್ಮನೆ ಗಣೇಶ್ ನಾಮಪತ್ರ ಹಿಂಪಡೆದ ಕಾರಣಕ್ಕೆ ವಿನಾಯಕ ಪೈಲ್ವಾನ್ ನೂತನ ಮೇಯರ್ ಆಗಿ ಅವಿರೋಧ ವಾಗಿ ಆಯ್ಕೆಯಾದರು.ವಿನಾಯಕ ಪೈಲ್ವಾನ್ ಆಯ್ಕೆ ನಂತರವೂ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮೇಯರ್ ನಮ್ಮವರು ಎಂಬ ವಿಷಯಕ್ಕಾಗಿಯೇ ಕಿತ್ತಾಟ

ಮುಂದುವರೆಯಿತು. ಒಂದು ಹಂತದಲ್ಲಿ ಕಾಂಗ್ರೆಸ್ ಸದಸ್ಯರು ವಿನಾಯಕ ಪೈಲ್ವಾನ್ ಅವರನ್ನು ವಿಪಕ್ಷ ನಾಯಕ ಜಿ.ಎಸ್. ಮಂಜುನಾಥ್ ಕೊಠಡಿಗೆ ಕರೆದೊಯ್ದು ಬಾಗಿಲು ಹಾಕಿಕೊಂಡರು. ಸುಮಾರು ಒಂದೂವರೆ ಗಂಟೆಗೂ ಅಧಿಕ ಕಾಲ ಪ್ರಹಸನ ಮುಂದುವರೆಯಿತು.

ಅಂತಿಮ ವಾಗಿ ಬಿಜೆಪಿ ಸದಸ್ಯರು ವಿನಾಯಕ ಪೈಲ್ವಾನ್ ಅವರನ್ನು ಜೊತೆಗೆ ಕರೆದೊಯ್ದರು.

ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಮಾತನಾಡಿ, ನಮ್ಮ ಕಡೆಯಿಂದಲೇ ವಿನಾಯಕ ಪೈಲ್ವಾನ್ ಮೇಯರ್ ಆಗಿದ್ದಾರೆ ಎಂದು ತಿಳಿಸಿದರು. ಬಿಜೆಪಿಯ ಶಾಸಕರು, ವಿಧಾನ ಪರಿಷತ್ತು ಸದಸ್ಯರು ಭಾಗವಹಿಸಿದ್ದರು. ಕಾಂಗ್ರೆಸ್ ಶಾಸಕರು, ಇಬ್ಬರು ವಿಧಾನ ಪರಿಷತ್ತು ಸದಸ್ಯರು ಸಹ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!