ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ
ದಾವಣಗೆರೆ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ರಾಷ್ಟಿಯ ಸೇವಾ ಯೋಜನೆ, ರೆಡ್ ಕ್ರಾಸ್, ಸ್ವಾಪ್ ಸಹಯೋಗದೊಂದಿಗೆ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಪ್ರಾಂಶುಪಾಲರಾದ ಡಾ.ಆರ್. ಅಂಜಿನಪ್ಪನವರು ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಪ್ರತಿಯೊಬ್ಬರು ಒಂದೊ0ದು ಸಸಿ ನೆಟ್ಟು ಅದರ ಲಾಲನೆ ಪೋಷಣೆ ಮಾಡಿದರೆ ನಿಸರ್ಗದಲ್ಲಿ ಆಗುವ ಏರು ಪೇರುಗಳನ್ನು ತಡೆಗಟ್ಟಿ ಅನಾಹುತವನ್ನು ತಡೆಗಟ್ಟಬಹುದು ಎಂದು ಕರೆ ನೀಡಿದರು.
ಈ ಕರೆಯನ್ನು ಸ್ವೀಕರಿಸಿದ ಕಾಲೇಜಿನ ರಾಷ್ಟಿಯ ಸೇವಾ ಯೋಜನೆ ಸ್ವಯಂ ಸೇವಕರುಗಳಾದ ಅದಿತಿ. ಯು, ರಂಜಿತಾ. ಎಲ್, ಅಕ್ಷಯ್ ಎಂ, ಅಮೃತ. ರಮ್ಯ. ಜಿ., ಎಂ.ಮೈನಾ. ಸುದೀಪ್, ಭೀಮನಾಯ್ಕ್, ದೀಪ ಮೊದಲಾದವರು ಸಸಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಅವುಗಳನ್ನು ಬೆಳೆಸಿ, ಉಳಿಸಿ, ಪೋಷಣೆ ಮಾಡಿ ಸಂರಕ್ಷಿಸುವ ಜವಾಬ್ದಾರಿಯನ್ನು ತಗೆದುಕೊಳ್ಳುವ ಪ್ರತಿಜ್ಞೆ ಮಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿಗಳಾದ ಭೀಮಣ್ಣ ಸುಣಗಾರ, ಗಿರಿಸ್ವಾಮಿ, ಗುರುದೇವ, ನಟರಾಜ್, ಡಾ. ಶಿವಕುಮಾರ್, ಡಾ. ದಿನೇಶ್, ಡಾ. ತಿರುಮಲ, ಡಾ. ಯೋಗೀಶ್, ಡಾ. ಸೋಮಶೇಖರ್ ಉಪಸ್ಥಿತರಿದ್ದರು.
garudavoice21@gmail.com 9740365719